ಆ್ಯಪ್ನಗರ

ಮೊದಲ ಬಾರಿಗೆ ಮರು ಚುನಾವಣೆ

ರಾಮು ಮುದಿಗೌಡರ್‌ ಹಿರೇಕೆರೂರ: ಹಿರೇಕೆರೂರ ವಿಧಾನಸಭಾ ಕ್ಷೇತ್ರಕ್ಕೆ ಮರು ಚುನಾವಣೆ ಘೋಷಣೆ ಮಾಡುತ್ತಿದ್ದಂತೆ ಆಕಾಂಕ್ಷಿಗಳಲ್ಲಿಹುಮ್ಮಸ್ಸು ಇಮ್ಮಡಿಗೊಂಡಿದೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷದಿಂದ ಹಾಗೂ ಪಕ್ಷೇತರರಾಗಿ ಸ್ಪರ್ಧಿಸುವ ಆಕಾಂಕ್ಷಿಗಳ ಲೀಸ್ಟ್‌ ದೊಡ್ಡದಾಗುತ್ತಿದೆ.

Vijaya Karnataka 22 Sep 2019, 5:00 am
ರಾಮು ಮುದಿಗೌಡರ್‌ ಹಿರೇಕೆರೂರ: ಹಿರೇಕೆರೂರ ವಿಧಾನಸಭಾ ಕ್ಷೇತ್ರಕ್ಕೆ ಮರು ಚುನಾವಣೆ ಘೋಷಣೆ ಮಾಡುತ್ತಿದ್ದಂತೆ ಆಕಾಂಕ್ಷಿಗಳಲ್ಲಿಹುಮ್ಮಸ್ಸು ಇಮ್ಮಡಿಗೊಂಡಿದೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷದಿಂದ ಹಾಗೂ ಪಕ್ಷೇತರರಾಗಿ ಸ್ಪರ್ಧಿಸುವ ಆಕಾಂಕ್ಷಿಗಳ ಲೀಸ್ಟ್‌ ದೊಡ್ಡದಾಗುತ್ತಿದೆ.
Vijaya Karnataka Web re election for the first time
ಮೊದಲ ಬಾರಿಗೆ ಮರು ಚುನಾವಣೆ


2018ರಲ್ಲಿನಡೆದ ವಿಧಾನಸಭೆ ಚುನಾವಣೆಯಲ್ಲಿಕಾಂಗ್ರೆಸ್‌ನ ಬಿ.ಸಿ.ಪಾಟೀಲ್‌ ಬಿಜೆಪಿಯ ಯು.ಬಿ.ಬಣಕಾರ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. 13 ತಿಂಗಳೊಳಗೆ ಪಾಟೀಲ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ವಿಧಾನಸಭಾಧ್ಯಕ್ಷರಿಂದ ಅನರ್ಹಗೊಂಡಿದ್ದರು. ಈಗ ಪ್ರಥಮ ಬಾರಿಗೆ ಹಿರೇಕೆರೂರ ಕ್ಷೇತ್ರ ಮರು ಚುನಾವಣೆ ಎದುರಿಸುವಂತಾಗಿದೆ. ತಾಲೂಕಿನ ಸುದೀರ್ಘ ರಾಜಕಾರಣದಲ್ಲಿಒಮ್ಮೆಯೂ ಮರುಚುನಾವಣೆ ಕ್ಷೇತ್ರ ಕಂಡಿಲ್ಲ. ಆದರೂ ತಾಲೂಕಿನ ಮತದಾರರು ಈಗ ತಮ್ಮದಲ್ಲದ ತಪ್ಪಿನಿಂದ ಕ್ಷೇತ್ರಕ್ಕೆ ಎದುರಾಗಿರುವ ಮರುಚುನಾವಣೆ ಕಾಣುವಂತಾಗಿದೆ.

ದಿಢೀರ್‌ ಚುನಾವಣೆ ದಿನ ಘೋಷಣೆ ಮಾಡಿದ್ದರಿಂದ ಹಿರೇಕೆರೂರ ರಟ್ಟೀಹಳ್ಳಿ ಅವಳಿ ತಾಲೂಕಿನಾದ್ಯಂತ ಚುನಾವಣಾ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಕ್ಷೇತ್ರಕ್ಕೆ ಯಾರಾರ‍ಯರು ಯಾವ ಪಕ್ಷದಿಂದ ಅಭ್ಯರ್ಥಿಗಳಾಗಲಿದ್ದಾರೆ ಎನ್ನುವ ಕುತೂಹಲ ಹಾಗೂ ಜಿಜ್ಞಾಸೆ ಸಹಜವಾಗಿದೆ.

ಬಿಜೆಪಿಯಲ್ಲಿಐದಾರು, ಕಾಂಗ್ರೆಸ್‌ನಲ್ಲಿಏಳೆಂಟು, ಜೆಡಿಎಸ್‌ನಲ್ಲಿಮೂರ್ನಾಲ್ಕು ಆಕಾಂಕ್ಷಿಗಳಿದ್ದಾರೆ. ಇದರಿಂದ ಈ ಪ್ರಮುಖ ಮೂರು ಪಕ್ಷಗಳಲ್ಲಿತೀವ್ರ ಪೈಪೋಟಿ ಇದೆ. ಪಕ್ಷೇತರರ ಆಕಾಂಕ್ಷಿಗಳು ಹೆಚ್ಚಾಗುತ್ತಿದ್ದಾರೆ. ಏತನ್ಮಧ್ಯೆ, ಮಂಡ್ಯ ಲೋಕಸಭಾ ಕ್ಷೇತ್ರ ಮಾದರಿಯಲ್ಲಿಯೇ ಹಿರೇಕೆರೂರ ಕ್ಷೇತ್ರದ ಚುನಾವಣೆ ನಡೆಯಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಕ್ಷೇತ್ರದಲ್ಲಿ1,82,815 ಒಟ್ಟು ಮತದಾರರಿದ್ದಾರೆ. ಶಾಸಕರನ್ನಾಗಿ ಯಾರನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನುವುದನ್ನು ನೋಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ