ಆ್ಯಪ್ನಗರ

ಅಂಚೆ ಇಲಾಖೆ ನೌಕರರಿಂದ ಪ್ರತಿಭಟನೆ

ರಾಣೇಬೆನ್ನೂರ: ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್‌ ಬಂದ್‌ ಬೆಂಬಲಿಸಿ ಅಂಚೆ ಇಲಾಖೆ ನೌಕರರು ಬುಧವಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Vijaya Karnataka 10 Jan 2019, 5:00 am
ರಾಣೇಬೆನ್ನೂರ: ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್‌ ಬಂದ್‌ ಬೆಂಬಲಿಸಿ ಅಂಚೆ ಇಲಾಖೆ ನೌಕರರು ಬುಧವಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Vijaya Karnataka Web protest by postal department employees
ಅಂಚೆ ಇಲಾಖೆ ನೌಕರರಿಂದ ಪ್ರತಿಭಟನೆ


ಈ ಸಮಯದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಕಾರ್ಮಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಒಗ್ಗಟ್ಟಿನ ಹೋರಾಟ ನಡೆಸಬೇಕಾಗಿದೆ. ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎನ್‌ಪಿಎಸ್‌ ನೌಕರರ ಭವಿಷ್ಯದ ಬದುಕು ಕಷ್ಟಕರವಾಗಿದೆ. ಸೇವಾ ನಿವೃತ್ತಿ ನಂತರ ನೀಡಲಾಗುವ ಅತ್ಯಲ್ಪ ಹಣ ಆರೋಗ್ಯ ಸಂಬಂಧಿ ಖರ್ಚಿಗೆ ಸಾಕಾಗುವುದಿಲ್ಲ. ಇನ್ನು ಸಂಸಾರ ಸಾಗಿಸುವುದು ಸಾಧ್ಯವಾಗುವುದಿಲ್ಲ. ಇದನ್ನು ಮನಗಂಡು ಕೇಂದ್ರ ಸರಕಾರ ಅಂಚೆ ಇಲಾಖೆ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.

ನರಸಿಂಹಮೂರ್ತಿ ಶಿರಹಟ್ಟಿ, ಛಾಯಾ ಜಡೇಕರ, ವೀರೇಶ ಶಿಡಗನಹಾಳ, ಶಾಂತಪ್ಪ ಮಡಿವಾಳರ, ಪುಟ್ಟರಾಜ ಗೊಡ್ಡೆಮ್ಮಿ, ಗೋಪಾಲ ಲಮಾಣಿ, ಲೋಕೇಶ ಎನ್‌., ದೇವೇಂದ್ರ ನಾಯ್ಕ್‌, ನಾಗರಾಜ ಗೌರಂ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ