ಆ್ಯಪ್ನಗರ

ರಸ್ತೆ ಅಪಘಾತ: ಮಗು ಸಾವು, ಇಬ್ಬರಿಗೆ ಗಾಯ

ಬ್ಯಾಡಗಿ: ಆಟೊ ಹಾಗೂ ಟಾಟಾ ಏಸ್‌ ವಾಹನದ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಪುಟ್ಟ ಮಗುವೊಂದು ಮೃತ ಪಟ್ಟು ಇನ್ನಿಬ್ಬರು ಗಾಯಗೊಂಡ ಘಟನೆ ಪಟ್ಟಣ ರಾಮಗೊಂಡನಹಳ್ಳಿ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

Vijaya Karnataka 23 May 2019, 5:00 am
ಬ್ಯಾಡಗಿ: ಆಟೊ ಹಾಗೂ ಟಾಟಾ ಏಸ್‌ ವಾಹನದ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಪುಟ್ಟ ಮಗುವೊಂದು ಮೃತ ಪಟ್ಟು ಇನ್ನಿಬ್ಬರು ಗಾಯಗೊಂಡ ಘಟನೆ ಪಟ್ಟಣ ರಾಮಗೊಂಡನಹಳ್ಳಿ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
Vijaya Karnataka Web road accident child death two injured
ರಸ್ತೆ ಅಪಘಾತ: ಮಗು ಸಾವು, ಇಬ್ಬರಿಗೆ ಗಾಯ


ಪಟ್ಟಣದ ವಿದ್ಯಾನಗರ ನಿವಾಸಿ ರವಿ ಬೋವಿ ಎಂಬುವರರ ಮಗ ದಿಲೀಪ (12 ತಿಂಗಳು) ಮೃತ ಬಾಲಕ. ಬುಧವಾರ ಮಧ್ಯಾಹ್ನ ಬಿಸಲಹಳ್ಳಿ ಕಡೆಯಿಂದ ಆಟೊ ಚಾಲಕ ರವಿ (39) ತನ್ನ ಪತ್ನಿ ಜಯಲಕ್ಷ್ಮೀ (27) ಹಾಗೂ ಮಗ ದಿಲೀಪನೊಂದಿಗೆ ಬ್ಯಾಡಗಿ ಕಡೆಗೆ ಆಗಮಿಸುತ್ತಿರುವ ಸಂದರ್ಭದಲ್ಲಿ ಎಂಡಿಎಚ್‌ ಶಾಲೆಯ ಹತ್ತಿರದಲ್ಲಿ ಎದುರಿಗೆ ಬಂದ ಟಾಟಾ ಏಸ್‌ ವಾಹನಕ್ಕೆ ಆಟೊ ಡಿಕ್ಕಿ ಹೊಡೆದ ಪರಿಣಾಮ ಆಟೊ ಪಲ್ಟಿಯಾಗಿದೆ.

ಅಪಘಾತದ ರಭಸಕ್ಕೆ ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು ತೀವ ರಕ್ತ ಸ್ರಾವವಾಗಿದೆ. ಉಳಿದಂತೆ ಜೊತೆಯಲ್ಲಿದ್ದ ಜಯಲಕ್ಷ್ಮೀಯ ಕೈಗೆ ಬಲವಾದ ಏಟು ಬಿದ್ದಿದೆ. ಆಟೊ ಚಾಲಕ ರವಿ ಕೂಡಾ ಗಾಯಗೊಂಡಿದ್ದು ಅಪಘಾತದ ಸ್ಥಳದಲ್ಲಿದ್ದವರು ತಕ್ಷ ಣ ಮೂವರನ್ನು ತಾಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ.

ಮಾರ್ಗ ಮಧ್ಯೆ ಮಗು ಸಾವು: ತಾಲೂಕಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ತಲೆಗೆ ಬಲವಾದ ಪೆಟ್ಟು ಕಾರಣ ಮಗು ದೀಲಿಪ ಸಾವಪ್ಪಿದೆ. ಉಳಿದಂತೆ ತಂದೆ ರವಿ ಹಾಗೂ ತಾಯಿ ವಿಜಯಲಕ್ಷ್ಮೀಯನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ. ಈ ಕುರಿತಂತೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ