ಆ್ಯಪ್ನಗರ

ರುಚಿ ಹೆಚ್ಚಿಸಿದ ರೊಟ್ಟಿ ಹಬ್ಬ

ಅಕ್ಕಿಆಲೂರು: ಸ್ಥಳೀಯ ಸೇರಿದಂತೆ ಸುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ನಾಗರ ಪಂಚಮಿಯ ಮುನ್ನಾದಿನ ರೊಟ್ಟಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಪ್ರತಿಯೊಂದು ಮನೆಗಳಲ್ಲಿಯೂ ಸಹ ಉತ್ತರ ಕರ್ನಾಟಕದ ತರಹೇವಾರಿ ಖಾದ್ಯಗಳು ರೊಟ್ಟಿ ಹಬ್ಬದ ಸಡಗರಕ್ಕೆಂದು ಸಿದ್ಧಗೊಂಡಿದ್ದವು.

Vijaya Karnataka 5 Aug 2019, 5:00 am
ಅಕ್ಕಿಆಲೂರು: ಸ್ಥಳೀಯ ಸೇರಿದಂತೆ ಸುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ನಾಗರ ಪಂಚಮಿಯ ಮುನ್ನಾದಿನ ರೊಟ್ಟಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಪ್ರತಿಯೊಂದು ಮನೆಗಳಲ್ಲಿಯೂ ಸಹ ಉತ್ತರ ಕರ್ನಾಟಕದ ತರಹೇವಾರಿ ಖಾದ್ಯಗಳು ರೊಟ್ಟಿ ಹಬ್ಬದ ಸಡಗರಕ್ಕೆಂದು ಸಿದ್ಧಗೊಂಡಿದ್ದವು.
Vijaya Karnataka Web HVR-4AKR1


ನಾಗರ ಪಂಚಮಿಯ ಮೊದಲ ದಿನ ರೊಟ್ಟಿ ಹಬ್ಬ ಎಂದು ಆಚರಿಸುವ ಸಂಪ್ರದಾಯ ಗ್ರಾಮೀಣ ಭಾಗದಲ್ಲಿದೆ. ಪ್ರತಿ ವರ್ಷ ಮುಂಗಾರು ಮಳೆ ಅನ್ನದಾತನಿಗೆ ಅನುಕೂಲವಾಗುವಷ್ಟು ಸುರಿದು ಕೃಷಿಭೂಮಿಯಲ್ಲಿ ಬೆಳೆದ ಬೆಳೆಗಳು ಕೈಸೇರುವ ಮೊದಲು ಫಸಲಿನ ಸಂತಸವನ್ನು ರೊಟ್ಟಿ ಮತ್ತು ವಿವಿಧ ತರಕಾರಿ ಹಾಗೂ ಕಾಳುಗಳ ಪಲ್ಯೆದೊಂದಿಗೆ ಎಲ್ಲರೂ ಪರಸ್ಪರ ಹಂಚಿಕೊಳ್ಳುವುದು ಈ ರೊಟ್ಟಿ ಹಬ್ಬದ ವೈಶಿಷ್ಟ್ಯತೆ.

ಪರಸ್ಪರ ವಿನಿಮಯ: ಎಲ್ಲರ ಮನೆಯಲ್ಲಿ ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಅಕ್ಕಿ ರೊಟ್ಟಿ, ಚಪಾತಿ, ಬದ್ನಿಕಾಯಿ, ಸಪ್ಪನ ಬೇಳೆ, ಹೆಸರು ಕಾಳು, ಮಡಿಕೆಕಾಳು ಪಲ್ಯೆ, ಕೊರದ ಹಿಟ್ಟಿನ ಪಲ್ಯೆ, ಕೊಬ್ರಿ ಚಟ್ನಿ, ಶೇಂಗಾ ಚಟ್ನಿ, ಗುರಳ್ಳ ಚಟ್ನಿ... ಹೀಗೆ ಬಾಯಲ್ಲಿ ನೀರೂರಿಸುವ ವಿವಿಧ ಬಗೆಯ ಖಾದ್ಯಗಳನ್ನು ರೊಟ್ಟಿ ಹಬ್ಬದ ಸಡಗರಕ್ಕೆಂದು ತಯಾರಿಸಲಾಗುತ್ತದೆ. ಬೆಳಗ್ಗೆ ಬೇಗನೆ ಏಳುವ ಹೆಂಗಳೆಯರು ಸಡಗರದಿಂದ ರೊಟ್ಟಿ, ಪಲ್ಯೆ ತಯಾರಿಕೆಗೆ ಅಣಿಯಾಗುತ್ತಾರೆ. ಈ ದಿನದಂದು ತಮ್ಮ ಮನೆಗಳಲ್ಲಿ ತಯಾರಿಸಲಾದ ರೊಟ್ಟಿ ಸೇರಿದಂತೆ ಇನ್ನಿತರ ಖಾದ್ಯ ಹಾಗೂ ತಿನಿಸುಗಳನ್ನು ಸುತ್ತಮುತ್ತಲಿನ ಮನೆಯವರೊಂದಿಗೆ ಪರಸ್ಪರ ವಿನಿಮಯ ಮಾಡಿಕೊಳ್ಳಲಾಗುತ್ತದೆ.

ಚಿಕ್ಕಮಕ್ಕಳು ಕೈಯಲ್ಲಿ ರೊಟ್ಟಿಗಳನ್ನು ಹಿಡಿದುಕೊಂಡು ಮನೆಮನೆಗೆ ತಲುಪಿಸುವ ಮೂಲಕ ಜಾತಿ-ಬೇಧ ಮರೆತು ಭಾವೈಕ್ಯತೆಯ ಸಂದೇಶ ಸಾರುತ್ತಾರೆ. ಆಧುನಿಕತೆಯ ಪ್ರಭಾವ ಮತ್ತು ಬದಲಾಗುತ್ತಿರುವ ಜೀವನ ಶೈಲಿಯ ಮಧ್ಯೆಯೂ ಗ್ರಾಮೀಣ ಭಾಗದಲ್ಲಿ ಇಂಥ ಹತ್ತಾರು ಆಚರಣೆಗಳು ಇಂದಿಗೂ ಜೀವಂತವಾಗಿವೆ. ಅನಾದಿ ಕಾಲದಿಂದಲೂ ನಡೆದು ಬಂದಿರುವ ರೊಟ್ಟಿ ಹಬ್ಬದಂಥ ಹಲವು ಆಚರಣೆಗಳು ಜನರಲ್ಲಿ ಭಾವೈಕ್ಯತೆ ಮೂಡಿಸುವಲ್ಲಿ ಸಹಕಾರಿಯಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ