ಆ್ಯಪ್ನಗರ

ರಾಣೇಬೆನ್ನೂರ ನಗರಸಭೆ: ತಂಗುದಾಣ ಬಳಿಯ ಮಣ್ಣು ತೆರವು

ಕುಮಾರಪಟ್ಟಣ : ರಾಣೇಬೆನ್ನೂರು ತಾಲೂಕಿನ ಮುದೇನೂರ ಗ್ರಾಮದ ಬಸ್‌ ತಂಗುದಾಣದ ಬಳಿ ನಗರಸಭೆಯ ಗುತ್ತಿಗೆದಾರರು ಪೈಪ್‌ಲೈನ್‌ ಅಳವಡಿಸುವ ಸಮಯದಲ್ಲಿಸಾರ್ವಜನಿಕರು ಸಂಚಾರ ಮಾಡುವ ಕೇಂದ್ರ ಸ್ಥಳದ ಬಳಿ ಮಣ್ಣಿನ ಗುಡ್ಡೆ ಹಾಕಿ ಸಂಚಾರಕ್ಕೆ ತೊಂದರೆ ಮಾಡಿದ್ದರು, ಈ

Vijaya Karnataka 8 Sep 2020, 5:00 am
ಕುಮಾರಪಟ್ಟಣ : ರಾಣೇಬೆನ್ನೂರು ತಾಲೂಕಿನ ಮುದೇನೂರ ಗ್ರಾಮದ ಬಸ್‌ ತಂಗುದಾಣದ ಬಳಿ ನಗರಸಭೆಯ ಗುತ್ತಿಗೆದಾರರು ಪೈಪ್‌ಲೈನ್‌ ಅಳವಡಿಸುವ ಸಮಯದಲ್ಲಿಸಾರ್ವಜನಿಕರು ಸಂಚಾರ ಮಾಡುವ ಕೇಂದ್ರ ಸ್ಥಳದ ಬಳಿ ಮಣ್ಣಿನ ಗುಡ್ಡೆ ಹಾಕಿ ಸಂಚಾರಕ್ಕೆ ತೊಂದರೆ ಮಾಡಿದ್ದರು, ಈ ಸಮಸ್ಯೆ ಕುರಿತು ಭಾನುವಾರ ವಿಜಯ ಕರ್ನಾಟಕ ಬಸ್‌ ತಂಗುದಾಣದ ಮಣ್ಣನ್ನು ತೆರವು ಮಾಡಿ ಎಂಬ ಶೀರ್ಷಿಕೆಯಡಿ ವರದಿ ಪ್ರಕಟ ಮಾಡಿತ್ತು.
Vijaya Karnataka Web 05  KPM  01  BUS STAND _23
ಕುಮಾರಪಟ್ಟಣ ಸಮೀಪದ ಮುದೇನೂರ ಗ್ರಾಮದಲ್ಲಿಸೋಮವಾರ ನಗರಸಭೆಯವರು ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.


ಭಾನುವಾರ ರಜಾದಿನವಾದರೂ ನಗರಸಭೆ ಆಯುಕ್ತ ಡಾ, ಎನ್‌ ಮಹಾಂತೇಶ್‌, ವರದಿಗೆ ಸ್ಪಂದಿಸಿ ಮಣ್ಣನ್ನು ತೆರವುಗೊಳಿಸಲು ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳೊಂದಿಗೆ ಹಾಗೂ ಗುತ್ತಿಗೆದಾರರಲ್ಲಿವಿಷಯ ಪ್ರಸ್ತಾಪಿಸಿದ ಹಿನ್ನೆಲೆ ಸೂಕ್ತ ಕ್ರಮ ಕೈಗೊಂಡು ತಮ್ಮ ಸೇವೆಯ ಪ್ರಾಮಾಣಿಕತೆ ತೋರಿದ್ದಾರೆಂದು ಸ್ಥಳೀಯ ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.

ಈ ಸಮಸ್ಯೆ ಕುರಿತು ಸ್ಥಳಕ್ಕೆ ಧಾವಿಸಿದ ತಾಲೂಕು ರೈತ ಮುಖಂಡ ಕೃಷ್ಣಮೂರ್ತಿ ಲಮಾಣಿ ಮಾತನಾಡಿ, ನಮ್ಮ ನಗರಸಭೆ ಆಯುಕ್ತರು ಪತ್ರಿಕೆಯಲ್ಲಿವರದಿ ಪ್ರಕಟಗೊಂಡು 24 ಗಂಟೆಯೊಳಗೆ ಮಣ್ಣನ್ನು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತೇನೆ, ನಿಮ್ಮ ನಿರ್ಣಯದ ದಿನಾಂಕವನ್ನು ರದ್ದುಗೊಳಿಸಿ ಎಂಬ ದೂರವಾಣಿ ಕರೆಯಲ್ಲಿತಿಳಿಸಿದ ಮಾತಿನಂತೆ ಆಯುಕ್ತರು ಕಾರ್ಯನಿರ್ವಹಿಸಿದ್ದಾರೆ, ಈ ಹಿಂದೆ ಹತ್ತು ಹಲವಾರು ಸಮಸ್ಯೆಗಳ ಕುರಿತು ಅನೇಕ ಮನವಿಗಳನ್ನು ಸಲ್ಲಿಸಿದಾಗ ಆಯುಕ್ತರು ಸ್ಪಂದಿಸಿ ಬೇಡಿಕೆ ಈಡೇರಿಸಿದ್ದಾರೆ, ಆದ್ದರಿಂದ ಸೆ.19 ರ ಮುಷ್ಕರವನ್ನು ಕೈಬಿಡಲಾಗಿದೆ ಎಂದು ಲಮಾಣಿ ಸ್ಪಷ್ಠಪಡಿಸಿದರು.

ಮುದೇನೂರ ಗ್ರಾಪಂ ಅಭಿವೃಧ್ಧಿ ಅಧಿಕಾರಿ ಹುಚ್ಚೆಂಗಪ್ಪ ಮಾದರ್‌, ಕಾರ್ಯದರ್ಶಿ ಗಣೇಶ ಬಾನಿ, ಮುಖಂಡರಾದ ಕಲ್ಲಪ್ಪ ಜುಂಜೇರ, ರಾಮಪ್ಪ ಸಿದ್ದಮ್ಮನವರ, ಹೊನ್ನಪ್ಪ ಮಾಳಗಿ, ಚಂದ್ರಶೇಖರ ಪೂಜಾರ, ಸಂತೋಷ ಬಿ, ಗ್ರಾಮೀಣ ಪುನರ್ವಸತಿ ವಿಶೇಷಚೇತನ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ