ಆ್ಯಪ್ನಗರ

ಬೆಳೆಸಾಲಕ್ಕೆ ಸಹಾಯಧನ ಜಮೆಗೆ ಖಂಡಿಸಿ ಪ್ರತಿಭಟನೆ

ಬ್ಯಾಡಗಿ: ಸರಕಾರ ರೈತರಿಗೆ ನೀಡುತ್ತಿರುವ ವಿವಿಧ ಯೋಜನೆಗಳ ಸಹಾಯಧನವನ್ನು ಬೆಳೆ ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿರುವ ಸರಕಾರಿ ಬ್ಯಾಂಕ್‌ ಅಧಿಕಾರಿಗಳ ನಡೆಯನ್ನು ಖಂಡಿಸಿ ರೈತ ಸಂಘದ ಸದಸ್ಯರು ಬ್ಯಾಂಕ್‌ ಬಾಗಿಲಿಗೆ ಟವಲ್‌ ಬಿಗಿದು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು.

Vijaya Karnataka 19 Oct 2019, 5:00 am
ಬ್ಯಾಡಗಿ: ಸರಕಾರ ರೈತರಿಗೆ ನೀಡುತ್ತಿರುವ ವಿವಿಧ ಯೋಜನೆಗಳ ಸಹಾಯಧನವನ್ನು ಬೆಳೆ ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿರುವ ಸರಕಾರಿ ಬ್ಯಾಂಕ್‌ ಅಧಿಕಾರಿಗಳ ನಡೆಯನ್ನು ಖಂಡಿಸಿ ರೈತ ಸಂಘದ ಸದಸ್ಯರು ಬ್ಯಾಂಕ್‌ ಬಾಗಿಲಿಗೆ ಟವಲ್‌ ಬಿಗಿದು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು.
Vijaya Karnataka Web protest against condemnation of subsidy
ಬೆಳೆಸಾಲಕ್ಕೆ ಸಹಾಯಧನ ಜಮೆಗೆ ಖಂಡಿಸಿ ಪ್ರತಿಭಟನೆ


ಬೆಳಗ್ಗೆ ಬ್ಯಾಂಕ್‌ ಆರಂಭವಾಗುತ್ತಿದ್ದಂತೆ ಬ್ಯಾಂಕ್‌ ಬಾಗಿಲಿಗೆ ಹಸಿರು ಟವಲ್‌ ಬಿಗಿದ ರೈತರು ಬ್ಯಾಂಕ್‌ನ ಆರ್‌ಒ ಸ್ಥಳಕ್ಕೆ ಬರುವಂತೆ ಆಗ್ರಹಿಸಿದರು. ನಂತರ ಸುಮಾರು 2 ಘಂಟೆಗಳ ಕಾಲ ಪ್ರತಿಭಟನೆ ನಡೆಸಿದರು.

ಆರ್‌ಓ ವರ್ತನೆಗೆ ಆಕ್ರೋಶ: ರೈತರ ಪ್ರತಿಭಟನೆ ಆರಂಭಕ್ಕೂ ಮುನ್ನವೇ ಬ್ಯಾಂಕ್‌ಗೆ ಆಗಮಿಸಿದ್ದ ಆರ್‌ಒ, ಪೊಲೀಸರು ಬ್ಯಾಂಕ್‌ಗೆ ಬರುವುವರೆಗೂ ತಮ್ಮ ಇರುವಿಕೆಯನ್ನು ಗೌಪ್ಯವಾಗಿಟ್ಟಿದ್ದರು. ದಾವಣಗೆರೆಯಿಂದ ಆರ್‌ಓ ಬರಲು ತಡವಾಗಬಹುದು ಎಂದುಕೊಂಡಿದ್ದ ರೈತರಿಗೆ ಒಳಗಡೆಯಿಂದ ಬಂದ ಆರ್‌ಒ ಕಂಡು ಅಚ್ಚರಿಯಾಯಿತಲ್ಲದೇ ಇಷ್ಟೆಲ್ಲಕೂಗಿ ಪ್ರತಿಭಟನೆ ನಡೆಸುತ್ತಿದ್ದರೂ ಒಳಗಡೆಯೆ ಕುಳಿತಿದ್ದ ಆರ್‌ಓ ಅವರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಬದಲ್ಲಿಮಾತನಾಡಿದ ರೈತ ಮುಖಂಡ ಗಂಗಣ್ಣ ಎಲಿ, ಬ್ಯಾಂಕ್‌ ಒಳಗಡೆಯೇ ಇದ್ದರೂ ರೈತರನ್ನು 2 ಗಟೆ ಸುಖಾ ಸುಮ್ಮನೆ ಕಾಯುವಂತೆ ಮಾಡಿದ ನಿಮ್ಮ ದುರಂಹಕಾರದ ವರ್ತನೆಗೆ ನಮ್ಮ ಧಿಕ್ಕಾರವಿದೆ. ರೈತರೆಂದರೆ ಕಾಲ ಕಸದಂತೆ ಕಾಣುವ ನಿಮ್ಮಂತ ಅಧಿಕಾರಿಗಳಿಂದಲೇ ಅನ್ನದಾತನಿಗೆ ಈ ಪರಿಸ್ಥಿತಿ ಬಂದಿದೆ ಎಂದು ಹರಿಹಾಯ್ದರಲ್ಲದೇ ಕ್ಷಮೆ ಕೋರುವಂತೆ ಆಗ್ರಹಿಸಿದರು.

ಕ್ಷಮೆ ಕೋರಿದ ಆರ್‌ಓ: ಮೊದಲು ರೈತರ ಕ್ಷಮೆ ಕೋರಲು ನಿರಾಕರಿಸಿದ ಆರ್‌ಓ ರೈತರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ರೈತರ ಬಗ್ಗೆ ನನಗೆ ಗೌರವವಿದೆ. ನಿಮಗೆ ಅಗೌರವ ತೋರುವ ಉದ್ದೇಶವಿರಲಿಲ್ಲಎಂದು ರೈತರ ಕ್ಷಮೆ ಕೋರಿದರು.

ಮಾತನಾಡಿದ ಕಿರಣಕುಮಾರ ಗಡಿಗೋಳ ಒಂದೇಡೆ ಸರಕಾರ ರೈತರ ಸಾಲ ಮನ್ನಾದ ಆಸೆ ತೋರಿಸಿ ರೈತರ ದಾರಿ ತಪ್ಪಿಸುತ್ತಿದೆ. ನೀವುಗಳು ಇಂತಹ ಕಟ ಬಾಕಿದಾರರಾದ ರೈತರ ಕೃಷಿ ಹೊಂಡ, ಬೆಳೆ ವಿಮೆ, ಸೇರಿದಂತೆ ಇನ್ನಿತರ ಸಹಾಯಧನಗಳನ್ನು ಜಿಲ್ಲಾಧಿಕಾರಿಗಳ ಆದೇಶವನ್ನು ಧಿಕ್ಕರಿಸಿ ಬೆಳೆ ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿದ್ದೀರಾ.? ಇದು ಮುಂದುವರಿದರೆ ಮುಂದಾಗುವ ಎಲ್ಲಸಮಸ್ಯೆಗಳಿಗೆ ನೀವೆ ಹೊಣೆಗಾರರು ಎಂದರು.

ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಕೆಲವರ ಮನೆ ಮೇಲಿನ ಸಾಲಗಳು ಚಾಲ್ತಿಯಲ್ಲಿದ್ದರೂ ಬೆಳೆ ಸಾಲ ಬಾಕಿ ಉಳಿಸಿಕೊಂಡಿದ್ದಾರೆ. ಮನೆ ಸಾಲ ಚಾಲ್ತಿಯಲ್ಲಿದ್ದರೂ ಅಂಥವರ ಮನೆಗಳಿಗೆ ನೋಟೀಸ್‌ ನೀಡಿ ಮಾನಸಿಕವಾಗಿ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಧೀರ್ಘಾವಧಿ ಸಾಲ, ಟ್ಯ್ರಾಕ್ಟರ್‌ ಸಾಲ, ಓಟಿಎಸ್‌ ಮಾಡಲು ನಿರಾಕರಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ..? ಎಲ್ಲಸಮಸ್ಯೆಗಳನ್ನು ಪರಿಹರಿಸಿದ್ದಲ್ಲಿಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು

ರುದ್ರನಗೌಡ ಕಾಡನಗೌಡ್ರ ಸೇರಿದಂತೆ ಇನ್ನಿತರರು ಮಾತನಾಡಿದರು. ಸುರೇಶ ಛಲವಾದಿ ಪ್ರವೀಣ ಹೊಸಗೌಡ್ರ, ಶಾಂತಪ್ಪ ಕೋಟಿಯವರ ಪಾಂಡುರಂಗ ಸುತಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನವೆಂಬರ್‌ 6 ನೇ ತಾರೀಕಿನೊಳಗೆ ರೈತರ ಎಲ್ಲಸಮಸ್ಯೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವುದಾಗಿ ಆರ್‌ಓ ಅವರು ಭರವಸೆ ನೀಡಿದ ನಂತರ ರೈತರು ಪ್ರತಿಭಟನೆಯಿಂದ ಹಿಂದೆ ಸರಿದರು.

ಪೋಟೊ-18ಬಿವೈಡಿ1ಏಯಿಂದಡಿ-ವಿವಿಧ ಸಹಾಯಧನದ ಹಣವನ್ನು ಬೆಳೆ ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿರುವ ಸರಕಾರಿ ಬ್ಯಾಂಕ್‌ ಅಧಿಕಾರಿಗಳ ನಡೆ ಖಂಡಿಸಿ ರೈತರ ಸಂಘದ ಸದಸ್ಯರು ಬ್ಯಾಂಕ್‌ ಬಾಗಿಲಿಗೆ ಹಸಿರು ಟವಲ್‌ ಬಿಗಿದು ಪ್ರತಿಭಟನೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ