ಆ್ಯಪ್ನಗರ

ಭಕ್ತಿಯ ಭವ್ಯ ಪರಂಪರೆ ನೀಡಿದ ಶ್ರೀಗಳು

ಹಾನಗಲ್ಲ: ತ್ರಿವಿಧ ದಾಸೋಹದ ಮೂಲಕ ಭಾರತದಲ್ಲಿಯೇ ಭವ್ಯ ಭಕ್ತಿ ಪರಂಪರೆಯನ್ನು ನೀಡಿ ಆದರ್ಶವಾಗಿದ್ದ ತುಮಕೂರಿನ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಮಹಾಸ್ವಾಮಿಗಳು ಶಿವೈಕ್ಯವಾಗಿರುವುದು ನಾಡಿಗೆ ತುಂಬಲಾರದ ಹಾನಿ ಎಂದು ಶಾಸಕ ಸಿ.ಎಂ.ಉದಾಸಿ ಶ್ರದ್ಧಾಂಜಲಿ ಅರ್ಪಿಸಿದರು.

Vijaya Karnataka 23 Jan 2019, 5:00 am
ಹಾನಗಲ್ಲ: ತ್ರಿವಿಧ ದಾಸೋಹದ ಮೂಲಕ ಭಾರತದಲ್ಲಿಯೇ ಭವ್ಯ ಭಕ್ತಿ ಪರಂಪರೆಯನ್ನು ನೀಡಿ ಆದರ್ಶವಾಗಿದ್ದ ತುಮಕೂರಿನ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಮಹಾಸ್ವಾಮಿಗಳು ಶಿವೈಕ್ಯವಾಗಿರುವುದು ನಾಡಿಗೆ ತುಂಬಲಾರದ ಹಾನಿ ಎಂದು ಶಾಸಕ ಸಿ.ಎಂ.ಉದಾಸಿ ಶ್ರದ್ಧಾಂಜಲಿ ಅರ್ಪಿಸಿದರು.
Vijaya Karnataka Web saints who gave a grand heritage of devotion
ಭಕ್ತಿಯ ಭವ್ಯ ಪರಂಪರೆ ನೀಡಿದ ಶ್ರೀಗಳು


ಮಂಗಳವಾರ ಇಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದ ಸದಾಶಿವ ಮಂಗಲಭವನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ತಪೋನಿಷ್ಠ ಡಾ.ಶಿವಕುಮಾರಮಹಾಸ್ವಾಮಿಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಧಾರ್ಮಿಕ ಸಂಸ್ಕಾರ ನೀಡಿ ಅವರ ಬದುಕನ್ನ ಹಸನುಗೊಳಿಸಿದ್ದಾರೆ. ಸಿದ್ಧಗಂಗಾಮಠವನ್ನು ಇನ್ನಷ್ಟು ಪವಿತ್ರ ಕ್ಷೇತ್ರವನ್ನಾಗಿಸಿದ್ದಾರೆ ಎಂದರು.

ಮಾಜಿ ಸಚಿವ ಮನೋಹರ ತಹಶೀಲ್ದಾರ ಮಾತನಾಡಿ, ಸರಕಾರಗಳು ಕೂಡಲೇ ಡಾ.ಶಿವಕುಮಾರಮಹಾಸ್ವಾಮಿಗಳಿಗೆ ಮರಣೋತ್ತರವಾದರೂ, ಭಾರತ ರತ್ನ ಪ್ರಶಸ್ತಿ ಪ್ರಕಟಿಸಬೇಕು ಎಂದರು.

ಮುಖಂಡರಾದ ಎ.ಎಸ್‌.ಬಳ್ಳಾರಿ, ಮಾರುತಿ ಶಿಡ್ಲಾಪೂರ, ಎ.ಐ.ಮಳೆಣ್ಣನವರ, ಕೆ.ಎಲ್‌.ದೇಶಪಾಂಡೆ ಮಾತನಾಡಿದರು. ಮುತ್ತಣ್ಣ ನಾಸಿಕ, ಬಿ.ಎಸ್‌.ಅಕ್ಕಿವಳ್ಳಿ, ನಾಗಪ್ಪ ಸವದತ್ತಿ, ಭೋಜರಾಜ ಕರೂದಿ, ಗುರುಸಿದ್ದಪ್ಪ ಕೊಂಡೋಜಿ, ಮಧುಮತಿ ಪೂಜಾರ, ವೀಣಾ ಗುಡಿ, ನೂರಾರು ಪಾಲ್ಗೊಂಡಿದ್ದರು. ಡಾ.ವಿಶ್ವನಾಥ ಬೋಂದಾಡೆ ನಿರೂಪಿಸಿದರು.

ಶ್ರದ್ಧಾಂಜಲಿ ಮೆರವಣಿಗೆ:
ಇದಕ್ಕೂ ಮೊದಲು ಪಟ್ಟಣದ ಮಹಾತ್ಮಾ ಗಾಂಧಿವೃತ್ತದಿಂದ ಕುಮಾರೇಶ್ವರ ವಿರಕ್ತಮಠದವರೆಗೆ ಪೂಜ್ಯರ ಭಾವಚಿತ್ರದ ಮೆರವಣಿಗೆಯೊಂದಿಗೆ ಭಕ್ತರು ಮೌನವಾಗಿ ನಡೆದರು. ಇಲ್ಲಿನ ಎನ್‌.ಬಿ.ಪೂಜಾರ ಅವರ ಮನೆಯಲ್ಲಿ ಪೂಜೆಗೆ ಒಳಗಾಗುತ್ತಿದ್ದ ಶಿವಕುಮಾರ ಮಹಾಸ್ವಾಮಿಗಳ ಆವಿಗೆ (ಪಾದುಕೆ) ಹೊತ್ತು ಭಕ್ತರು ಮೆರವಣಿಗೆಯಲ್ಲಿ ಸಾಗಿದರು.

12 ವರ್ಷಗಳ ಹಿಂದೆ ಪೂಜಾರ ಕುಟುಂಬವು ತುಮಕೂರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪೂಜಾರ ಅವರ ಪತ್ನಿ ಮಧುಮತಿ ಅವರು ಭಿನ್ನವಿಸಿಕೊಂಡು ಶ್ರೀಗಳ ಪಾದುಕೆಗಳನ್ನು ತಮ್ಮ ಮನೆಗೆ ತಂದಿದ್ದರು. ಮನೆಯಲ್ಲಿ ನಿತ್ಯ ಪೂಜೆ ಮಾಡುತ್ತಿದ್ದ ಈ ಆವಿಗೆಗಳನ್ನು ಮೌನ ಮೆರವಣಿಗೆಯಲ್ಲಿ ತಂದಿದ್ದರು. ಶ್ರದ್ಧಾಂಜಲಿ ಸಭೆಯಲ್ಲಿ ಆವಿಗೆಗಳನ್ನು ಇಟ್ಟು ಪೂಜಿಸಲಾಯಿತು. ಸಭೆಯಲ್ಲಿ ಸೇರಿದ್ದ ಜನರು ಆವಿಗೆಗಳ ದರ್ಶನ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ