ಆ್ಯಪ್ನಗರ

ಸಾಧಕರನ್ನು ಗುರುತಿಸಿದ ವಿಕ: ಡಾ.ಕುಬೇರಪ್ಪ

ತುಮ್ಮಿನಕಟ್ಟಿ. : ಸಮಾಜದಲ್ಲಿ ಎಲೆಮರಿ ಕಾಯಿಯಂತೆ ಸೇವೆ ಮಾಡುತ್ತಿರುವವರನ್ನು ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ವಿಕ ಪತ್ರಿಕೆ ಸಾಧಕರನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಮಾಡುತ್ತದೆ ಎಂದು ಡಾ.ಆರ್‌.ಎಮ್‌.ಕುಬೇರಪ್ಪ ಹೇಳಿದರು.

Vijaya Karnataka 30 Jul 2019, 5:00 am
ತುಮ್ಮಿನಕಟ್ಟಿ. : ಸಮಾಜದಲ್ಲಿ ಎಲೆಮರಿ ಕಾಯಿಯಂತೆ ಸೇವೆ ಮಾಡುತ್ತಿರುವವರನ್ನು ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ವಿಕ ಪತ್ರಿಕೆ ಸಾಧಕರನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಮಾಡುತ್ತದೆ ಎಂದು ಡಾ.ಆರ್‌.ಎಮ್‌.ಕುಬೇರಪ್ಪ ಹೇಳಿದರು.
Vijaya Karnataka Web HVR-29 TMK 02
ರಾಣೆಬೆನ್ನೂರು ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಬಿ.ಎ.ಜೆ.ಎಸ್‌.ಎಸ್‌ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ ಡಾ.ಆರ್‌.ಎಮ್‌.ಕುಬೇರಪ್ಪ ಸನ್ಮಾನ ಸ್ವೀಕರಿಸುತ್ತಿರುವುದು.


ವಿಜಯ ಕರ್ನಾಟಕದ 'ಅಚೀವರ್ಸ್‌ ಆಫ್‌ ಕರ್ನಾಟಕ' ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಕುಬೇರಪ್ಪ ಅವರಿಗೆ ರಾಣೇಬೆನ್ನೂರು ತಾಲೂಕಿನ ನಿಟ್ಟೂರು ಗ್ರಾಮದ ಬಿ.ಎ.ಜೆ.ಎಸ್‌.ಎಸ್‌. ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಸುತ್ತಮುತ್ತಲಿನ ಎಷ್ಟೋ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಅವರನ್ನು ಸಮಾಜಕ್ಕೆ ಪರಿಚಯಿಸುವ ಅಪರೂಪದ ಕಾರ್ಯಕ್ರಮಗಳನ್ನು ವಿಕ ಪತ್ರಿಕೆ ನಿರಂತರವಾಗಿ ಆಯೋಜಿಸುತ್ತಾ ಬಂದಿದೆ. ಸಂತೋಷದ ವಿಷಯ ನಮ್ಮ ಶಿಕ್ಷ ಣ ಸಂಸ್ಥೆಯವರು ಶಿಕ್ಷ ಕ ಬಳಗದವರು ಸನ್ಮಾನಿಸಿ ಗೌರವಿಸಿದ್ದಾರೆ. ಅವರಿಗೆ ಅಬಿನಂದನೆಗಳು ಎಂದರು.

ಶಾಲೆಯ ಮುಖ್ಯ ಶಿಕ್ಷ ಕ ಕೆ.ಎಲ್‌.ಬಿಜ್ಜೂರ, ಪಿ.ಎಮ್‌.ಕೊಟ್ಟರಪ್ಪನವರ, ಗ್ರಾಪಂ ಅದ್ಯಕ್ಷ ವಿತ್ರಮ್ಮ ಪಾಟಿಲ, ಕರಬಸಪ್ಪ ಕರಡಿ, ವಿಜಯ ನಂದಿಹಳ್ಳಿ, ಎಸ್‌.ಹೆಚ.ಉಚ್ಚಗೊಂಡರ, ಕೆ.ಪಿ.ಮಾಜಿಪಾಟೀಲ, ಗುತ್ತೆಪ್ಪ ಪೂಜಾರ, ಆರ್‌.ಹೆಚ್‌.ಗುಗ್ಗರಿ ಕರಬಸಪ್ಪ ಕೂಲೇರ, ಮಂಜಪ್ಪ ಪಾಟೀಲ, ಸಿ.ಬಿ.ನಂದಿಹಳ್ಳಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ