ಆ್ಯಪ್ನಗರ

ಪೌರತ್ವ ತಿದ್ದುಪಡಿ ಕಾಯಿದೆ ರದ್ದುಪಡಿಸಲು ಆಗ್ರಹ

ಸವಣೂರು: ದೇಶದ ಧರ್ಮ ನಿರಪೇಕ್ಷ ಪರಂಪರೆಗೆ ಮತ್ತು ಸಮಾಜಕ್ಕೆ ಕಪ್ಪು ಚುಕ್ಕೆಯಾಗಿರುವ ಪೌರತ್ವ ತಿದ್ದುಪಡಿ ಕಾಯಿದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ ಮತ್ತು ಸಿಎಬಿ) ರದ್ದು ಮಾಡುವಂತೆ ಆಗ್ರಹಿಸಿ ಸ್ಥಳೀಯ ಅಂಜುಮನ್‌ ಇಸ್ಲಾಂ ಸಂಸ್ಥೆ ನೇತೃತ್ವದಲ್ಲಿಮುಸ್ಲಿಮರು ಶನಿವಾರ ಸವಣೂರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

Vijaya Karnataka 29 Dec 2019, 5:00 am
ಸವಣೂರು: ದೇಶದ ಧರ್ಮ ನಿರಪೇಕ್ಷ ಪರಂಪರೆಗೆ ಮತ್ತು ಸಮಾಜಕ್ಕೆ ಕಪ್ಪು ಚುಕ್ಕೆಯಾಗಿರುವ ಪೌರತ್ವ ತಿದ್ದುಪಡಿ ಕಾಯಿದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ ಮತ್ತು ಸಿಎಬಿ) ರದ್ದು ಮಾಡುವಂತೆ ಆಗ್ರಹಿಸಿ ಸ್ಥಳೀಯ ಅಂಜುಮನ್‌ ಇಸ್ಲಾಂ ಸಂಸ್ಥೆ ನೇತೃತ್ವದಲ್ಲಿಮುಸ್ಲಿಮರು ಶನಿವಾರ ಸವಣೂರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
Vijaya Karnataka Web request to repeal the citizenship amendment act
ಪೌರತ್ವ ತಿದ್ದುಪಡಿ ಕಾಯಿದೆ ರದ್ದುಪಡಿಸಲು ಆಗ್ರಹ


ಸವಣೂರು ಪಟ್ಟಣದ ಶುಕ್ರವಾರ ಪೇಟೆಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಯಲ್ಲಿಹಾಯ್ದು ನಂತರ ಕಂದಾಯ ಇಲಾಖೆಯ ಆವರಣಕ್ಕೆ ಆಗಮಿಸಿದ ಪ್ರತಿಭಟನಾಕಾರರು ತಹಸೀಲ್ದಾರ ವಿ.ಡಿ.ಸಜ್ಜನ್‌ ಅವರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.

ಅಖಂಡ ಭಾರತ ದೇಶದಲ್ಲಿಐತಿಹಾಸಿಕದಿಂದ, ಸಾವಿರಾರು ವರ್ಷಗಳಿಂದ ವಿವಿಧ ಜಾತಿಯ ಜನರು ವಾಸವಾಗಿರುತ್ತಾರೆ. ಈ ಅಖಂಡ ಭಾರತವನ್ನು ವಸಾಹತುಶಾಹಿ ಹಿಡಿತದಿಂದ ಹೊರತರಲು ಧರ್ಮದ ಚೌಕಟ್ಟನ್ನು ಮೀರಿ ಹೋರಾಟ ನಡೆಸಿದ ನಮ್ಮ ದೇಶದಲ್ಲಿಧರ್ಮದ ಆಧಾರದಲ್ಲಿವಿಭಜನೆಗೆ ಕಾರಣವಾಗುವ ಈ ಕಾಯ್ದೆಯು ನಮ್ಮ ಸಂವಿಧಾನದ ಆಸೆಯಗಳ ವಿರುದ್ಧವಾಗಿರುತ್ತದೆ. ಧರ್ಮ ನಿರಪೇಕ್ಷತೆ ಮತ್ತು ಸಮಾನತೆ ಸಂವಿಧಾನದ ಆತ್ಮದ ಒಂದು ಭಾಗವಾಗಿದ್ದು, ಈಗ ಈ ಪೌರತ್ವ ತಿದ್ದುಪಡೆ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಯನ್ನು ಜಾರಿಗೊಳಿಸಿದ ಕಾಯ್ದೆ ಸಂವಿದಾನದ 14, 15,25 ಹಾಗೂ 26 ನೇ ವಿಧಿಗಳಿಗೆ ವಿರುದ್ಧವಾಗಿರುತ್ತದೆ. ಈ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನೋಂದಣಿ ಕಾಯ್ದೆ ಅನ್ವಯ ಭಾರತ ದೇಶದ ಪೌರತ್ವ ತಿದ್ದುಪಡಿ ನೀಡುವ ವಿಚಾರದಲ್ಲಿಧರ್ಮದ ಆಧಾರದಲ್ಲಿತಾರತಮ್ಯ ಮಾಡುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ರದ್ದು ಪಡಿಸಬೇಕೆಂದು ಮುಸ್ಲಿಮರು ಮನವಿಯಲ್ಲಿತಿಳಿಸಿದ್ದಾರೆ.

ಅಂಜುಮನ್‌ ಸಂಸ್ಥೆ ಅಧ್ಯಕ್ಷ ಜೀಶಾನಅಹ್ಮದಖಾನ್‌ ಫಠಾಣ, ಉಪಾಧ್ಯಕ್ಷ ಇಸಾಕಅಹ್ಮದಖಾನ್‌ ಪಠಾಣ, ಪದಾಧಿಕಾರಿಗಳಾದ ನನ್ನೇಮಿಯಾ ಬನ್ನೂರ, ಅಬ್ದುಲ್‌ವಾಹಿದ ಫರಾಶ, ಇಸೂಪಅಹ್ಮದ್‌ ಫರಾಶ, ಕಾಂಗ್ರೆಸ್‌ ಪಕ್ಷದ ಪದಾಧಿಕಾರಿಗಳಾದ ಎಸ್‌.ಎಸ್‌.ಶಿವಳ್ಳಿ, ಕುಮಾರ ಅಡವಿಸ್ವಾಮಿಮಠ, ನಾಗಪ್ಪ ತಿಪ್ಪಕ್ಕನವರ, ಮಂಜುನಾಥ ಉಪ್ಪಿನ, ಅರ್‌.ಎಂ.ಡಂಬಳ, ಜಿ.ಎಂ.ಫಠಾಣ, ಅದ್ದೂ ಫರಾಶ, ಶಂಕ್ರಪ್ಪ ದೊಡ್ಡಮನಿ, ಬಂಕಾಪೂರ ಅಂಜುಮನ್‌ ಸಂಸ್ಥೆ ಅಧ್ಯಕ್ಷ ಮಹ್ಮದ ಹುಸೇನ್‌ ಕತೀಬ, ರಬ್ಬಾನಿ ತಹರಿ, ಮುಸ್ಲಿಮರು ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆಯಲ್ಲಿಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ