ಆ್ಯಪ್ನಗರ

ಮತ್ತೆ ಕಾಣಿಸಿಕೊಂಡ ಚಿರತೆ

ರಟ್ಟೀಹಳ್ಳಿ: ತಾಲೂಕಿನ ಹಿರೇಮೊರಬ ಗ್ರಾಮದ ಸಮೀಪದ ಶಿವನಗೌಡ ಚಿಲೂರ ಎಂಬುವರ ಜಮೀನಿನಲ್ಲಿ ಸೋಮವಾರ ಸಂಜೆ 6-30 ರ ಸುಮಾರಿಗೆ ಮರದ ಮೇಲೆ ಮತ್ತೆ ಚಿರತೆ ಕಾಣಿಸಿಕೊಂಡಿದೆ.

Vijaya Karnataka 10 Jul 2019, 5:00 am
ರಟ್ಟೀಹಳ್ಳಿ: ತಾಲೂಕಿನ ಹಿರೇಮೊರಬ ಗ್ರಾಮದ ಸಮೀಪದ ಶಿವನಗೌಡ ಚಿಲೂರ ಎಂಬುವರ ಜಮೀನಿನಲ್ಲಿ ಸೋಮವಾರ ಸಂಜೆ 6-30 ರ ಸುಮಾರಿಗೆ ಮರದ ಮೇಲೆ ಮತ್ತೆ ಚಿರತೆ ಕಾಣಿಸಿಕೊಂಡಿದೆ.
Vijaya Karnataka Web HVR-8 RATTIHALLI ,,1


ಎರಡು ದಿನದ ಹಿಂದೆ ಶುಕ್ರವಾರ ಸಂಜೆ ಇದೇ ಸ್ಥಳದಲ್ಲಿ ಚಿರತೆ ಕಾಣಸಿಕೊಂಡಿತ್ತು. ಅಂದು ಮರದ ಮೇಲೆ ಕುಳಿತಿದ್ದ ಚಿರತೆಯನ್ನು ಓಡಿಸಲಾಗಿತ್ತು. ಈಗ ಮತ್ತೆ ಚಿರತೆ ಅದೇ ಸ್ಥಳದಲ್ಲಿ ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರಲ್ಲಿ ಭಯದ ವಾತವರಣ ಮೂಡಿದೆ.

ಸೋಮವಾರ ಸಂಜೆ ಶಿವನಗೌಡ ಚಿಲೂರರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರಾಜಕಣ್ಣ ಹೆಡಿಯಾಲ ಎಂಬ ವ್ಯಕ್ತಿಗೆ ಮರದಲ್ಲಿರುವ ಚಿರತೆ ಕಾಣಿಸಿಕೊಂಡಿದೆ. ಚಿರತೆಯನ್ನು ಕಂಡು ರಾಜಕಣ್ಣ ಓಡಿ ಗ್ರಾಮದತ್ತ ಬಂದು ವಿಷಯ ತಿಳಿಸಿದ್ದಾನæ. ವಿಷಯ ತಿಳಿದ ಜನರು ಜಮೀನಿನತ್ತ ಬಂದಿದ್ದಾರೆ. 7 ಗಂಟೆ ಬಳಿಕ ಜನದಟ್ಟಣೆ ಆಗುತ್ತಿದ್ದಂತೆ ಚಿರತೆ ಅಲ್ಲಿಂದ ಓಡಿ ಹೋಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಚಿರತೆ ಕಾಣಿಸಿಕೊಂಡಿದ್ದರಿಂದ ಭಯಭೀತರಾಗಿರುವ ಜನರು, ಜನರ ಮೇಲೆ ಚಿರತೆ ದಾಳಿ ಮಾಡಬಹುದೆಂದು ಕೈಯಲ್ಲಿ ಬಡಗೆ ಹಿಡಿದು ಚಿರತೆ ಓಡಿಸುವುದಕ್ಕೆ ಮುಂದಾಗಿದ್ದರು. ಹೆಚ್ಚಿನ ಜನರು ಸೇರುತ್ತಿದ್ದಂತೆ ಚಿರತೆ ಸ್ಥಳದಿಂದ ಓಡಿ ಹೋಗಿದೆ. ರಾತ್ರಿ 8 ಗಂಟೆವರೆಗೆ ಚಿರತೆಯನ್ನು ಹುಡುಕಾಡಿದರೂ ಮತ್ತೆ ಕಾಣಿಸಿಕೊಳ್ಳಲಿಲ್ಲ.

ಚಿರತೆ ಕಾಣಿಸಿಕೊಂಡ ಸ್ಥಳದಲ್ಲಿ ಜಿಂಕೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಜಿಂಕೆ ಬೇಟೆಯಾಡುವುದಕ್ಕೆ ಚಿರತೆ ಪದೇ ಪದೇ ಇದೇ ಸ್ಥಳಕ್ಕೆ ಬರುತ್ತಿರಬಹುದೆಂದು ಜನರು ಅನುಮಾನ ವ್ಯಕ್ತಪಡಿಸಿದ್ದಾರೆ.

ಚಿರತೆ ಸೆರೆಗೆ ಆಗ್ರಹ: ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಜನರು ಜಮೀನುಗಳಿಗೆ ಹೋಗುವುದಕ್ಕೆ ಭಯಪಡುವಂತಾಗಿದೆ. ಕೂಡಲೇ ಬೋನ್‌ ಇಟ್ಟು ಚಿರತೆ ಹಿಡಿಯುವುದಕ್ಕೆ ಮುಂದಾಗಬೇಕೆಂದು ಇಲ್ಲಿನ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ