ಆ್ಯಪ್ನಗರ

ಎಲ್ಲ ಧರ್ಮದಲ್ಲಿ ಪರಧರ್ಮ ಸಹಿಷ್ಣುತೆ ಮನೋಭಾವ ಅವಶ್ಯ

ಹಂಸಭಾವಿ: ಸಮಾಜದಲ್ಲಿ ಧಾರ್ಮಿಕ ಮೌಲ್ಯ ಕುಸಿಯುತ್ತಿವೆ, ಮನುಷ್ಯನ ಬುದ್ದಿ ವಿಕಸನೆಗೊಂಡಿದೆ, ಆದರೆ ಭಾವನೆಗಳು ಕುಬ್ಜವಾಗುತ್ತಿವೆ ಎಂದು ಬಾಳೇಹೊನ್ನೂರಿನ ರಂಭಾಪುರಿ ಪೀಠದ ಶ್ರೀಮದ್‌ ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು ಹೇಳಿದರು.

Vijaya Karnataka 30 Jun 2019, 5:00 am
ಹಂಸಭಾವಿ: ಸಮಾಜದಲ್ಲಿ ಧಾರ್ಮಿಕ ಮೌಲ್ಯ ಕುಸಿಯುತ್ತಿವೆ, ಮನುಷ್ಯನ ಬುದ್ದಿ ವಿಕಸನೆಗೊಂಡಿದೆ, ಆದರೆ ಭಾವನೆಗಳು ಕುಬ್ಜವಾಗುತ್ತಿವೆ ಎಂದು ಬಾಳೇಹೊನ್ನೂರಿನ ರಂಭಾಪುರಿ ಪೀಠದ ಶ್ರೀಮದ್‌ ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು ಹೇಳಿದರು.
Vijaya Karnataka Web HVR-29 HBV 1


ಅವರು ಸ್ಥಳಿಯ ಶಿವಯೋಗೀಶ್ವರ ಆಶ್ರಮದಲ್ಲಿ ಶುಕ್ರವಾರ ರಾತ್ರಿ ನಡೆದ ಪರಂಪರೆ ರಕ್ಷ ಣೆಯ ಧರ್ಮ ಸಮಾರಂಭ ಹಾಗೂ ಶಿವಯೋಗೀಶ್ವರ ಆಶ್ರಮದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳ 72ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು.

ಇಂದು ರಾಜಕಾರಿಣಿಗಳಿಂದ ಸಮಾಜದಲ್ಲಿ ಎಂದಿಗೂ ಧಾರ್ಮಿಕ ಸಂಘರ್ಷಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು, ವೈಯಕ್ತಿಕ ಹಿತಾಸಕ್ತಿ ಪೂರೈಸಿಕೊಳ್ಳಲು ಸ್ವಾರ್ಥ ಸಾಧನೆಗಾಗಿ ರಾಜಕೀಯಕ್ಕೆ ಬರುತ್ತಿರುವ ಜನರಿಂದ ಕೆಲವೊಮ್ಮೆ ಇಂತಹ ಸಂಘರ್ಷ ನಡೆಯುತ್ತಿದ್ದು, ಸಮಾಜದಲ್ಲಿ ವಿಘಟನೆ ಎತ್ತ ಸಾಗುತ್ತಿದೆ ಎಂದರು.

ಜಗದ್ಗುರು ರೇಣುಕಾಚಾರ್ಯರು ಭೋದಿಸಿದ ಧರ್ಮ ದಶಸೂತ್ರಗಳು ಸಕಲ ಸಮುದಾಯಕ್ಕೂ ಅನ್ವಯಿಸುತ್ತಿವೆ. ಸರ್ವ ಧರ್ಮದಲ್ಲಿ ಶ್ರದ್ದೆ, ಪರಧರ್ಮ ಸಹಿಷ್ಣುತೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ನೀರು ಮತ್ತು ನೆಲದ ಮಹತ್ವವನ್ನು ಸಾರಿ ಹೇಳುವ ಮೂಲಕ ಜನಜಾಗೃತಿ ಅವಶ್ಯವಾಗಿದ್ದು, ರೈತ ಸಮುದಾಯ ಸಂಕಷ್ಟದಲ್ಲಿದ್ದು, ಅವರ ಹಿತವನ್ನು ಸರಕಾರ ಕಡೆಗಣಿಸಬಾರದೆಂದು ಎಚ್ಚರಿಕೆ ನೀಡಿದರು. ಶಿವಯೋಗೀಶ್ವರ ಆಶ್ರಮವನ್ನು ನೋಡಿದರೆ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಈ ಗ್ರಾಮದಲ್ಲಿ ಒಂದು ಧರ್ಮ ಕ್ರಾಂತಿ ಪ್ರಾರಂಭಿಸಿದ್ದಾರೆಂದರೆ ತಪ್ಪಾಗಲಾರದು ಎಂದರು.

ಮಾಗಣಗೇರಿಯ ಶ್ರೀ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ರಾಣೇಬೆನ್ನೂರಿನ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಕಂಪ್ಲಿಯ ಪ್ರಭು ಸ್ವಾಮೀಜಿ, ಸಿಂದಗಿಯ ಶ್ರೀ ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿದರು. ಜನ್ಮ ದಿನೋತ್ಸವ ಆಚರಿಸಿಕೊಂಡ ಶಿವಯೋಗೀಶ್ವರ ಆಶ್ರಮದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗುಡ್ಡದಮಲ್ಲಾಪುರದ (ವೃಷಭ ರೂಪಿ) ಮೂಕಪ್ಪ ಮಹಾಸ್ವಾಮಿಗಳು,ತಿಪ್ಪಾುಕೊಪ್ಪದ ಶ್ರೀ ವಿರುಪಾಕ್ಷ ಸ್ವಾಮೀಜಿ, ಹೊಸರಿತ್ತಿಯ ಗುದ್ದಲೀಶ್ವರ ಸ್ವಾಮೀಜಿ, ಹಾವನೂರಿನ ಶಿವಕುಮಾರ ಸ್ವಾಮೀಜಿ, ಗುಡ್ಡದಾನ್ವೇರಿಯ ಶಿವಯೋಗಿ ಸ್ವಾಮೀಜಿ, ಮಹಾಸ್ವಾಮಿಗಳು, ಗುತ್ತಲದ ಶ್ರೀ ಗುರುಸಿದ್ಧ ಸ್ವಾಮೀಜಿ, ಬೆಳ್ಳಟ್ಟಿಯ ಬಸವರಾಜ ಸ್ವಾಮೀಜಿ ಉಪಸ್ಥಿತರಿದ್ದರು. ದಾನೇಶ್ವರಿ ಮಹಿಳಾ ಮಂಡಳದ ಸದಸ್ಯರು ಪ್ರಾರ್ಥಿಸಿದರು. ಶಾಂಭವೀತಾಯಿ ಕೆರೂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭುಸ್ವಾಮಿ ಹಾಲೇವಾಡಿಮಠ ಸ್ವಾಗತಿಸಿದರು. ಗುರುಪಾದಯ್ಯಾ ಸಾಲಿಮಠ ನಿರೂಪಿಸಿದರು. ನಂತರ ಮಹಾ ಪ್ರಸಾದ ವಿನಿಯೋಗ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ