ಆ್ಯಪ್ನಗರ

ವಿದ್ಯುತ್‌ ಪರಿವರ್ತಕ ತೆರವುಗೊಳಿಸಲು ಆಗ್ರಹ

ಕುಮಾರಪಟ್ಟಣ: ಸಮೀಪದ ಕರೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿರುವ ವಿದ್ಯುತ್‌ ಪರಿವರ್ತಕವನ್ನು ತೆರವುಗೊಳಿಸಿ ಎಂದು ಪಾಲಕರು ಆಗ್ರಹಿಸಿದ್ದಾರೆ.

Vijaya Karnataka 10 Dec 2019, 5:00 am
ಕುಮಾರಪಟ್ಟಣ: ಸಮೀಪದ ಕರೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿರುವ ವಿದ್ಯುತ್‌ ಪರಿವರ್ತಕವನ್ನು ತೆರವುಗೊಳಿಸಿ ಎಂದು ಪಾಲಕರು ಆಗ್ರಹಿಸಿದ್ದಾರೆ.
Vijaya Karnataka Web request to clear the transformer
ವಿದ್ಯುತ್‌ ಪರಿವರ್ತಕ ತೆರವುಗೊಳಿಸಲು ಆಗ್ರಹ


ಶಾಲಾ ಆವರಣದಲ್ಲಿರುವ ವಿದ್ಯುತ್‌ ಪರಿವರ್ತಕದಲ್ಲಿಲೈನ್‌ ಜಂಪ್‌ ಆದಾಗ ಬೆಂಕಿ ಕಿಡಿಗಳು ಉಂಟಾಗುತ್ತವೆ. ಅದರಿಂದ ಶಾಲಾ ಮಕ್ಕಳಿಗಾಗಲಿ ಮತ್ತು ಕಟ್ಟಡಕ್ಕೆ ತೊಂದರೆಯಾಗುವ ಮುನ್ನ ನಮ್ಮ ಅಪಾಯಕಾರಿ ಟಿಸಿ ಸ್ಥಳಾಂತರಗೊಳಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಶಾಲಾ ಮೈದಾನದಲ್ಲಿಆಟವಾಡುತ್ತಾ ಅಥವಾ ಅಕಸ್ಮಾತ್‌ ವಿದ್ಯುತ್‌ ಜೋಡಿ ಕಂಬಗಳ ಬಳಿ ತಂತಿ ತಗುಲಬಹುದು, ಮಕ್ಕಳು ತಂತಿ ಹಿಡಿಯಬಹುದು, ಮಳೆಗಾಲದಲ್ಲಿವಿದ್ಯುತ್‌ ಕಂಬದ ಸುತ್ತಮುತ್ತ ವಿದ್ಯುತ್‌ ಹರಿಯಬಹುದು, ಈ ಅವಘಡಗಳು ಸಂಭವಿಸುವ ಮುನ್ನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸರಕಾರಿ ಶಾಲೆಯ ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ