ಆ್ಯಪ್ನಗರ

ಪುನರ್‌ಜನ್ಮ ನೀಡುವವರು ರಕ್ತದಾನಿಗಳು

ಹಾವೇರಿ: ದಾನಗಳಲ್ಲಿಯೇ ಶ್ರೇಷ್ಠದಾನ ರಕ್ತದಾನ, ಜನ್ಮ ನೀಡುವವಳು ಜನನಿಯಾದಾರೆ, ಪುನರ್‌ಜನ್ಮ ನೀಡುವವರು ರಕ್ತದಾನಿಗಳಾಗುತ್ತಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್‌.ಎಸ್‌.ರಾಘವೇಂದ್ರಸ್ವಾಮಿ ಹೇಳಿದರು.

Vijaya Karnataka 22 May 2019, 5:00 am
ಹಾವೇರಿ: ದಾನಗಳಲ್ಲಿಯೇ ಶ್ರೇಷ್ಠದಾನ ರಕ್ತದಾನ, ಜನ್ಮ ನೀಡುವವಳು ಜನನಿಯಾದಾರೆ, ಪುನರ್‌ಜನ್ಮ ನೀಡುವವರು ರಕ್ತದಾನಿಗಳಾಗುತ್ತಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್‌.ಎಸ್‌.ರಾಘವೇಂದ್ರಸ್ವಾಮಿ ಹೇಳಿದರು.
Vijaya Karnataka Web HVR-21 HAVERI 7


ನಗರದ ಜಿಲ್ಲಾ ಆರೋಗ್ಯ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಸರಕಾರಿ ಪ್ರಯೋಗಶಾಲೆ ಟೆಕ್ನಾಲಾಜಿಸ್ಟರ ಸಂಘ, ಜಿಲ್ಲಾ ಘಟಕ ಹಾವೇರಿ ಇವರ ನೇತ್ರತ್ವದಲ್ಲಿ ಭಾರತಿಯ ವೈದ್ಯಕೀಯ ಸಂಘ, ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘ , ಲಯನ್ಸ ಕ್ಲಬ್‌, ರೋಟರಿ ರೆಡ್‌ ಕ್ರಾಸ್‌, ಜಿ.ಸಿ.ಐ.ಅಪಿಕ ನೌಕರರು, ಶುಶ್ರೂಕರು ಪಾರ್ಮಾಸಿಸ್ಟ ನೇತ್ರಾಧಿಕಾರಿಗಳು ರೇಡಿಯೋಗ್ರಾಫರ್ಸ , ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರು, ಆಪ್ತ ಸಮಾಲೋಚಕರ ವಾಹನ ಚಾಲಕರ, ಡಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲ್ಲಿ ಮಂಗಳವಾರ ನಡೆದ ಸ್ವಯಂಪ್ರೇರಿತ ಬೃಹತ್‌ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಪಘಾತ ಸಂದರ್ಭದಲ್ಲಿ ಗಾಯಾಳುಗಳಿಗೆ ರಕ್ತದ ಅವಶ್ಯಕತೆ ಅಧಿಕವಾಗಿರುತ್ತದೆ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಆರೋಗ್ಯವಂತರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಮುಂದಾಗಬೇಕು ಎಂದರು.

ಎಬಿ ನೆಗಟಿವ್‌ ಮತ್ತು ಓ ಪಾಸಿಟಿವ್‌ ರಕ್ತದ ಗುಂಪು ಅತ್ಯಾವಶ್ಯಕ ಗುಂಪುಗಳಾಗಿವೆ. ಈ ರಕ್ತದ ಗುಂಪುಗಳನ್ನು ಹೊಂದಿದ ದಾನಿಗಳ ಮೊಬೈಲ್‌ ನಂಬರ್‌ ಪಡೆದು ಅಗತ್ಯ ಸಂದರ್ಭಗಳಲ್ಲಿ ರಕ್ತದಾನ ಮಾಡಿಸಿಕೊಳ್ಳಬೇಕು. 35 ದಿನಗಳವರೆಗೂ ಶೇಖರಿಸಿಟ್ಟ ರಕ್ತವು ಅನುಪಯುಕ್ತವಾಗುವ ಸಾಧ್ಯತೆಯಿದೆ. ಶೇಖರಿಸಿದ ರಕ್ತವನ್ನು ಅವಶ್ಯಕ ಸಮಯದಲ್ಲಿ ರೋಗಿಗಳಿಗೆ ನೀಡಬೇಕು ಎಂದು ಹೇಳಿದರು.

ರಕ್ತನಿಧಿ ಕೇಂದ್ರದ ಜಿಲ್ಲಾ ವೈಧಾಧಿಕಾರಿ ಬಸವರಾಜ ತಳವಾರ ಮಾತನಾಡಿ, ರಕ್ತದಾನ ಮಾಡುವುದರಿಂದ ಸಮಸ್ಯೆಗಳು ಎದುರಾಗಬಹುದೆಂಬ ಮೂಢನಂಬಿಕೆಗಳಿವೆ. ಇಂತಹ ತಪ್ಪು ಕಲ್ಪನೆಯಿಂದ ಹೊರಬಂದು ರಕ್ತದಾನ ಮಾಡಬೇಕು. ಏಪ್ರಿಲ್‌, ಮೇ, ಜೂನ್‌ ತಿಂಗಳುಗಳಲ್ಲಿ ರಕ್ತದಾನಿಗಳ ಸಂಖ್ಯೆ ಕಡಿಮೆ, ಉಳಿದ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಕ್ಯಾಂಪ್‌ ಮಾಡಿ ರಕ್ತ ಸಂಗ್ರಹಿಸಿ ಕೊರತೆ ನಿಗಿಸಬಹುದು. ತುರ್ತು ಪರಿಸ್ಥಿತಿಯಲ್ಲಿ ಧಾರವಾಡ-ಹುಬ್ಬಳ್ಳಿ, ದಾವಣಗೆರೆ-ಶಿವಮೊಗ್ಗ ನಗರಗಳಿಗೆ ಹೋಗುವುದು ತಪ್ಪುವುದು ಎಂದು ಹೇಳಿದರು.

ಬಸವರಾಜ ಕಮತದ ಪ್ರಾಸ್ತಾವಿಕವಾಗಿ ಮಾತಾನಾಡಿ, ರಕ್ತದಾನಿಗಳ ಸಂಖ್ಯೆ ಕಡಿಮೆಯಾಗಿದೆ, ರಕ್ತ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕಾಗಿ ರಕ್ತದಾನ ಮಾಡಿ 'ಗೀವಬ್ಲಡ್‌ ಗೊ ಗ್ರಿನ್‌ ಸೆವ್‌ ಬ್ಲೂ' ಎಂಬ ಧ್ಯೆಯ ವಾಕ್ಯದೊಂದಿಗೆ ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ವನಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಭಾರತಿಯ ವೈದ್ಯಕೀಯ ಸಂಘದ ಅಧ್ಯಕ್ಷ ಮೃತ್ಯುಂಜಯ ತಿರುಕಾಣಿ ಮಾತನಾಡಿದರು. ಜಿಲ್ಲಾ ಕ್ಷ ಯರೋಗ ನಿಯಂತ್ರಣ ಅಧಿಕಾರಿ ಡಾ.ನೀಲೇಶ ಎಂ.ಎನ್‌, ಜಿಲ್ಲಾ ಸರ್ವೇಕ್ಷ ಣಾಧಿಕಾರಿ ಡಾ.ಜಗದೀಶ ಪಾಟೀಲ, ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಡಾ.ಸುಹೀಲ್‌ ಹರವಿ, ಮಲ್ಲಿಕಾರ್ಜುನ ಶಾಂತಗಿರಿ, ಸಿದ್ದಪ್ಪ ಕುಗೂರ, ರವಿ ಬಣಕಾರ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ