ಆ್ಯಪ್ನಗರ

ರಸ್ತೆ ಅಪಘಾತ: ಬೈಕ್‌ ಸವಾರ ಸಾವು

ಬ್ಯಾಡಗಿ: ಹೊಸ ವರ್ಷಾಚರಣೆ ದಿನದಂದೇ ಬೈಕ್‌ ಸವಾರನೊಬ್ಬ ರಸ್ತೆ ಪಕ್ಕ ನಿಂತಿದ್ದ ಟಂಟಂ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದು ತೀವ್ರವಾಗಿ ಗಾಯಗೊಂಡ ಹಿಂಬದಿ ಸವಾರ ಆಸ್ಪತ್ರೆಗೆ ದಾಖಲಾದ ಘಟನೆ ಪಟ್ಟಣದ ಮುಖ್ಯರಸ್ತೆಯಲ್ಲಿಮಂಗಳವಾರ ಕಳೆದ ತಡರಾತ್ರಿ ನಡೆದಿದೆ.

Vijaya Karnataka 2 Jan 2020, 5:00 am
ಬ್ಯಾಡಗಿ: ಹೊಸ ವರ್ಷಾಚರಣೆ ದಿನದಂದೇ ಬೈಕ್‌ ಸವಾರನೊಬ್ಬ ರಸ್ತೆ ಪಕ್ಕ ನಿಂತಿದ್ದ ಟಂಟಂ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದು ತೀವ್ರವಾಗಿ ಗಾಯಗೊಂಡ ಹಿಂಬದಿ ಸವಾರ ಆಸ್ಪತ್ರೆಗೆ ದಾಖಲಾದ ಘಟನೆ ಪಟ್ಟಣದ ಮುಖ್ಯರಸ್ತೆಯಲ್ಲಿಮಂಗಳವಾರ ಕಳೆದ ತಡರಾತ್ರಿ ನಡೆದಿದೆ.
Vijaya Karnataka Web road accident bike rider killed
ರಸ್ತೆ ಅಪಘಾತ: ಬೈಕ್‌ ಸವಾರ ಸಾವು


ಮೃತನನ್ನು ತಾಲೂಕಿನ ಮಲ್ಲೂರ ಗ್ರಾಮದ ಪ್ರವೀಣ ಬಸವರಾಜ ಶಿಂಧೆ (25) ಎಂದು ಗುರುತಿಸಲಾಗಿದ್ದು, ರಾತ್ರಿ ಹೊಸ ವರ್ಷಾಚರಣೆ ಸಂದರ್ಭದಲ್ಲಿಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಪ್ರವಾಸಕ್ಕೆಂದು ಮಕ್ಕಳನ್ನು ಕದಮನಹಳ್ಳಿಯಿಂದ ಬ್ಯಾಡಗಿ ಎಸ್‌ಜೆಜೆಎಂ ಶಾಲೆಗೆ ಬಿಟ್ಟು ಬರಲು ಹೊರಟಿದ್ದ ಟಂಟಂ ಗಾಡಿಯನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಲಾಗಿತ್ತು. ಹಳೇ ಪುರಸಭೆಯಿಂದ ವೇಗವಾಗಿ ಚಲಿಸುತ್ತಿದ್ದ ಬೈಕ್‌ ಸವಾರ ಪಟ್ಟಣದ ರಸ್ತೆ ಮಧÜ್ಯದಲ್ಲಿನ್ಯೂ-ಇಯರ್‌ ಎಂದು ಬರೆಯುತ್ತಾ ಕುಳಿತಿದ್ದವರನ್ನು ತಪ್ಪಿಸಲು ಹೋಗಿ ಪಕ್ಕಕ್ಕೆ ನಿಲ್ಲಿಸಿದ್ದ ಟಂಟಂಗೆ ಡಿಕ್ಕಿ ಹೊಡೆದಿದ್ದಾಗಿ ತಿಳಿದು ಬಂದಿದೆ.

ತೀವ್ರವಾಗಿ ಗಾಯಗೊಂಡಿದ್ದ ಹಿಂಬದಿ ಸವಾರ ಅನಿಲ್‌ ರಾಮರಾವ್‌ ಸಾಳುಂಕೆ ಎಂಬಾತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ