ಆ್ಯಪ್ನಗರ

ನೆಗಳೂರು ಶ್ರೀಗಳಿಂದ ದಲಿತರಿಗೆ ರುದ್ರಾಕ್ಷಿ ಧಾರಣೆ

ಹಾವೇರಿ: ನೆಗಳೂರ ಸಂಸ್ಥಾನ ಮಠದ ಷ.ಬ್ರ.ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ತಮ್ಮ 12ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ಅಂಗವಾಗಿ ಕೊರಡೂರು ಗ್ರಾಮದ ದಲಿತ ಕೇರಿಗಳಲ್ಲಿಭಕ್ತರಿಗೆ ರುದ್ರಾಕ್ಷಿ ಧರಿಸಿದರು.

Vijaya Karnataka 1 Feb 2020, 5:00 am
ಹಾವೇರಿ: ನೆಗಳೂರ ಸಂಸ್ಥಾನ ಮಠದ ಷ.ಬ್ರ.ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ತಮ್ಮ 12ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ಅಂಗವಾಗಿ ಕೊರಡೂರು ಗ್ರಾಮದ ದಲಿತ ಕೇರಿಗಳಲ್ಲಿಭಕ್ತರಿಗೆ ರುದ್ರಾಕ್ಷಿ ಧರಿಸಿದರು.
Vijaya Karnataka Web rudraksha price for dalits
ನೆಗಳೂರು ಶ್ರೀಗಳಿಂದ ದಲಿತರಿಗೆ ರುದ್ರಾಕ್ಷಿ ಧಾರಣೆ


ಬೆಳಗ್ಗೆ 7 ಗಂಟೆಗೆ ಗ್ರಾಮದಲ್ಲಿಆರಂಭವಾದ ಶ್ರೀಗಳ ಪಾದಯಾತ್ರೆ ದಲಿತರ ಮನೆ ಮನೆಗೆ ತೆರಳಿ ರುದ್ರಾಕ್ಷಿ ನೀಡುವ ಮೂಲಕ ಸಂಸ್ಕಾರ ಬೋಧಿಸಿದರು. ಜಾತಿ-ಧರ್ಮಗಳ ಎಲ್ಲೆಯನ್ನು ಮೀರಿದ ಶ್ರೀಗಳ ನಡೆ ಗ್ರಾಮದ ಕೆಲ ಮುಸಲ್ಮಾನರ ಮನೆಗಳಿಗೂ ತೆರಳಿ ರುದ್ರಾಕ್ಷಿ ಧಾರಣೆ ಮಾಡಿದರು. ಜಾತಿಯನ್ನೂ ಲೆಕ್ಕಿಸದೇ ಗ್ರಾಮದ ದಲಿತರ ಮನೆಗಳ ಒಳಗೆ ಹೋಗಿ ಎಲ್ಲರಿಗೂ ತಾವೇ ರುದ್ರಾಕ್ಷಿ ಹಾಕಿದರು. ದುಶ್ಚಟಗಳನ್ನು ತೊರೆಯುವಂತೆ ಸಲಹೆ ನೀಡಿದರು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಅವರಿಗೆ ಗುಣಮಟ್ಟ ಶಿಕ್ಷಣ ನೀಡಬೇಕು. ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ಕೊರಡೂರು ಗ್ರಾಮದ ಶ್ರೀ ಆಂಜನೇಯ ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರೊ ಜಿ.ಬಿ.ಕಲಕೋಟಿ ಶ್ರೀಗಳಿಗೆ ಸಾತ್‌ ನೀಡಿದರು. ಗ್ರಾಮಸ್ಥರಾದ ಶಿವಲಿಂಗಪ್ಪ ಅರಳಿ, ಬಸಪ್ಪ ಕೊಪ್ಪದ, ಮುತ್ತಣ್ಣ ಮೇಲ್ಮರಿ, ನಿಂಗಪ್ಪ ಮಾಳಗಿ, ಮಲ್ಲಪ್ಪ ಪೂಜಾರ ಸೇರಿದಂತೆ ಹಲವರು ಭಾಗವಹಿಸಿದ್ದರು.

ಆಂಜನೇಯ ಸ್ವಾಮಿ ಪುಷ್ಪವಾಸ
ಕೊರಡೂರು ಗ್ರಾಮದಲ್ಲಿನೂತನವಾಗಿ ನಿರ್ಮಾಣ ಮಾಡಲಾಗಿರುವ ಆಂಜನೇಯ ದೇವಸ್ಥಾನದ ಉದ್ಘಾಟನೆ ಅಂಗವಾಗಿ ಆಂಜನೇಯ ಶಿಲಾಮೂರ್ತಿಯ ಪುಷ್ಪವಾಸ ಶುಕ್ರವಾರ ಆರಂಭವಾಗಿದೆ. ಧಾನ್ಯವಾಸ ಬೆಳಗ್ಗೆ ಅಂತ್ಯವಾದ ಹಿನ್ನೆಲೆಯಲ್ಲಿನೆಗಳೂರು ಶ್ರೀಗಳ ನೇತೃತ್ವದಲ್ಲಿಪುಷ್ಪವಾಸ ಆರಂಭವಾಗಿದ್ದು, ಶನಿವಾರ ಶಿಲಾಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ. ನಂತರ ದೇವಸ್ಥಾನದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ನಂತರ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿಧರ್ಮಸಭೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ