ಆ್ಯಪ್ನಗರ

ಇನ್ನೆರಡು ದಿನಗಳಲ್ಲಿ ಮಳೆ ಸಂಭವ

ಹಾವೇರಿ: ದಕ್ಷಿಣ ಒಳನಾಡಿನಲ್ಲಿ ಮಳೆ ಆಗುವ ರೀತಿಯಲ್ಲೇ ಬಿಸಿಲಿಗೆ ತತ್ತರಿಸುತ್ತಿರುವ ಉತ್ತರ ಒಳ ನಾಡಿನಲ್ಲೂ ಇನ್ನೆರಡು ದಿನಗಳಲ್ಲಿ ಮಳೆ ಬೀಳಲಿದೆ ಎನ್ನುವ ಮಾಹಿತಿ ಕರ್ನಾಟಕ ನೈಸರ್ಗಿಕ ವಿಪತ್ತು ಕೋಶದ ಮೂಲಗಳಿಂದ ವ್ಯಕ್ತವಾಗಿದೆ.

Vijaya Karnataka 23 May 2019, 5:00 am
ಹಾವೇರಿ: ದಕ್ಷಿಣ ಒಳನಾಡಿನಲ್ಲಿ ಮಳೆ ಆಗುವ ರೀತಿಯಲ್ಲೇ ಬಿಸಿಲಿಗೆ ತತ್ತರಿಸುತ್ತಿರುವ ಉತ್ತರ ಒಳ ನಾಡಿನಲ್ಲೂ ಇನ್ನೆರಡು ದಿನಗಳಲ್ಲಿ ಮಳೆ ಬೀಳಲಿದೆ ಎನ್ನುವ ಮಾಹಿತಿ ಕರ್ನಾಟಕ ನೈಸರ್ಗಿಕ ವಿಪತ್ತು ಕೋಶದ ಮೂಲಗಳಿಂದ ವ್ಯಕ್ತವಾಗಿದೆ.
Vijaya Karnataka Web rain is likely to occur in another two days
ಇನ್ನೆರಡು ದಿನಗಳಲ್ಲಿ ಮಳೆ ಸಂಭವ


ಕನಿಷ್ಟ 35 ರಿಂದ 38 ರ ಆಸುಪಾಸಿನಲ್ಲಿರುವ ತಾಪಮಾನದ ಪ್ರಕಾರ, ಚಿತ್ರದುರ್ಗ ಮತ್ತು ಡಾವಣಗೇರಿ ಹೊರತುಪಡಿಸಿ ಹಾವೇರಿ ಸೇರಿದಂತೆ ಬೀದರ್‌ವರೆಗಿನ ಉತ್ತರ ಕರ್ನಾಟಕದ ಭಾಗಗಳಲ್ಲಿ ಮಳೆ ಬೀಳುವ ಸಾಧ್ಯತೆಗಳಿವೆ. ಈ ಮಳೆ ಭೂಮಿಯನ್ನು ತಂಪಾಗಿಸಿದರೂ ಬಿತ್ತನೆ ಮಾಡಲು ಪೂರಕವಾಗುವುದಿಲ್ಲ ಎನ್ನುವ ಮಾತು ವ್ಯಕ್ತವಾಗಿದೆ.

ಈ ಮಳೆ ಮುಂಗಾರು ಆಶಾದಾಯಕ ಎನ್ನುವ ಮಾತುಗಳಿಗೆ ಅಪವಾದವಾಗಲಿದ್ದು, ಈ ಬಾರಿಯ ಮುಂಗಾರು ಜೂನ್‌ ತಿಂಗಳಲ್ಲಿ ಆರಂಭಗೊಂಡರೂ ಜುಲೈ ತಿಂಗಳು ಸೇರಿದಂತೆ ಮುಂಗಾರು ಆರಂಭದ ಜೂನ್‌ ಜತೆ ಜುಲೈ ತಿಂಗಳ ಮಳೆ ಸರಾಸರಿ ಪ್ರಮಾಣಕ್ಕೆ ಕೊರತೆಗೂ ಕಾರಣವಾಗಲಿದೆ ಎನ್ನುವ ಅಂಶ ಆತಂಕಕ್ಕೆ ಕಾರಣವಾಗಿದೆ.

ಅಂಡಮಾನ್‌-ನಿಕೋಬಾರ, ಕೇರಳ ಮತ್ತು ಆಂಧÜ್ರದಿಂದ ಪ್ರವೇಶಿಸುವ ಈ ಬಾರಿಯ ಮುಂಗಾರು ಎಲ್‌ ನೀನೋ ಚಂಡಮಾರುತ ಕಾರಣಕ್ಕೆ ತಾಪಮಾನದಲ್ಲಿ ಏರಳಿತ ಸಾಧ್ಯತೆಗಳ ನಿರೀಕ್ಷೆಗೆ ಸಾಕ್ಷಿಯಾಗಲಿದೆ. ನಂತರದ ಮಳೆ ಸಮೃದ್ಧವಾಗಲಿದ್ದರೂ ದೇಶದಲ್ಲಿ ಈ ಬಾರಿಯೂ ಮುಂಗಾರು ಮಳೆ ಪ್ರಮಾಣದಲ್ಲಿ ಅಲ್ಪಮಟ್ಟಿನ ಕೊರತೆ ಎದುರಿಸಬೇಕಿದೆ ಎನ್ನುವ ಎಚ್ಚರಿಕೆ ಸಹ ವ್ಯಕ್ತವಾಗಿದೆ.

ಮಳೆ ಮತ್ತು ತಾಪಮಾನ ಋುತುಮಾನ ಏರು-ಪೇರಿಗೆ ಕಾರಣವಾಗಲಿದೆ. ಈ ಹಿನ್ನೆಲೆಯಲ್ಲಿ ರೈತರು ಕೃಷಿ ಇಲಾಖೆ ಮೂಲಕ ಮಾಹಿತಿ ಪಡೆದು ಬಿತ್ತನೆ ಕೈಗೊಳ್ಳುವುದು ಉತ್ತಮ ಎನ್ನುವ ಸಂದೇಶ ಸಹ ರವಾನಿಸಿದೆ. ಇನ್ನೆರಡು ದಿನ ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಸುರಿವ ಮಳೆ ಬಿತ್ತನೆಗೆ ಹದ ತರಬಹುದೇ ವಿನಃ ಬಿತ್ತುವುದಕ್ಕಲ್ಲ. ಹಾಗೆಂದು ಕೈಕಟ್ಟಿ ಕೂಡ್ರುವುದೂ ತರವಲ್ಲ ಎನ್ನುವ ಗೊಂದಲ ಸಹ ವ್ಯಕ್ತವಾಗಿದೆ. ಕಾಲ ಕಾಲದ ಋುತುಮಾನ ಪರಿಸ್ಥಿತಿ ಅವ ಲೋಕಿಸಿ-ಆಧರಿಸಿ ಹವಾಮಾನ ಮುನ್ಸೂಚನೆ ನೀಡಬಹುದೇ ವಿನಃ ನಿಖರವಾಗಿ ಹೇಳಲು ಅಸಾಧ್ಯ ಎನ್ನುವ ಸ್ಪಷ್ಠನೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ