ಆ್ಯಪ್ನಗರ

ಮಳೆ, ಗಾಳಿ ಅಬ್ಬರ: ಹಾನಿ ಪರಿಶೀಲನೆ

ಹಾನಗಲ್ಲ: ಗಾಳಿ, ಮಳೆಯಿಂದ ಹಾನಿಗೊಂಡ ತಾಲೂಕಿನ ವಿವಿಧ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿದ್ದ ಅಧಿಕಾರಿಗಳ ತಂಡವು ನಷ್ಟದ ಸಮೀಕ್ಷೆ ಕೈಗೊಂಡಿತು.

Vijaya Karnataka 30 Apr 2019, 5:00 am
ಹಾನಗಲ್ಲ: ಗಾಳಿ, ಮಳೆಯಿಂದ ಹಾನಿಗೊಂಡ ತಾಲೂಕಿನ ವಿವಿಧ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿದ್ದ ಅಧಿಕಾರಿಗಳ ತಂಡವು ನಷ್ಟದ ಸಮೀಕ್ಷೆ ಕೈಗೊಂಡಿತು.
Vijaya Karnataka Web HVR-29HGL1


ತಹಶೀಲ್ದಾರ್‌ ಗಂಗಪ್ಪ.ಎಂ, ತೊಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ ಮತ್ತು ಕಂದಾಯ ನಿರೀಕ್ಷ ಕರು, ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳು ಜಖಂಗೊಂಡ ಮನೆಗಳ ಹಾನಿ ಮತ್ತು ತೋಟಗಾರಿಕೆ ಬೆಳೆಗಳ ನಷ್ಟದ ಮಾಹಿತಿ ಕಲೆ ಹಾಕಿದರು.

ತಾಲೂಕಿನ ನರೇಗಲ್‌, ಅಕ್ಕಿವಳ್ಳಿ, ಅರಳೇಶ್ವರ, ಸುರಳೇಶ್ವರ, ಅಕ್ಕಿಆಲೂರ, ಹಾವಣಗಿ, ಕಲ್ಲಾಪೂರ, ಮೂಡೂರ, ಚಿಕ್ಕಾಂಶಿ ಹೊಸೂರ ಗ್ರಾಮಗಳಿಗೆ ಭೇಟಿ ನೀಡಿದ್ದರು. ನಷ್ಟದ ವಿವರವನ್ನು ಗ್ರಾಮ ಲೆಕ್ಕಾಧಿಕಾರಿಗಳು ಪಡೆದುಕೊಂಡರು.

ಸುರಳೇಶ್ವರ, ಅರಳೇಶ್ವರ ಗ್ರಾಮ ವ್ಯಾಪ್ತಿಯ ಬಾಳೆ ತೋಟಗಳು ಸಂಪೂರ್ಣವಾಗಿ ನೆಲಕಚ್ಚಿದ್ದು, 3 ವರ್ಷದ ಅಡಕೆ ಬೆಳೆ ಸುಮಾರು 3 ಎಕರೆ ನಾಶಗೊಂಡಿರುವುದನ್ನು ಅಧಿಕಾರಿಗಳು ಪರಿಶೀಲಿಸಿದರು.

ಅಕಾಲಿಕ ಮಳೆ ಮತ್ತು ರಭಸದ ಗಾಳಿ ಅಬ್ಬರಕ್ಕೆ ಪಟ್ಟಣದ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಕಂದಾಯ ಇಲಾಖೆ ನಷ್ಟ ಪರಿಹಾರದ ವ್ಯವಸ್ಥೆಯನ್ನು ಕೈಗೊಳ್ಳಲಿದೆ. ಹಾನಗಲ್ಲ, ನರೇಗಲ್‌, ಅಕ್ಕಿವಳ್ಳಿ ಗ್ರಾಮಗಳಲ್ಲಿ ಮನೆಗಳು ಬಾಗಶಃ ಜಖಂಗೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಮಂಗಳವಾರ ಮನೆಗಳ ಹಾನಿ ಬಗ್ಗೆ ಸಂಪೂರ್ಣ ವರದಿ ಸಿಗಲಿದೆ ಎಂದು ತಹಶೀಲ್ದಾರ್‌ ಗಂಗಪ್ಪ ಹೇಳಿದರು.

ತೋಟಗಾರಿಕೆ ನಿರ್ದೇಶಕ ಮಂಜುನಾಥ ಬಣಕಾರ, ಗಾಳಿಯ ಹೊಡೆತಕ್ಕೆ ಬಾಳೆ ಮತ್ತು ಮಾವು ಬೆಳೆ ಹೆಚ್ಚು ಹಾನಿಗೊಂಡಿದೆ, ತಾಲೂಕಿನಲ್ಲಿ ಸುಮಾರು 250 ಹೆಕ್ಟರ್‌ ಪ್ರದೇಶದ ಬಾಳೆ ಬೆಳೆ ಹಾಗೂ 500 ಹೆಕ್ಟರ್‌ ಮಾವು ಬೆಳೆ ನಷ್ಟಗೊಂಡಿರುವ ವರದಿ ಲಭ್ಯವಾಗಿದೆ. ಮಂಗಳವಾರ ಮತ್ತೆ ತೋಟಗಾರಿಕೆ ಬೆಳೆಗಳ ನಷ್ಟದ ಪರಿಶೀಲನೆ ನಡೆಸಲಾಗುತ್ತದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ