ಆ್ಯಪ್ನಗರ

ರಸ್ತೆ ನಿಯಮ ಪಾಲನೆಯಿಂದ ಸುರಕ್ಷೆ

ಸವಣೂರು: ಮನುಷ್ಯನ ಜೀವ ಅತೀ ಮುಖ್ಯವಾದದ್ದು ರಸ್ತೆ ನಿಯಮಗಳನ್ನು ಎಲ್ಲರೂ ಪಾಲಿಸುವುದರಿಂದ ಸುರಕ್ಷಿತವಾಗಿ ಎಲ್ಲರೂ ಸಂಚರಿಸಬಹುದು ಪ್ರತಿಯೊಬ್ಬನ ಮೇಲೆ ಕುಟುಂಬದ ಜವಾಬ್ದಾರಿ ಇರುತ್ತದೆ ಎನಾದರೂ ಹೆಚ್ಚು ಕಡಿಮೆ ಆದರೆ ಅನಾಹುತಕ್ಕೀಡಾದ ವ್ಯಕ್ತಿಯ ಕುಟುಂಬ ಬೀದಿಪಾಲಾಗುತ್ತದೆ ಎಂದು ಸವಣೂರ ಠಾಣಾ ವೃತ್ತ ನಿರೀಕ್ಷಕ ಶಶಿಧರ ಜಿ.ಎಮ್‌. ಹೇಳಿದರು.

Vijaya Karnataka 18 Jan 2020, 5:00 am
ಸವಣೂರು: ಮನುಷ್ಯನ ಜೀವ ಅತೀ ಮುಖ್ಯವಾದದ್ದು ರಸ್ತೆ ನಿಯಮಗಳನ್ನು ಎಲ್ಲರೂ ಪಾಲಿಸುವುದರಿಂದ ಸುರಕ್ಷಿತವಾಗಿ ಎಲ್ಲರೂ ಸಂಚರಿಸಬಹುದು ಪ್ರತಿಯೊಬ್ಬನ ಮೇಲೆ ಕುಟುಂಬದ ಜವಾಬ್ದಾರಿ ಇರುತ್ತದೆ ಎನಾದರೂ ಹೆಚ್ಚು ಕಡಿಮೆ ಆದರೆ ಅನಾಹುತಕ್ಕೀಡಾದ ವ್ಯಕ್ತಿಯ ಕುಟುಂಬ ಬೀದಿಪಾಲಾಗುತ್ತದೆ ಎಂದು ಸವಣೂರ ಠಾಣಾ ವೃತ್ತ ನಿರೀಕ್ಷಕ ಶಶಿಧರ ಜಿ.ಎಮ್‌. ಹೇಳಿದರು.
Vijaya Karnataka Web safety from street rule keeping
ರಸ್ತೆ ನಿಯಮ ಪಾಲನೆಯಿಂದ ಸುರಕ್ಷೆ


ಸವಣೂರು ಪಟ್ಟಣದ ಕೀರ್ತಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿಏರ್ಪಡಿಸಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ವಾಹನಾ ಚಾಲನಾ ಲೈಸನ್ಸ್‌, ಇನ್ಸೂರೆನ್ಸ್‌, ಆರ್‌ ಸಿ ಬುಕ್‌, ಹೆಲ್ಮೆಟ್‌ ಮುಂತಾದ ಅಗತ್ಯ ದಾಖಲೆಗಳು ಅತ್ಯಂತ ಮುಖ್ಯ ತರಬೇತಿ, ಅನುಮತಿ ಪಡೆಯದೇ ವಾಹನ ಚಾಲನೆ ಮಾಡುವುದು ಅಪರಾದ ಮಾಡಿದಂತೆ ಮತ್ತು ಅದಕ್ಕೆ ಭಾರಿ ದಂಡ ತೆರಬೇಕಾಗುವುದು, ಮಹಿಳಾ ಸುರಕ್ಷತಾ ಸೂತ್ರಗಳು, ಅಪರಾಧ ಪ್ರಕರಣಗಳು ಸಂಭವನೀಯತೆ ಮತ್ತು ಅವುಗಳಿಂದ ಪಾರಾಗುವ ವಿಧಾನಗಳ ಕುರಿತು ಸವಿವರವಾಗಿ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಮಾಲತೇಶ ದಾನಪ್ಪನವರ ದಿನನಿತ್ಯದ ಜೀವನ ಸುಗಮವಾಗಿ ನಡೆಯ ಬೇಕಾದರೆ ಪೋಲಿಸ್‌ರ ಸೇವೆ ಅತ್ಯಂತ ಶ್ಲಾಘನೀಯ ಹಾಗೂ ರಸ್ತೆ ನಿಯಮ ಪಾಲಿಸುವುದು ಎಲ್ಲರ ಕರ್ತವ್ಯೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿಆಡಳಿತಾಧಿಕಾರಿ ಬಿ. ಎಸ್‌. ನರೇಗಲ್‌ ಎಲ್ಲಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು. ದಾನೇಶ್ವರಿ ಹೊಸಮನಿ ನಿರೂಪಿಸಿ ಕಾವ್ಯಾ ಡಂಬಳ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ