ಆ್ಯಪ್ನಗರ

ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಬೆಳೆಸಿ

ಕುಮಾರಪಟ್ಟಣ: ಸದೃಢ ಸಮಾಜ ನಿರ್ಮಿಸುವ ಕಾರ್ಯದಲ್ಲಿಶಿಕ್ಷಕರು, ಪಾಲಕರು, ಮಕ್ಕಳು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಗ್ರಾಸಿಂ ಘಟಕದ ಹಿರಿಯ ಮುಖ್ಯಸ್ಥ ಅಜಯಕುಮಾರ್‌ ಗುಪ್ತಾ ಹೇಳಿದರು.

Vijaya Karnataka 20 Nov 2019, 5:00 am
ಕುಮಾರಪಟ್ಟಣ: ಸದೃಢ ಸಮಾಜ ನಿರ್ಮಿಸುವ ಕಾರ್ಯದಲ್ಲಿಶಿಕ್ಷಕರು, ಪಾಲಕರು, ಮಕ್ಕಳು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಗ್ರಾಸಿಂ ಘಟಕದ ಹಿರಿಯ ಮುಖ್ಯಸ್ಥ ಅಜಯಕುಮಾರ್‌ ಗುಪ್ತಾ ಹೇಳಿದರು.
Vijaya Karnataka Web raise children as the property of the country
ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಬೆಳೆಸಿ


ಇಲ್ಲಿನ ಆದಿತ್ಯ ಬಿರ್ಲಾ ಪಬ್ಲಿಕ್‌ ಶಾಲೆ ಹಾಗೂ ಪಾಲಿಫೈಬರ್ಸ್ ಜ್ಯುನಿಯರ್‌ ಕಾಲೇಜಿನಲ್ಲಿಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನ, ತಂತ್ರಜ್ಞಾನ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ದೇಶವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿದಿಟ್ಟ ಹೆಜ್ಜೆ ಇಡಬೇಕಿದೆ. ಮಕ್ಕಳ ಶೈಕ್ಷಣಿಕ ಸಾಧನೆ ಜೊತೆಗೆ ಅವರನ್ನು ಮನೆಯ ಆಸ್ತಿ ಮಾಡದೇ ದೇಶದ ಆಸ್ತಿಯಾಗಿ ರೂಪಿಸುವಲ್ಲಿಪೋಷಕರು ಹಾಗೂ ಶಿಕ್ಷಕರು ನಿರ್ಣಾಯಕ ಪಾತ್ರ ವಹಿಸಬೇಕು ಎಂದರು.

ಬಡತನ, ಅನಕ್ಷರತೆ, ಅತಿಯಾದ ಜನಸಂಖ್ಯೆ, ಮಾಲಿನ್ಯ, ಭ್ರಷ್ಟಾಚಾರ, ಕೋಮುವಾದ, ಭಯೋತ್ಪಾದನೆ ಕಾರಣಗಳಿಂದಾಗಿ ದೇಶದ ಪ್ರಗತಿ ಕುಂಠಿತಗೊಳ್ಳುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಅಂಕ ತರುವ ಯಂತ್ರವಾಗಿ ರೂಪಿಸದೆ ಅವರಿಗೆ ಮೌಲ್ಯಶಿಕ್ಷಣ ನೀಡಿ ಚಾರಿತ್ರತ್ರ್ಯ ಹಾಗೂ ಸಂಸ್ಕಾರವುಳ್ಳ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯೆ ನೀತಾ ಮೆನನ್‌ ಶೈಕ್ಷಣಿಕ ವರ್ಷದ ಕಾರ್ಯ ಚಟುವಟಿಕೆ ಮತ್ತು ಪ್ರಗತಿ ಕುರಿತು ವರದಿ ವಾಚನ ಮಾಡಿದರು. ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳು ಕೃಷ್ಣ, ರಾಧೆಯರ ವೇಷ ಧರಿಸಿ ಗಮನ ಸೆಳೆದರೆ, ಉಳಿದಂತೆ ನಾಟಕ, ಜಾನಪದ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು. ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.

ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಅರುಣ ಮಿಶ್ರಾ, ಮಹಿಳಾ ಕ್ಲಬ್‌ನ ಅಧ್ಯಕ್ಷೆ ನಿಧಿ ಗುಪ್ತಾ, ಕಾಲೇಜಿನ ಸಂಸತ್‌ ಪ್ರತಿನಿಧಿ ಅನಶ್ವರ ಮೆನನ್‌, ಜ್ಯೋತಿ, ಪರಿಸರ ಪ್ರೇಮಿ ಡಾ. ಜಿ.ಜೆ ಮೆಹೆಂದಳೆ ಸೇರಿದಂತೆ ಗ್ರಾಸಿಂ ಘಟಕದ ಪದಾಧಿಕಾರಿಗಳು, ಶಿಕ್ಷಕರು, ಉಪನ್ಯಾಸಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ