ಆ್ಯಪ್ನಗರ

ತುರ್ತು ಪರಿಹಾರಕ್ಕೆ ಪ್ರತಿ ಜಿಲ್ಲಾಡಳಿತಕ್ಕೆ 5 ಕೋಟಿ ರೂ.

ಬ್ಯಾಡಗಿ: ರಾಜ್ಯದ 156 ತಾಲೂಕುಗಳಲ್ಲಿ ಒಂದು ಕಡೆ ಅತಿವೃಷ್ಠಿ ಹಾಗೂ ಮತ್ತೊಂದೆಡೆ ಬರ ಪರಿಸ್ಥಿತಿ ಎದುರಾಗಿದೆ. ಹಾವೇರಿ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು, ತುರ್ತು ಪರಿಹಾರ ಕಾರ್ಯಕೈಗೊಳ್ಳಲು ಪ್ರತಿ ಜಿಲ್ಲಾಡಳಿತಕ್ಕೆ ಐದು ಕೋಟಿ ರೂ. ಹಾಗೂ ಪ್ರತಿ ತಾಲೂಕಾಡಳಿತಕ್ಕೆ 50 ಲಕ್ಷ ರೂ. ಅನುದಾನ ಮೀಸಲಿರಿಸಿದೆ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದರು.

Vijaya Karnataka 8 Jan 2019, 5:00 am
ಬ್ಯಾಡಗಿ: ರಾಜ್ಯದ 156 ತಾಲೂಕುಗಳಲ್ಲಿ ಒಂದು ಕಡೆ ಅತಿವೃಷ್ಠಿ ಹಾಗೂ ಮತ್ತೊಂದೆಡೆ ಬರ ಪರಿಸ್ಥಿತಿ ಎದುರಾಗಿದೆ. ಹಾವೇರಿ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು, ತುರ್ತು ಪರಿಹಾರ ಕಾರ್ಯಕೈಗೊಳ್ಳಲು ಪ್ರತಿ ಜಿಲ್ಲಾಡಳಿತಕ್ಕೆ ಐದು ಕೋಟಿ ರೂ. ಹಾಗೂ ಪ್ರತಿ ತಾಲೂಕಾಡಳಿತಕ್ಕೆ 50 ಲಕ್ಷ ರೂ. ಅನುದಾನ ಮೀಸಲಿರಿಸಿದೆ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದರು.
Vijaya Karnataka Web rs 5 crore for each district administration for emergency relief
ತುರ್ತು ಪರಿಹಾರಕ್ಕೆ ಪ್ರತಿ ಜಿಲ್ಲಾಡಳಿತಕ್ಕೆ 5 ಕೋಟಿ ರೂ.


ತಾಲೂಕಿನ ಅಗನಸಹಳ್ಳಿ ಹಾಗೂ ರಾಮಗೊಂಡನಹಳ್ಳಿ ಕೆರೆಗೆ ಭೇಟಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಒಂದು ಕಡೆ ಅತಿವೃಷ್ಠಿ ಹಾಗೂ ಮತ್ತೊಂದೆಡೆ ಬರಪರಿಸ್ಥಿತಿ ಎದುರಾಗಿದೆ. ರಾಜ್ಯಾದ್ಯಂತ ಉಂಟಾಗಿರುವ ಬರ ಪರಿಹಾರ ನಿರ್ವಹಣೆಗೆ ಯಾವುದೇ ಅನುದಾನದ ಕೊರತೆ ಇಲ್ಲ ಎಂದು ಹೇಳಿದರು.

100 ರಿಂದ 150 ದಿನಕ್ಕೆ ಹೆಚ್ಚಳ:ಉದ್ಯೋಗ ಅರಸಿ ಗುಳೆ ಹೋಗಬಾರದು ಎಂಬ ಉದ್ದೇಶದಿಂದ ಉದ್ಯೋಗ ಖಾತ್ರಿ ಯೋಜನೆಯಡಿ 100 ದಿನದಿಂದ 150 ಕೆಲಸದ ದಿನಗಳನ್ನು ಹೆಚ್ಚಿಸಲಾಗಿದೆ. ಕುಟುಂಬದ ಬದಲು ಪ್ರತಿ ವ್ಯಕ್ತಿಗೆ 150 ದಿನ ಉದ್ಯೋಗ ನೀಡಲು ನಿರ್ಧರಿಸಲಾಗಿದೆ. ಈ ಕುರಿತಂತೆ ಕ್ರಿಯಾಯೋಜನೆ ಸಿದ್ಧಪಡಿಸಲು ಜಿಪಂ ಮುಖ್ಯ ಕಾರ್ಯ ನಿರ್ವಹ ಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ರಾಜ್ಯದ ಹೊರಕ್ಕೆ ಮೇವು ಮಾರಾಟ ನಿಷೇಧ:ರಾಜ್ಯದಲ್ಲಿ ತೀವ್ರ ಬರ ಉಂಟಾಗಿರುವ ಕಾರಣ ರಾಜ್ಯದಿಂದ ಹೊರ ರಾಜ್ಯಗಳಿಗೆ ಮೇವು ಮಾರಾಟ ಹಾಗೂ ಸಾಗಾಣಿಕೆಯನ್ನು 31 ಮೇ 2019 ರವರೆಗೆ ರಾಜ್ಯ ಸರಕಾರ ನಿಷೇಧಿಸಿದೆ. ಆದರೆ ರಾಜ್ಯದೊಳಗೆ ಯಾವುದೇ ಜಿಲ್ಲೆಗೆ ಮೇವು ಸಾಗಾಣಿಕೆಗೆ ನಿರ್ಭಂಧವಿರುವುದಿಲ್ಲ ಎಂದರು.

ಬರ ಘೋಷಣೆ ನಮ್ಮ ಕೈಲಿಲ್ಲ: ಬರ ಪ್ರದೇಶ ಘೋಷಣೆ ನಮ್ಮ ಕೈಲಿಲ್ಲ, ಅದೇನಿದ್ದರೂ ಕೇಂದ್ರ ಸರಕಾರದ ಮಾರ್ಗ ಸೂಚಿಯಂತೆ ನಡೆಯುವ ಕಾರ‍್ಯ. ಪರಿಹಾರ ಹಣ ಹೆಚ್ಚಳ ಮಾಡುವ ಹಾಗೂ ಬರ ಪರಿಹಾರಕ್ಕೆ ಹೆಚ್ಚಿನ ಅನುದಾನ ನೀಡುವುದು ಕೇಂದ್ರದ ಮಾರ್ಗಸೂಚಿಯಂತೆ ನಡೆಯಬೇಕಿದೆ ಎಂದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಮರುಳು ಸಾಗಾಟ ಯಾರೇ ಮಾಡಲಿ ರೈತರ ಬೆಳೆಗಳಿಗೆ ಹಾನಿ ಮಾಡದಂತೆ ರಸ್ತೆ ನಿರ್ಮಿಸಿಕೊಂಡು ಹೋಗಬೇಕು, ಸಂಚರಿಸಬೇಕು ಇದು ಕಾಮನ್‌ಸೆನ್ಸ್‌, ಅಕ್ರಮ ಮರುಳುಗಾರಿಕೆ ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ