ಆ್ಯಪ್ನಗರ

ಶಿಶು ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ತಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ

ಶಿಗ್ಗಾವಿ: ಆಹಾರ ಪೂರೈಕೆ ಸೇರಿ ಅಂಗನವಾಡಿ ನೇಮಕದಲ್ಲಿ ಸರಕಾರದ ನಿಯಮ ಉಲ್ಲಂಘಿಸಿ ಭ್ರಷ್ಟಾಚಾರ ಎಸಗಿದ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಮೇಲೆ ಕಾನೂನು ಕ್ರಮಕೈಗೊಳ್ಳಲು ಮಂಗಳವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿನಿರ್ಣಯ ಕೈಗೊಳ್ಳಲಾಯಿತು.

Vijaya Karnataka 25 Nov 2020, 5:00 am
ಶಿಗ್ಗಾವಿ: ಆಹಾರ ಪೂರೈಕೆ ಸೇರಿ ಅಂಗನವಾಡಿ ನೇಮಕದಲ್ಲಿ ಸರಕಾರದ ನಿಯಮ ಉಲ್ಲಂಘಿಸಿ ಭ್ರಷ್ಟಾಚಾರ ಎಸಗಿದ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಮೇಲೆ ಕಾನೂನು ಕ್ರಮಕೈಗೊಳ್ಳಲು ಮಂಗಳವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿನಿರ್ಣಯ ಕೈಗೊಳ್ಳಲಾಯಿತು.
Vijaya Karnataka Web 24SGN-5_23
ಶಿಗ್ಗಾವಿ ತಾಪಂ ಸಾಮಾನ್ಯ ಸಭೆಯಲ್ಲಿಚರ್ಚೆಗಿಳಿದ ಸದಸ್ಯರು, ಅಧಿಕಾರಿಗಳು.


ತಾಪಂ ಸಭಾಭವನದಲ್ಲಿಅಧ್ಯಕ್ಷೆ ಪಾರವ್ವ ಆರೇರ್‌ ಅಧ್ಯಕ್ಷತೆಯಲ್ಲಿನಡೆದ ಸಭೆಯಲ್ಲಿಸದಸ್ಯ ಶ್ರೀಕಾಂತ ಪೂಜಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕರ್ತವ್ಯ ನಿರ್ಲಕ್ಷತ್ರ್ಯ, ಆಹಾರ ಪದಾರ್ಥ ಪೂರೈಕೆ, ನೇಮಕಾತಿ, ವಿವಿಧ ಕಾರ್ಯಕ್ರಮದ ನೆಪದಲ್ಲಿಅವ್ಯವಹಾರ ನಡೆದ ಬಗ್ಗೆ ದಾಖಲೆ ಪ್ರದರ್ಶಿಸಿದರು.

ಸದಸ್ಯರ ಆರೋಪಗಳಿಗೆ ಸ್ಪಷ್ಟ ಉತ್ತರ ನೀಡಿದ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ಸದಸ್ಯರಾದ ವಿಶ್ವನಾಥ ಹರವಿ, ಯಲ್ಲಪ್ಪ ನರಗುಂದ, ಮಲ್ಲೇಶಪ್ಪ ದೊಡ್ಡಮನಿ, ತಾರಾಮತಿ ಧರಣೇಪ್ಪನವರ, ಅಧಿಕಾರಿಗಳ ಶಾಮೀಲಿನಿಂದ ಕೆಲ ಅಂಗನವಾಡಿಗೆ ಪೂರೈಸುವ ಪದಾರ್ಥಗಳು ಕಿರಾಣಿ ಅಂಗಡಿಗಳಲ್ಲಿಸಿಗುತ್ತಿವೆ. ಕೇಂದ್ರಗಳ ಬದಲು ಕಾರ್ಯಕರ್ತೆಯರ ಮನೆ ತಲುಪುತ್ತಿದೆ ಎಂದು ಆರೋಪ ಮಾಡಿದರು.

ಅಂಗನವಾಡಿಗಳಿಗೆ ಆಹಾರ ಪದಾರ್ಥಗಳ ಪ್ಯಾಕೆಟ್‌ ಪೂರೈಕೆ ವ್ಯವಸ್ಥೆಯಿತ್ತು. ಹೊಸದಾಗಿ ಯೋಜನಾಧಿಕಾರಿಗಳು ಬಂದ ಮೇಲೆ ಇದನ್ನೆಲ್ಲಕೈಬಿಟ್ಟು ಬಿಡಿಯಾಗಿ ಪೂರೈಕೆಯಾಗುತ್ತಿದೆ. ಇದು ಅವ್ಯವಹಾರದ ಕೈಗನ್ನಡಿಯಾಗಿದೆ. ವಿವಿಧ ಕಾರ್ಯಕ್ರಮದ ಇಲಾಖೆಗೆ ಬಂದ ಲಕ್ಷಾಂತರ ರೂ. ದುರ್ಬಳಕೆಯಾಗಿದೆ ಎಂದು ದೂರಿದರು.

ತಾಲೂಕಿನಾದ್ಯಂತ ಅಂಗನವಾಡಿ ಕೇಂದ್ರಗಳಿಗೆ ಪ್ಯಾಕೇಟ್‌ ಆಹಾರ ಪದಾರ್ಥ ಪೂರೈಸುವ ಬಂಕಾಪುರದ ಎಂ.ಎಸ್‌.ಪಿ.ಸಿ ಕೇಂದ್ರ ಲಕ್ಷಾಂತರ ರೂ. ಅವ್ಯವಹಾರದ ತಾಣವಾಗಿದೆ. ಅಲ್ಲಿನ ಅವ್ಯವಹಾರ ಕಂಡರೂ ಅಧಿಕಾರಿಗಳು ಮೌನವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಂಗನವಾಡಿಗಳಿಗೆ ಭೇಟಿ ನೀಡಿದ ಯೋಜನಾಧಿಕಾರಿ ನೀತಾ ವಾಡಕರ್‌ ಅವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.

ಜಿಪಂ, ತೋಟಗಾರಿಕೆ, ಪಿಡಬ್ಲುಡಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು. ಉಪಾಧ್ಯಕ್ಷೆ ವಿಜಯಲಕ್ಷಿತ್ರ್ಮೕ ಮುಂದಿನಮನಿ, ಸದಸ್ಯೆ ಸೋಮವ್ವ ರಾಠೋಡ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ