ಆ್ಯಪ್ನಗರ

ಎಲ್ಲ ಸೇವೆಗಳಿಗಿಂತ ಶಿಕ್ಷ ಕ ಸೇವೆ ಶ್ರೇಷ್ಠ

ಕುಮಾರಪಟ್ಟಣ : ಶಿಕ್ಷ ಕ ವೃತ್ತಿ ಬಹು ಶ್ರೇಷ್ಠ, ಕತ್ತಲಿನಿಂದ ಬೆಳಕಿನೆಡೆಗೆ ಸಮಾಜ ಪರಿವರ್ತನೆಗೆ ಬೆಳಕಾಗಬಹುದಾದ ಮಕ್ಕಳನ್ನು ಸೃಷ್ಠಿ ಮಾಡುವ ಗುರುತರವಾದ ಜವಾಬ್ದಾರಿ ಶಿಕ್ಷ ಕರಿಗೆ ಮೇಲಿದೆ ಎಂದು ಮಾಕನೂರ ಕ್ಲಸ್ಟರ್‌ ಸಿ ಆರ್‌ ಪಿ ನಾಗರಾಜ ಅಣ್ಣೇರ ಹೇಳಿದರು.

Vijaya Karnataka 1 Aug 2019, 5:00 am
ಕುಮಾರಪಟ್ಟಣ : ಶಿಕ್ಷ ಕ ವೃತ್ತಿ ಬಹು ಶ್ರೇಷ್ಠ, ಕತ್ತಲಿನಿಂದ ಬೆಳಕಿನೆಡೆಗೆ ಸಮಾಜ ಪರಿವರ್ತನೆಗೆ ಬೆಳಕಾಗಬಹುದಾದ ಮಕ್ಕಳನ್ನು ಸೃಷ್ಠಿ ಮಾಡುವ ಗುರುತರವಾದ ಜವಾಬ್ದಾರಿ ಶಿಕ್ಷ ಕರಿಗೆ ಮೇಲಿದೆ ಎಂದು ಮಾಕನೂರ ಕ್ಲಸ್ಟರ್‌ ಸಿ ಆರ್‌ ಪಿ ನಾಗರಾಜ ಅಣ್ಣೇರ ಹೇಳಿದರು.
Vijaya Karnataka Web HVR-31 KPM 02
ಕುಮಾರಪಟ್ಟಣ ಸಮೀಪದ ನಾಗೇನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷ ಕ ಸತ್ಯನಾರಾಯಣ ತಳವಾರ ಬುಧವಾರ ನಿವೃತ್ತಿ ಹೊಂದಿದ ಹಿನ್ನೆಲೆ ಮಾಕನೂರ ಕ್ಲಸ್ಟರ್‌ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ಬುಧವಾರ ರಾಣೇಬೆನ್ನೂರು ತಾಲೂಕಿನ ನಾಗೇನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷ ಕ ಸತ್ಯನಾರಾಯಣ ತಳವಾರ ಅವರಿಗೆ ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಸೂಚನೆ ಮೇರೆಗೆ ಮಾಕನೂರ ಕ್ಲಸ್ಟರ್‌ ವ್ಯಾಪ್ತಿಯಿಂದ ಏರ್ಪಡಿಸಿದ್ದ ಸನ್ಮಾನಿಸಿ ಗೌರವಿಸಿ ಮಾತನಾಡಿ, ಸತ್ಯನಾರಾಯಣ ಶಾಲಾ ಅವಧಿಗಿಂತ ಮುನ್ನ ಶಾಲೆಗೆ ಬಂದು ಮಾಸಿಕ ವರದಿ ಮತ್ತು ನಿತ್ಯದ ದಾಖಲೆ ಮಾಹಿತಿ ಪತ್ರಿಕೆಗಳನ್ನು ಸೂಚನೆ ಬರುವ ಮೊದಲು ಇಲಾಖೆಗೆ ತಲುಪಿಸುತ್ತಿದ್ದ ಏಕೈಕ ವ್ಯಕ್ತಿ. ಇವರ ಕಾರ್ಯವೈಖರಿಯನ್ನು ಉಳಿದ ಶಿಕ್ಷ ಕರು ಅಳವಡಿಸಿಕೊಳ್ಳಿ ಎಂದು ಹೇಳಿದರು,

ಬಳಿಕ ಸನ್ಮಾನ ಸ್ವೀಕರಿಸಿ ನಿವೃತ್ತ ಮುಖ್ಯ ಶಿಕ್ಷ ಕ ಸತ್ಯನಾರಾಯಣ ಮಾತನಾಡಿ, ಎಲ್ಲ ಸೇವೆಗಳಿಗಿಂತ ಶಿಕ್ಷ ಕ ಸೇವೆ ಶ್ರೇಷ್ಠ. ಸೇವಾ ಅವಧಿಯಲ್ಲಿ ಅಧಿಕಾರಿಗಳೊಂದಿಗೆ ಮತ್ತು ವಿದ್ಯಾರ್ಥಿಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಕಾರ್ಯ ನಿರ್ವಹಿಸಿದರೆ ಸಾಮಾಜಿಕವಾಗಿ ಬೆಳಕಿಗೆ ಬರಲು ಸಾಧ್ಯ ಎಂದು ಹೇಳಿದರು.

ಮುಖ್ಯ ಶಿಕ್ಷ ಕ ಬಿ.ವಿ.ದುರುಗಪ್ಪನವರ, ಮಂಜುಳಾ, ಜಿ., ಬಿ.ವಿ.ಶ್ಯಾಮನೂರು, ನಾಗರಾಜ ಮತ್ತೂರು, ಅಶೋಕ್‌, ಮಲ್ಲಿಕಾರ್ಜುನ ಆರ್‌, ಕರಿಯಮ್ಮ ಜಿ, ಲಕ್ಷ ್ಮವ್ವ ನಲವಾಗಲ, ಪ್ರೇಮಿಲವ್ವ ಜಾಡರ್‌ ನಾಗರಾಜ ಹುಲಿಗಿನಹೊಳೆ, ಜಗದೀಶ ಕಿಷ್ಟಪ್ಪನವರ, ಮಾರುತಿ ಬಡಿಗೇರ, ರಾಜು ಬಣಕಾರ, ಮಹದೇವಿ ದೇವರಯಲ್ಲಕ್ಕನವರ, ಎಸ್‌ಡಿಎಂಸಿ, ಸರ್ವ ಸದಸ್ಯರು ಮುದೇನೂರ, ಮಾಕನೂರ, ಕವಲೆತ್ತು, ನದಿಹರಳಹಳ್ಳಿ, ಕೊಡಿಯಾಲ,ಹುಲಿಕಟ್ಟಿ ಶಾಲೆಗಳ ಶಿಕ್ಷ ಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ