ಆ್ಯಪ್ನಗರ

ಸಂಕುಚಿತ ಮನೋಭಾವನೆಯಿಂದ ಆಚರಣೆ ಕಡೆಗಣನೆ

ಅಕ್ಕಿಆಲೂರು: ವೀರ ಪರಂಪರೆ ಹೊತ್ತು ಜಗತ್ತಿನ ದೇವರಮನೆ ಎಂದೆನಿಸಿಕೊಂಡಿರುವ ಭಾರತದಲ್ಲೀಗ ಧರ್ಮ ಮರೆಯಾಗುತ್ತಿರುವುದು ನಿಜಕ್ಕೂ ಬೇಸರ ಮೂಡಿಸಿದೆ. ಬಿಡುವಿಲ್ಲದ ಜಂಜಾಟಗಳ ಮಧ್ಯೆ ಸಿಲುಕಿ ಪ್ರತಿಯೊಬ್ಬರೂ ಮಠ-ಮಂದಿರಗಳಿಂದ ದೂರ ಸರಿಯುತ್ತಿದ್ದಾರೆ ಎಂದು ಯಲವಟ್ಟಿಯ ಸದ್ಗುರು ಯೋಗಾನಂದ ಸ್ವಾಮೀಜಿ ವಿಷಾದಿಸಿದರು.

Vijaya Karnataka 28 Aug 2019, 5:00 am
ಅಕ್ಕಿಆಲೂರು: ವೀರ ಪರಂಪರೆ ಹೊತ್ತು ಜಗತ್ತಿನ ದೇವರಮನೆ ಎಂದೆನಿಸಿಕೊಂಡಿರುವ ಭಾರತದಲ್ಲೀಗ ಧರ್ಮ ಮರೆಯಾಗುತ್ತಿರುವುದು ನಿಜಕ್ಕೂ ಬೇಸರ ಮೂಡಿಸಿದೆ. ಬಿಡುವಿಲ್ಲದ ಜಂಜಾಟಗಳ ಮಧ್ಯೆ ಸಿಲುಕಿ ಪ್ರತಿಯೊಬ್ಬರೂ ಮಠ-ಮಂದಿರಗಳಿಂದ ದೂರ ಸರಿಯುತ್ತಿದ್ದಾರೆ ಎಂದು ಯಲವಟ್ಟಿಯ ಸದ್ಗುರು ಯೋಗಾನಂದ ಸ್ವಾಮೀಜಿ ವಿಷಾದಿಸಿದರು.
Vijaya Karnataka Web ritual disregard for a narrow mindedness
ಸಂಕುಚಿತ ಮನೋಭಾವನೆಯಿಂದ ಆಚರಣೆ ಕಡೆಗಣನೆ


ಹೋತನಹಳ್ಳಿಯ ಸಿದ್ದಾರೂಢ ಮಠದಲ್ಲಿ ಸಿದ್ದಾರೂಢ ಕಥಾಮೃತ ಪಾರಾಯಣ ಮುಕ್ತಾಯ, ಜಲ ರಥೋತ್ಸವ ಹಾಗೂ ಸದ್ಗುರು ಶಂಕರಾನಂದ ಸ್ವಾಮೀಜಿಯ ಮೌನಾನುಷ್ಠಾನ ಮುಕ್ತಾಯ ಸಮಾರಂಭದ ಅಂಗವಾಗಿ ಆಯೋಜಿಸಲಾಗಿದ್ದ ಧಾರ್ಮಿಕ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಇಂದಿನ ಬದಲಾದ ದಿನಮಾನಗಳಲ್ಲಿಯೂ ಧಾರ್ಮಿಕ ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವತ್ತ ಪ್ರತಿಯೊಬ್ಬರೂ ಗಮನಹರಿಸಬೇಕಿದೆ. ಪರಂಪರಾಗತವಾಗಿ ಹಲವಾರು ಆಚರಣೆ ಮೈಗೂಢಿಸಿಕೊಂಡು ಧರ್ಮ ಕ್ರಾಂತಿಯ ಮೂಲಕ ನಾಡು ಸಮೃದ್ಧಗೊಳಿಸುವ ಕಾರ್ಯ ನಡೆಯಬೇಕಿದೆ. ಆಧುನಿಕ ಜಗತ್ತಿನಲ್ಲಿ ಮನುಷ್ಯ ಸಂಕುಚಿತ ಮನೋಭಾವನೆ ಹೊಂದಿ, ಆಚರಣೆ ಕಡೆಗಣಿಸುತ್ತಿದ್ದಾನೆ. ವೈವಿಧ್ಯಮಯವಾದ ಸಂಸ್ಕೃತಿ ಹೊಂದಿರುವ ನಮ್ಮ ರಾಷ್ಟ್ರ ಸರ್ವರನ್ನು ಸಮಾನವಾಗಿ ಕಾಣುವ ಅಭಿಲಾಶೆ ಹೊಂದಿದ್ದು, ಅದನ್ನು ಸಾಬೀತುಪಡಿಸಬೇಕಾದ ಜವಾಬ್ದಾರಿ ಯುವ ಸಮೂಹದ ಮೇಲಿದೆ. ಕೆಲವು ಕಡೆ ಸಮಾಜದ ಡೊಂಕು ತಿದ್ದಿ ಪ್ರತಿಯೊಬ್ಬರನ್ನು ಧರ್ಮ ಮಾರ್ಗದಲ್ಲಿ ನಡೆಸಿ ಜೀವನಮುಕ್ತಿ ದೊರಕಿಸಬೇಕಾದ ಮಹತ್ತರ ಕಾರ್ಯ ಯಶಸ್ವಿಗೊಳಿಸಬೇಕಿದೆ ಎಂದರು.

ಮೌನಾನುಷ್ಠಾನ ಮುಕ್ತಾಯಗೊಳಿಸಿದ ಸದ್ಗುರು ಶಂಕರಾನಂದ ಸ್ವಾಮೀಜಿ ಮಾತನಾಡಿ, ಇಂದು ಸಮಾಜದ ಪ್ರತಿಯೊಬ್ಬರೂ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಧರ್ಮದ ನಿಜವಾದ ಮೌಲ್ಯ ಮರೆತಿರುವುದರಿಂದ ದಿನೇ ದಿನೆ ಧರ್ಮ ಆಚರಣೆಗಳಲ್ಲಿ ಬಿರುಕು ಮೂಡುತ್ತಿದೆ. ಮನುಷ್ಯನಲ್ಲಿ ಜೀವಾತ್ಮ ಹುಟ್ಟಿದ ಮೇಲೆ ಶಿವಜ್ಞಾನ ಇಲ್ಲದಿದ್ದರೆ ಜನ್ಮ ಸಾರ್ಥಕಥೆ ಮುಟ್ಟುವುದಿಲ್ಲ ಎಂದರು.

ಕರ್ಜಗಿಯ ಭೀಮಾಂಬಿಕಾ ದೇವಸ್ಥಾನದ ಧರ್ಮದರ್ಶಿ ಶಂಕರ ಸ್ವಾಮೀಜಿ ಮಾತನಾಡಿ, ಪರಸ್ಪರರಲ್ಲಿ ಅನ್ಯೋನ್ಯವಾಗಿರದೇ ಪೀಡಿಸುವುದು ಮಹಾಪಾಪ ಎಂಬುದು ಪುರಾಣ ಗ್ರಂಥಗಳಿಂದ ತಿಳಿಯುತ್ತದೆ. ಧರ್ಮ, ಸಂಸ್ಕೃತಿ ಮೀರಿ ನಡೆಯುತ್ತಿರುವ ಸಾಮಾನ್ಯರ ಬದುಕಿನಲ್ಲಿ ಧರ್ಮಬೋಧನೆಯ ಕೊರತೆಯಿಂದಾಗಿ ಸಂಕಷ್ಟ ನೆಲೆಯೂರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸದ್ಭಕ್ತ ಮಂಡಳಿ ಸದಸ್ಯರು ಹಾಗೂ ಹೋತನಹಳ್ಳಿ, ಅಕ್ಕಿವಳ್ಳಿ, ಅರಳೇಶ್ವರ, ಕಾಲ್ವೆಯಲ್ಲಾಪುರ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ