ಆ್ಯಪ್ನಗರ

ಉಲ್ಟಾ ನಿಂತು ಪ್ರತಿಭಟನೆ

ಸವಣೂರು :ಪಟ್ಟಣದ ನವನಗರದಲ್ಲಿ ರಸ್ತೆ, ಗಟಾರ, ಸಿಡಿ, ಬೀದಿ ದೀಪ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಸಮಾಜ ಪರಿವರ್ತನಾ ಸಮಿತಿ ಹಾಗೂ ಸ್ಥಳೀಯ ಸಾರ್ವಜನಿಕರು ಭಾನುವಾರ ಪ್ರತಿಭಟನೆ ನಡೆಸಿದರು. ನವನಗರದ ಮಧ್ಯ ಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಸ್ಥಳೀಯ ನಿವಾಸಿ, ಸಮಾಜ ಪರಿವರ್ತನಾ ಸಮಿತಿ ಅಧ್ಯಕ್ಷ ಮಹದೇವ ಮಹೇಂದ್ರಕ ತಲೆ ಕೆಳಗೆ, ಕಾಲುಗಳನ್ನು ಮೇಲೆ ಮಾಡಿ ಪ್ರತಿಭಟಿಸಿದರು.

Vijaya Karnataka 18 Jun 2018, 5:00 am
ಸವಣೂರು :ಪಟ್ಟಣದ ನವನಗರದಲ್ಲಿ ರಸ್ತೆ, ಗಟಾರ, ಸಿಡಿ, ಬೀದಿ ದೀಪ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಸಮಾಜ ಪರಿವರ್ತನಾ ಸಮಿತಿ ಹಾಗೂ ಸ್ಥಳೀಯ ಸಾರ್ವಜನಿಕರು ಭಾನುವಾರ ಪ್ರತಿಭಟನೆ ನಡೆಸಿದರು. ನವನಗರದ ಮಧ್ಯ ಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಸ್ಥಳೀಯ ನಿವಾಸಿ, ಸಮಾಜ ಪರಿವರ್ತನಾ ಸಮಿತಿ ಅಧ್ಯಕ್ಷ ಮಹದೇವ ಮಹೇಂದ್ರಕ ತಲೆ ಕೆಳಗೆ, ಕಾಲುಗಳನ್ನು ಮೇಲೆ ಮಾಡಿ ಪ್ರತಿಭಟಿಸಿದರು.
Vijaya Karnataka Web request the basic facility protests
ಉಲ್ಟಾ ನಿಂತು ಪ್ರತಿಭಟನೆ


ನಂತರ ಮಾತನಾಡಿದ ಅವರು, ನವನಗರದಲ್ಲಿ ಸುಮಾರು 20 ವರ್ಷಗಳಿಂದ ಸರಿಯಾದ ರಸ್ತೆ, ಚರಂಡಿ, ಸಿಡಿ ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯಗಳು ಮತ್ತು ಮೂಲ ಸೌಲಭ್ಯಗಳನ್ನು ನೀಡುವಲ್ಲಿ ಸ್ಥಳೀಯ ಪುರಸಭೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ನವನಗರದ ಮಧ್ಯ ಭಾಗದಲ್ಲಿ ಎರಡು ಕಡೆ ಸಿಡಿ ಹಾಳಾಗಿ ಮೂರು ವರ್ಷವಾದರು ದುರಸ್ತಿ ಮಾಡಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬಂದು ವಾಸುತ್ತಿರುವ ಪ್ರಭಾವಿ ವ್ಯಕ್ತಿಗಳ ಮನೆ ಮುಂದೆ ಸಿಸಿ ರಸ್ತೆಯಾಗಿವೆ. ಅಧಿಕಾರಿಗಳ ಕಾಂಪೌಂಡ ಗೋಡೆಗಳು ಎತ್ತರವಾಗಿವೆ. ಆದರೆ ಸುಮಾರು 20 ವರ್ಷದಿಂದ ನಗರದ ಇತರೆ ಕಡೆಯಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ನಗರದಲ್ಲಿ ಸವಣೂರಿನ ಉಪ ವಿಭಾಗಾಧಿಕಾರಿಗಳ, ತಹಸೀಲ್ದಾರ್‌, ನ್ಯಾಯಾಧೀಶರ ನಿವಾಸಗಳಿದ್ದರೂ ರಸ್ತೆ, ಚರಂಡಿಗಳಿಲ್ಲಾ. ಈ ಕುರಿತು ಉಪ ವಿಭಾಗಾಧಿಕಾರಿಗಳಿಗೆ, ತಹಸೀಲ್ದಾರಿಗೆ, ಪುರಸಭೆ ಮುಖ್ಯಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಆರೋಪಿಸಿದರು.

ನಾಗರಾಜ ಬಾಳಿಕಾಯಿ, ದೀಪಕ ರಾಶಿನಕರ, ಮಹಾಂತೇಶ ಹಾವಣಗಿ, ಶ್ರೀಪಾದ ಗಿತ್ತೆ, ಮಾರುತಿ ರಾಶಿನಕರ, ಅಂಭಿಕಾ ಮಹೇಂದ್ರಕ, ಶ್ರೀನಿವಾಸ ಗಿತ್ತೆ, ಉದಯ ಇಜಂಕರ, ಸಂತೋಷ ಮಹೇಂದ್ರಕ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ