ಆ್ಯಪ್ನಗರ

ಕಾಗಿನೆಲೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಇಂದು

ಹಾವೇರಿ: ಜಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆ ಕನಕ ಗುರುಪೀಠದ ಶ್ರೀ ಅಹಲ್ಯಬಾಯಿ ಹೊಲ್ಕರ್‌ ಸಭಾಂಗಣದಲ್ಲಿ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ, ಕರ್ನಾಟಕ ಪ್ರದೇಶ ಕುರಬರ ಸಂಘ ಜಿಲ್ಲಾ ಘಟಕ, ಜಿಲ್ಲಾ ಕುರುಬ ಸಮಾಜ ಬಾಂಧವರು ಸಹಯೋಗದಲ್ಲಿ ಜುಲೈ 16 ರಂದು ಬೆಳಗ್ಗೆ 11 ಗಂಟೆಗೆ ಶ್ರೀ ಗುರುಪೂರ್ಣಿಮಾ ಮಹೋತ್ಸವ, ಬ್ರಹ್ಮಲೀನ ಜಗದ್ಗುರು ಕೇಶವ ತಾರಕಾನಂದಪುರಿ ಮಹಾಸ್ವಾಮಿಗಳ 13ನೇ ವರ್ಷದ ಪುಣ್ಯಾರಾಧನೆ ಹಾಗೂ ನೂತನ ಪ್ರಸಾದ ನಿಲಯ ಉದ್ಘಾಟನಾ ಸಮಾರಂಭ ನಡೆಯಲಿದೆ.

Vijaya Karnataka 16 Jul 2019, 5:00 am
ಹಾವೇರಿ: ಜಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆ ಕನಕ ಗುರುಪೀಠದ ಶ್ರೀ ಅಹಲ್ಯಬಾಯಿ ಹೊಲ್ಕರ್‌ ಸಭಾಂಗಣದಲ್ಲಿ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ, ಕರ್ನಾಟಕ ಪ್ರದೇಶ ಕುರಬರ ಸಂಘ ಜಿಲ್ಲಾ ಘಟಕ, ಜಿಲ್ಲಾ ಕುರುಬ ಸಮಾಜ ಬಾಂಧವರು ಸಹಯೋಗದಲ್ಲಿ ಜುಲೈ 16 ರಂದು ಬೆಳಗ್ಗೆ 11 ಗಂಟೆಗೆ ಶ್ರೀ ಗುರುಪೂರ್ಣಿಮಾ ಮಹೋತ್ಸವ, ಬ್ರಹ್ಮಲೀನ ಜಗದ್ಗುರು ಕೇಶವ ತಾರಕಾನಂದಪುರಿ ಮಹಾಸ್ವಾಮಿಗಳ 13ನೇ ವರ್ಷದ ಪುಣ್ಯಾರಾಧನೆ ಹಾಗೂ ನೂತನ ಪ್ರಸಾದ ನಿಲಯ ಉದ್ಘಾಟನಾ ಸಮಾರಂಭ ನಡೆಯಲಿದೆ.
Vijaya Karnataka Web religious program in kaginale today
ಕಾಗಿನೆಲೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಇಂದು


ಅಂದು ಬೆಳಗ್ಗೆ 5 ಗಂಟೆಗೆ ಶ್ರೀ ಮಠದ ದೇವಾನುತೇವತೆಗಳಾದ ಶ್ರೀ ಬೀರಲಿಂಗೇಶ್ವರ, ಮೈಲಾರಲಿಂಗೇಶ್ವರ, ಮಹಾಸಿದ್ದೇಶ್ವರಿ, ಭಕ್ತ ಕನಕದಾಸ ಹಾಗೂ ಬ್ರಹ್ಮಲೀನ ಜಗದ್ಗುರುಗಳ ಅಧಿಷ್ಠಾನ ರುದ್ರಾಭೀಷೇಕ ಪೂಜಾ ಕಾರ್ಯ ನಡೆಯಲಿದೆ.

ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಪಾವನ ಸಾನಿಧ್ಯ ವಹಿಸುವರು. ಕಲ್ಲೋಡ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ, ಕೆ.ಆರ್‌ ನಗರದ ಶಾಖಾಮಠದ ಶಿವಾನಂದಪುರಿ ಶ್ರೀಗಳು ಸಾನಿಧ್ಯ ವಹಿಸುವರು. ತಿಂಥಣಿ ಶಾಖಾಮಠದ ಸಿದ್ಧರಾಮನಂದಪುರಿ ಸ್ವಾಮೀಜಿ ಸಮ್ಮುಖ ವಹಿಸುವರು. ಕುರುಬರ ಜಡೆದೇವರಮಠದ ಅಮೋಘ ಸಿದ್ಧೇಶ್ವರಾನಂದ ಸ್ವಾಮೀಜಿ ನೇತೃತ್ವ ವಹಿಸುವರು.

ಈ ಮಹೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯ ಕುರುಬ ಸಮಾಜ ಬಾಂಧವರು, ಜನಪ್ರತಿನಿಧಿಗಳು, ಮುಖಂಡರು, ಕನಕಾಭಿಮಾನಿಗಳು ಕುರುಬ ಸಮಾಜದ ವಿವಿಧ ಸಂಘಟನೆಗಳು ಹಾಗೂ ಸಮಸ್ತ ಕನಕಭಕ್ತಾಧಿಗಳು ಸಮಾರಂಭಕ್ಕೆ ಆಗಮಿಸಬೇಕೆಂದು ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಮಾರುತಿ ಹರಿಹರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತಗೌಡ ಗಾಜೀಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ