ಆ್ಯಪ್ನಗರ

ಪೋಷಣ ಅಭಿಯಾನಕ್ಕೆ ಶಾಸಕರಿಂದ ಚಾಲನೆ

ಹಾವೇರಿ: ಮಗು ಜನಿಸಿ ಎರಡು ವರ್ಷದವರೆಗೆ ಮಗುವಿನ ಪೌಷ್ಟಿಕಾಂಶ ಆಹಾರದ ಕುರಿತು ಪ್ರತಿಯೊಬ್ಬ ತಾಯಿಯೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

Vijaya Karnataka 9 Sep 2019, 5:00 am
ಹಾವೇರಿ: ಮಗು ಜನಿಸಿ ಎರಡು ವರ್ಷದವರೆಗೆ ಮಗುವಿನ ಪೌಷ್ಟಿಕಾಂಶ ಆಹಾರದ ಕುರಿತು ಪ್ರತಿಯೊಬ್ಬ ತಾಯಿಯೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಶಾಸಕ ನೆಹರು ಓಲೇಕಾರ ಹೇಳಿದರು.
Vijaya Karnataka Web running from lawmakers to a nutrition campaign
ಪೋಷಣ ಅಭಿಯಾನಕ್ಕೆ ಶಾಸಕರಿಂದ ಚಾಲನೆ


ನಗರದ ತಾಪಂ ಸಭಾಂಗಣದಲ್ಲಿಜಿಲ್ಲಾಆಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಿಂದ ನಡೆದ ತಾಲೂಕು ಮಟ್ಟದ ಪೋಷಣ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಸೆಪ್ಟಂಬರ್‌-2019 ರ ಮಾಹೆಯನ್ನು ಪೋಷಣ ಅಭಿಯಾನದ ಮಾಸ ಎಂದು ಘೋಸಿಸಲಾಗಿದ್ದು, ಈ ಮಾಸದಲ್ಲಿಸಂಬಂಧಪಟ್ಟ ಎಲ್ಲಇಲಾಖೆಗಳ ಸಹಭಾಗಿತ್ವದಲ್ಲಿಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿಭಾಗ್ಯಲಕ್ಷಿತ್ರ್ಮೕ ಯೋಜನೆಯ ಫಲಾನುಭವಿಗಳಿಗೆ ಬಾಂಡ್‌ ವಿತರಣೆ, ಗರ್ಭಿಣಿಯರಿಗೆ ಸೀಮಂತ ಹಾಗೂ 6 ತಿಂಗಳ ಮಗುವಿನ ಅನ್ನ ಪ್ರಾಶನವನ್ನು ಶಾಸಕರು ನೆರವೇರಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ತಾಪಂ ಸದಸ್ಯ ಎಂ.ಎಂ.ವಗ್ಗಣ್ಣನವರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮಾ.ಕೆ.ಎಸ್‌, ಮಹಿಳಾ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ