ಹಾವೇರಿ: ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿ ಮೆರವಣಿಗೆ ಸಂದರ್ಭದಲ್ಲಿ ನಡೆದ ಘಟನೆಗೆ ಪ್ರತಿಯಾಗಿ ಮಂಗಳವಾರ ಹಿಂದೂ ಕಾರ್ಯಕರ್ತರು ರಟ್ಟೀಹಳ್ಳಿಯಲ್ಲಿ ಬೈಕ್ ರಾರಯಲಿ (Bike Rally) ನಡೆಸಿದರು. ಶಾಂತಿಯುತವಾಗಿಯೇ ಸಾಗಿದ್ದ ರ್ಯಾಲಿಯ ವೇಳೆ ದಿಢೀರ್ ಕಲ್ಲು ತೂರಾಟ ನಡೆದು ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಹಿಂದೂ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸುತ್ತಿದ್ದ ವೇಳೆ ಕಾರಂಜಿ ವೃತ್ತದಲ್ಲಿ ಕಲ್ಲೂತೂರಾಟ ನಡೆಯಿತು. ರ್ಯಾಲಿಯಲ್ಲಿ ಭಾಗವಹಿಸಿದ್ದವರಿಂದಲೇ ಕಲ್ಲು ತೂರಾಟ ನಡೆದಿದೆ. ಪ್ರಾರ್ಥನಾ ಮಂದಿರ ಹಾಗೂ ಮನೆಗಳ ಮೇಲೆ ಕಲ್ಲೂ ತೂರಾಟ ನಡೆಸಲಾಗಿದೆ.
ಕಲ್ಲು ತೂರಾಟದ ವೇಳೆ ಹಲವು ಮನೆಗಳಿಗೆ ಹಾನಿಯಾಗಿದ್ದು, ಆಟೋ ಹಾಗೂ ಕಾರುಗಳ ಮೇಲೂ ಕಲ್ಲು ಬಿದ್ದು ವಾಹನದ ಗಾಜು ಪುಡಿಯಾಗಿದೆ. ಈ ಘಟನೆಯ ಬೆನ್ನಲ್ಲೇ ರಟ್ಟೀಹಳ್ಳಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮುಸ್ಲಿಮರು ವಾಸಿಸುವ ಬಡಾವಣೆಗಳು ಹಾಗೂ ಮಸೀದಿಗೆ ಭದ್ರತೆಗಾಗಿ ಪೊಲೀಸರ ನಿಯೋಜನೆಯಾಗಿದೆ.
ರಟ್ಟಿಹಳ್ಳಿ ಗಲಾಟೆಗೆ ಸಂಬಂಧಿಸಿದಂತೆ ಎಸ್ಪಿ ಡಾ.ಶಿವಕುಮಾರ ಗುಣಾರೆ ಮಾಹಿತಿ ನೀಡಿದ್ದು, ''ಬೆಳಿಗ್ಗೆ 11 ಗಂಟೆ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆಯ ಪ್ರಯುಕ್ತ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಶಾಂತಿ ರೀತಿಯಿಂದಲೇ ಬೈಕ್ ರ್ಯಾಲಿ ನಡೆದಿತ್ತು. ಸುಮಾರು 150 ರಿಂದ 200 ಯುವಕರು ಹಿಂದೆ ಸಾಗುತ್ತಿದ್ದವರು, ನಿಗದಿ ಮಾರ್ಗ ಬದಲಿಸಿ ಕಾರಂಜಿ ವೃತ್ತದಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ. ಎಂಟರಿಂದ ಹತ್ತು ಮನೆಗಳನ್ನು ಜಖಂಗೊಳಿಸಿದ್ದಾರೆ ಹಾಗೂ ಎರಡು ವಾಹನಗಳೂ ಸಹ ಜಖಂ ಆಗಿವೆ. ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹದಿನೈದು ಹುಡುಗರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ ಹಾಗೂ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಸದ್ಯ ರಟ್ಟೀಹಳ್ಳಿಯಲ್ಲಿ ಪರಿಸ್ಥಿತಿ ಶಾಂತವಾಗಿದೆ'' ಎಂದಿದ್ದಾರೆ.
ಎಸ್ಪಿ ಡಾ.ಶಿವಕುಮಾರ ಅವರು ಸೋಮವಾರ ಪೊಲೀಸ್ ಠಾಣೆಗೆ ಭೇಟಿ ನೀಡಿ ಹಿಂದೂ, ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸಿದ್ದರು. ಸಂಭ್ರಮಾಚರಣೆ ಮಾಡುವುದಕ್ಕೆ ಸಮಸ್ಯೆ ಇಲ್ಲ. ಯಾವುದೇ ಸಮಾಜವಾದರೂ ಮತ್ತೊಂದು ಸಮಾಜಕ್ಕೆ ನೋವು ಆಗದಂತೆ ನೋಡಿಕೊಳ್ಳಬೇಕು. ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲೆಯೂ ಇದೆ. ಬೈಕ್ ರಾರಯಲಿಗೆ ಎಲ್ಲರೂ ಸಹಕಾರ ನೀಡಬೇಕು. ಆಯೋಜಕರೂ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು. ಯಾವುದೇ ಅಹಿತಕರ ಘಟನೆ ನಡೆದರೆ ಮುಲಾಜಿಲ್ಲದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಆದರೆ, ಶಾಂತಿಯುತವಾಗಿಯೇ ನಡೆದಿದ್ದ ಬೈಕ್ ರ್ಯಾಲಿಯು ಹಿಂಸಾರೂಪಕ್ಕೆ ತಿರುಗಿತು.
ಘಟನೆಯ ಹಿನ್ನೆಲೆ ಏನು?
ಪೊಲೀಸ್ ಇಲಾಖೆಯ ಅನುಮತಿ ಪಡೆದು ಮಾ. 9 ರಂದು ರಟ್ಟೀಹಳ್ಳಿಯಲ್ಲಿ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿ ಮೆರವಣಿಗೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಸಮ್ಮುಖದಲ್ಲಿಯೇ ಕೋಟೆ ಓಣಿಯಲ್ಲಿ ಅನ್ಯ ಕೋಮಿನ ಕೆಲವು ಯುವಕರು ಕೈಯಲ್ಲಿ ಕಲ್ಲು ಹಿಡಿದು ಮೆರವಣಿಗೆಗೆ ಅಡ್ಡ ಪಡಿಸಿದ್ದರು. ಇದರಿಂದ ಹಿಂದೂ ಕಾರ್ಯಕರ್ತರು ಕೆರಳಿದ್ದರು. ಯಾವ ರಸ್ತೆಯಲ್ಲಿ ನಮ್ಮ ಮೆರವಣಿಗೆಗೆ ಅಡ್ಡ ಪಡಿಸಿದ್ದಾರೋ ಅದೇ ರಸ್ತೆಯಲ್ಲಿ ನಾವು ಬೃಹತ್ ಬೈಕ್ ರಾರಯಲಿ ಮೂಲಕ ಮೆರವಣಿಗೆ ನಡೆಸುತ್ತೇವೆ ಎಂದು ಕುರುಬ ಸಮಾಜದ ಮುಖಂಡ ಆನಂದಪ್ಪ ಹಾದಿಮನಿ ಹೇಳಿದ್ದರು.
ಕಿಡಿಗೇಡಿಗಳು ಮೆರವಣಿಗೆಗೆ ಅಡ್ಡ ಪಡಿಸುತ್ತಿದ್ದರೆ ಪೊಲೀಸರು ಅಸಹಾಯಕರಾಗಿ ನಿಂತಿದ್ದರು. ವಿನಾಕಾರಣ ನಮ್ಮ ಮೆರವಣಿಗೆ ತಡೆಯುವ ಸಂಚು ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಹಿಂದೂ ಮುಸ್ಲಿಮರು ಒಗ್ಗಟ್ಟಾಗಿರಬೇಕು, ಅಂಜುಮನ್ ಕಮಿಟಿಯೇ ಬೇಡ: ಸದಸ್ಯರ ರಾಜೀನಾಮೆ
ರಾಯಣ್ಣನ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿಅಂಜುಮನ್ ಅಧ್ಯಕ್ಷರ ಪ್ರಚೋದನೆಯಿಂದ ಸಮಸ್ಯೆಯಾಗಿದೆ. ಅವರ ಹಿಂದೆ ಅಮಾಯಕ ಜನರು ಇದ್ದರು. ಅಧ್ಯಕ್ಷರ ಕಾರ್ಯದಿಂದ ಅಮಾಯಕರು ಬಲಿಪಶುಗಳಾಗುತ್ತಿದ್ದಾರೆ. ಪಟ್ಟಣದಲ್ಲಿ ಇದರಿಂದ ತೊಂದರೆಯಾಗುತ್ತಿದೆ. ನಮಗೆ ಪಟ್ಟಣದ ಹಿತರಕ್ಷಣೆ ಬೇಕು. ಮೊದಲಿನಂತೆ ಎಲ್ಲರೂ ಒಗ್ಗಟ್ಟಿನಿಂದ ಇರಬೇಕೆನ್ನುವುದು ನಮ್ಮೆಲ್ಲರ ಆಸೆ. ಅಧ್ಯಕ್ಷರ ಕಾರ್ಯ ವೈಖರಿಯಿಂದ ಮನನೊಂದು 11 ಸದಸ್ಯರು ರಾಜೀನಾಮೆ ಸಲ್ಲಿಸಿದ್ದೇವೆ ಎಂದು ಅಂಜುಮನ್ ಕಮೀಟಿ ಸದಸ್ಯ ಮಾಜಿ ಅಧ್ಯಕ್ಷ ಬಾಬುಸಾಬ ಜಡದಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದರು. ಪಟ್ಟಣದಲ್ಲಿ ಕೋಮು ಸೌಹಾರ್ದತೆ ಇರಬೇಕು. ಹಿಂದೂ ಮುಸ್ಲಿಮರು ಒಗ್ಗಟ್ಟಾಗಿ ಹೋಗಬೇಕು. ಈ ಅಂಜುಮನ್ ಕಮಿಟಿಯೇ ಬೇಡ ಎಂದು ನಾವೆಲ್ಲರೂ ರಾಜೀನಾಮೆ ಸಲ್ಲಿಸಿದ್ದೇವೆ ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಅಬ್ಬಾಸ ಗೋಡಿಹಾಳ, ಮಖಬುಲ್ಸಾಬ್ ಮುಲ್ಲಾ, ಜಾಕೀರ್ ಮುಲ್ಲಾ ಹಲವರು ಇದ್ದರು.
ಕಲ್ಲು ತೂರಾಟದ ವೇಳೆ ಹಲವು ಮನೆಗಳಿಗೆ ಹಾನಿಯಾಗಿದ್ದು, ಆಟೋ ಹಾಗೂ ಕಾರುಗಳ ಮೇಲೂ ಕಲ್ಲು ಬಿದ್ದು ವಾಹನದ ಗಾಜು ಪುಡಿಯಾಗಿದೆ. ಈ ಘಟನೆಯ ಬೆನ್ನಲ್ಲೇ ರಟ್ಟೀಹಳ್ಳಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮುಸ್ಲಿಮರು ವಾಸಿಸುವ ಬಡಾವಣೆಗಳು ಹಾಗೂ ಮಸೀದಿಗೆ ಭದ್ರತೆಗಾಗಿ ಪೊಲೀಸರ ನಿಯೋಜನೆಯಾಗಿದೆ.
ರಟ್ಟಿಹಳ್ಳಿ ಗಲಾಟೆಗೆ ಸಂಬಂಧಿಸಿದಂತೆ ಎಸ್ಪಿ ಡಾ.ಶಿವಕುಮಾರ ಗುಣಾರೆ ಮಾಹಿತಿ ನೀಡಿದ್ದು, ''ಬೆಳಿಗ್ಗೆ 11 ಗಂಟೆ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆಯ ಪ್ರಯುಕ್ತ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಶಾಂತಿ ರೀತಿಯಿಂದಲೇ ಬೈಕ್ ರ್ಯಾಲಿ ನಡೆದಿತ್ತು. ಸುಮಾರು 150 ರಿಂದ 200 ಯುವಕರು ಹಿಂದೆ ಸಾಗುತ್ತಿದ್ದವರು, ನಿಗದಿ ಮಾರ್ಗ ಬದಲಿಸಿ ಕಾರಂಜಿ ವೃತ್ತದಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ. ಎಂಟರಿಂದ ಹತ್ತು ಮನೆಗಳನ್ನು ಜಖಂಗೊಳಿಸಿದ್ದಾರೆ ಹಾಗೂ ಎರಡು ವಾಹನಗಳೂ ಸಹ ಜಖಂ ಆಗಿವೆ. ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹದಿನೈದು ಹುಡುಗರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ ಹಾಗೂ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಸದ್ಯ ರಟ್ಟೀಹಳ್ಳಿಯಲ್ಲಿ ಪರಿಸ್ಥಿತಿ ಶಾಂತವಾಗಿದೆ'' ಎಂದಿದ್ದಾರೆ.
ಎಸ್ಪಿ ಡಾ.ಶಿವಕುಮಾರ ಅವರು ಸೋಮವಾರ ಪೊಲೀಸ್ ಠಾಣೆಗೆ ಭೇಟಿ ನೀಡಿ ಹಿಂದೂ, ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸಿದ್ದರು. ಸಂಭ್ರಮಾಚರಣೆ ಮಾಡುವುದಕ್ಕೆ ಸಮಸ್ಯೆ ಇಲ್ಲ. ಯಾವುದೇ ಸಮಾಜವಾದರೂ ಮತ್ತೊಂದು ಸಮಾಜಕ್ಕೆ ನೋವು ಆಗದಂತೆ ನೋಡಿಕೊಳ್ಳಬೇಕು. ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲೆಯೂ ಇದೆ. ಬೈಕ್ ರಾರಯಲಿಗೆ ಎಲ್ಲರೂ ಸಹಕಾರ ನೀಡಬೇಕು. ಆಯೋಜಕರೂ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು. ಯಾವುದೇ ಅಹಿತಕರ ಘಟನೆ ನಡೆದರೆ ಮುಲಾಜಿಲ್ಲದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಆದರೆ, ಶಾಂತಿಯುತವಾಗಿಯೇ ನಡೆದಿದ್ದ ಬೈಕ್ ರ್ಯಾಲಿಯು ಹಿಂಸಾರೂಪಕ್ಕೆ ತಿರುಗಿತು.
ಘಟನೆಯ ಹಿನ್ನೆಲೆ ಏನು?
ಪೊಲೀಸ್ ಇಲಾಖೆಯ ಅನುಮತಿ ಪಡೆದು ಮಾ. 9 ರಂದು ರಟ್ಟೀಹಳ್ಳಿಯಲ್ಲಿ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿ ಮೆರವಣಿಗೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಸಮ್ಮುಖದಲ್ಲಿಯೇ ಕೋಟೆ ಓಣಿಯಲ್ಲಿ ಅನ್ಯ ಕೋಮಿನ ಕೆಲವು ಯುವಕರು ಕೈಯಲ್ಲಿ ಕಲ್ಲು ಹಿಡಿದು ಮೆರವಣಿಗೆಗೆ ಅಡ್ಡ ಪಡಿಸಿದ್ದರು. ಇದರಿಂದ ಹಿಂದೂ ಕಾರ್ಯಕರ್ತರು ಕೆರಳಿದ್ದರು. ಯಾವ ರಸ್ತೆಯಲ್ಲಿ ನಮ್ಮ ಮೆರವಣಿಗೆಗೆ ಅಡ್ಡ ಪಡಿಸಿದ್ದಾರೋ ಅದೇ ರಸ್ತೆಯಲ್ಲಿ ನಾವು ಬೃಹತ್ ಬೈಕ್ ರಾರಯಲಿ ಮೂಲಕ ಮೆರವಣಿಗೆ ನಡೆಸುತ್ತೇವೆ ಎಂದು ಕುರುಬ ಸಮಾಜದ ಮುಖಂಡ ಆನಂದಪ್ಪ ಹಾದಿಮನಿ ಹೇಳಿದ್ದರು.
ಕಿಡಿಗೇಡಿಗಳು ಮೆರವಣಿಗೆಗೆ ಅಡ್ಡ ಪಡಿಸುತ್ತಿದ್ದರೆ ಪೊಲೀಸರು ಅಸಹಾಯಕರಾಗಿ ನಿಂತಿದ್ದರು. ವಿನಾಕಾರಣ ನಮ್ಮ ಮೆರವಣಿಗೆ ತಡೆಯುವ ಸಂಚು ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಹಿಂದೂ ಮುಸ್ಲಿಮರು ಒಗ್ಗಟ್ಟಾಗಿರಬೇಕು, ಅಂಜುಮನ್ ಕಮಿಟಿಯೇ ಬೇಡ: ಸದಸ್ಯರ ರಾಜೀನಾಮೆ
ರಾಯಣ್ಣನ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿಅಂಜುಮನ್ ಅಧ್ಯಕ್ಷರ ಪ್ರಚೋದನೆಯಿಂದ ಸಮಸ್ಯೆಯಾಗಿದೆ. ಅವರ ಹಿಂದೆ ಅಮಾಯಕ ಜನರು ಇದ್ದರು. ಅಧ್ಯಕ್ಷರ ಕಾರ್ಯದಿಂದ ಅಮಾಯಕರು ಬಲಿಪಶುಗಳಾಗುತ್ತಿದ್ದಾರೆ. ಪಟ್ಟಣದಲ್ಲಿ ಇದರಿಂದ ತೊಂದರೆಯಾಗುತ್ತಿದೆ. ನಮಗೆ ಪಟ್ಟಣದ ಹಿತರಕ್ಷಣೆ ಬೇಕು. ಮೊದಲಿನಂತೆ ಎಲ್ಲರೂ ಒಗ್ಗಟ್ಟಿನಿಂದ ಇರಬೇಕೆನ್ನುವುದು ನಮ್ಮೆಲ್ಲರ ಆಸೆ. ಅಧ್ಯಕ್ಷರ ಕಾರ್ಯ ವೈಖರಿಯಿಂದ ಮನನೊಂದು 11 ಸದಸ್ಯರು ರಾಜೀನಾಮೆ ಸಲ್ಲಿಸಿದ್ದೇವೆ ಎಂದು ಅಂಜುಮನ್ ಕಮೀಟಿ ಸದಸ್ಯ ಮಾಜಿ ಅಧ್ಯಕ್ಷ ಬಾಬುಸಾಬ ಜಡದಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದರು. ಪಟ್ಟಣದಲ್ಲಿ ಕೋಮು ಸೌಹಾರ್ದತೆ ಇರಬೇಕು. ಹಿಂದೂ ಮುಸ್ಲಿಮರು ಒಗ್ಗಟ್ಟಾಗಿ ಹೋಗಬೇಕು. ಈ ಅಂಜುಮನ್ ಕಮಿಟಿಯೇ ಬೇಡ ಎಂದು ನಾವೆಲ್ಲರೂ ರಾಜೀನಾಮೆ ಸಲ್ಲಿಸಿದ್ದೇವೆ ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಅಬ್ಬಾಸ ಗೋಡಿಹಾಳ, ಮಖಬುಲ್ಸಾಬ್ ಮುಲ್ಲಾ, ಜಾಕೀರ್ ಮುಲ್ಲಾ ಹಲವರು ಇದ್ದರು.