ಆ್ಯಪ್ನಗರ

ಎಸ್ಸಿ, ಎಸ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ ಆರಂಭ

ಹಾವೇರಿ : ಪರಿಶಿಷ್ಟ ಜಾತಿ, ಪಂಗಡ ಮಾದರಿಯ ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನ್ನು ಪ್ರಾರಂಭಿಸಿರುವುದು ಹೆಮ್ಮೆಯ ಸಂಗತಿ. ಇದು ಜಿಲ್ಲೆಯ ಅನೇಕ ಬಡ ಹಾಗೂ ಹಿಂದುಳಿದ ಮಕ್ಕಳಿಗೆ ಈ ಕಾಲೇಜು ಅನುಕೂಲವಾಗಿದೆ ಎಂದು ಶಾಸಕ ನೆಹರೂ ಓಲೇಕಾರ ಹೇಳಿದರು.

Vijaya Karnataka 27 Jul 2019, 5:00 am
ಹಾವೇರಿ : ಪರಿಶಿಷ್ಟ ಜಾತಿ, ಪಂಗಡ ಮಾದರಿಯ ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನ್ನು ಪ್ರಾರಂಭಿಸಿರುವುದು ಹೆಮ್ಮೆಯ ಸಂಗತಿ. ಇದು ಜಿಲ್ಲೆಯ ಅನೇಕ ಬಡ ಹಾಗೂ ಹಿಂದುಳಿದ ಮಕ್ಕಳಿಗೆ ಈ ಕಾಲೇಜು ಅನುಕೂಲವಾಗಿದೆ ಎಂದು ಶಾಸಕ ನೆಹರೂ ಓಲೇಕಾರ ಹೇಳಿದರು.
Vijaya Karnataka Web HVR-26 HAVERI 4A
ಹಾವೇರಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಾದರಿ ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ಗೆ ಶುಕ್ರವಾರ ಚಾಲನೆ ನೀಡಿದ ಶಾಸಕ ನೆಹರೂ ಓಲೇಕಾರ ಅವರು ವಿದ್ಯಾರ್ಥಿಗಳ ಮನವಿ ಆಲಿಸಿದರು.


ನಗರದ ಮುನ್ಸಿಪಲ್‌ ಹೈಸ್ಕೂಲ್‌ನಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡದ ಮಾದರಿ ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯಿಂದ ಕೈತಪ್ಪಿ ಹೋಗುತ್ತಿದ್ದ ಈ ಕಾಲೇಜನ್ನು ಹೋರಾಟದ ಮೂಲಕ ಉಳಿಸಿ ಇಂದು ಪ್ರಥಮ ದರ್ಜೆ ಕಾಲೇಜ್‌ಗೆ ಸುಮಾರು 66 ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಮಾಡಿದ ಹೆಮ್ಮೆ ನನಗಿದೆ. ಶೀಘ್ರದಲ್ಲಿ ಸೂಕ್ತ ನಿವೇಶನ ಹುಡುಕಿ ಕಟ್ಟಡ ಪ್ರಾರಂಭಿಸಲಾಗುವುದು. ಅಲ್ಲದೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ವಸತಿ ನಿಲಯದ ವ್ಯವಸ್ಥೆ ಹಾಗೂ ಮೂಲ ಸೌಕರ್ಯ ಕಲ್ಪಿಸುವುದರೊಂದಿಗೆ ಈ ಕಾಲೇಜನ್ನು ರಾಜ್ಯದಲ್ಲಿಯೇ ಮಾದರಿ ಕಾಲೇಜನ್ನಾಗಿ ರೂಪಿಸುತ್ತೇನೆ ಎಂದು ಭರವಸೆ ನೀಡಿದರು.

ಕೆಲವಲ 20 ದಿನಗಳ ಅವಧಿಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿರುವುದು ಹರ್ಷವನ್ನುಂಟು ಮಾಡಿದೆ. ಈ ಪ್ರವೇಶಾತಿ ಸಂಖ್ಯೆ ನೋಡಿದರೆ ಮುಂದಿನ ಶೈಕ್ಷ ಣಿಕ ವರ್ಷದಲ್ಲಿ ಮೆರಿಟ್‌ ಮೂಲಕ ಪ್ರವೇಶಾತಿ ಪಡೆಯುವ ಸಂದರ್ಭ ಸೃಷ್ಟಿಯಾಗಬಹುದು. ಪ್ರವೇಶಾತಿ ಪಡೆದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಶಿಕ್ಷ ಣ ಪಡೆದು ಹೆಚ್ಚಿನ ಅಂಕಗಳನ್ನು ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.

ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಶಾಸಕ:
ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶೌಚಾಲಯವಿಲ್ಲ. ಕೊಠಡಿಗಳ ಸೋರುತ್ತಿವೆ. ಬೆಂಚ್‌ಗಳು ಇಲ್ಲ. ಕಾಲೇಜಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಇದರ ಬಗ್ಗೆ ಗಮನ ಹರಿಸಿ ಮೂಲ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಕಾಲೇಜ್‌ ವಿದ್ಯಾರ್ಥಿಗಳಾದ ಶ್ರೇಯಾ ಮತ್ತು ನಿವೇದಿತಾ ಶಾಸಕರಿಗೆ ಮನವಿ ಮಾಡಿಕೊಂಡರು.

ಇದಕ್ಕೆ ಸ್ಪಂದಿಸಿದ ಶಾಸಕರು ಶೀಘ್ರವೇ ಕಾಲೇಜ್‌ಗೆ ಬೇಟಿ ನೀಡಿ ಪರಿಶೀಲಿಸಿ ಮೂಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಕೊಠಡಿಗಳು ನಿರ್ಮಾಣವಾಗುತ್ತಿವೆ. ಕಾಮಗಾರಿ ಬೇಗನೆ ಮುಗಿಸಲು ತಿಳಿಸಲಾಗಿದೆ ಎಂದರು.

ಕಾಲೇಜಿನಲ್ಲಿ ಲೈಬ್ರರಿ ಇಲ್ಲ. ಗ್ರಾಮೀಣ ಪ್ರದೇಶದಿಂದ ಕಾಲೇಜ್‌ಗೆ ಬರುವ ವಿದ್ಯಾರ್ಥಿಗಳಿಗೆ ಬಸ್‌ ವ್ಯವಸ್ಥೆ ಮತ್ತು ಬಸ್‌ ಪಾಸ್‌ ನೀಡುತ್ತಿಲ್ಲ. ಹಾಸ್ಟೆಲ್‌ ಸಿಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಿದ್ಯಾರ್ಥಿ ಜೀವಾನಂದ ಪಾಟೀಲ ಶಾಸಕರ ಮುಂದೆ ಸಮಸ್ಯೆ ಹೇಳಿಕೊಂಡರು.

ಇದಕ್ಕೆ ಶಾಸಕರು ದೂರದ ಊರಿನಿಂದ ಬರುವ ವಿದ್ಯಾರ್ಥಿಗಳಿಗೆ ಬಸ್‌ ಸೌಕಾರ್ಯವಿಲ್ಲದ ಮಕ್ಕಳಿಗೆ ನಾನು ಹಾಸ್ಟೆಲ್‌ ವ್ಯವಸ್ಥೆ ಮಾಡಿಸಿಕೊಡುತ್ತೇನೆ ಎಂದ ಅವರು, ನಿಮ್ಮ ಸಮಸ್ಯೆಗಳ ಪಟ್ಟಿ ಮಾಡಿಕೊಂಡು ಬನ್ನಿ ಸಮಸ್ಯೆಗಳನ್ನು ಈಡೇರಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ನಾಗರಾಜ ಬಸೇಗಣ್ಣಿ, ಮುತ್ತಣ್ಣ ಯಲಿಗಾರ, ಅಶೋಕ ಬಣಕಾರ, ಲಲಿತಾ ಗುಂಡೆನಹಳ್ಳಿ, ರತ್ನಾ ಬೀಮಕ್ಕನವರ, ವಿ.ಜಿ. ಪೂಜಾರ, ಬೀಬಿ ಫಾತಿಮಾ, ಪ್ರಮೋದ ನೆಲವಾಗಲ, ಪ್ರಕಾಶ ಬಾರ್ಕೆರ, ವೀರೇಶ ಹಿತ್ತಲಮನಿ, ಪ್ರೋ. ಎಮ್‌.ಹೆಚ್‌. ಹೆಬ್ಬಾಳ, ಪ್ರೊ. ವಾಯ್‌. ಮದ್ದನಸ್ವಾಮಿ, ಪ್ರೊ. ಶಿವಾನಂದ ಕೆಂಪಳ್ಳರ, ಡಾ. ಜಗನಾಥ ಗೇನಣ್ಣವರ, ಡಾ. ಗಂಗಮ್ಮ ಎಮ್‌., ಪ್ರೊ. ಸಂದ್ಯಾಕುಮಾರಿ ಎಂ., ಅಂಜಲಿದೇವಿ ಎಂ., ರಶ್ಮೀ ಚಂದ್ರಗಿರಿ, ಡಾ. ಶೋಭಾ ತಪಶಿ, ಶಂಭುಲಿಂಗಪ್ಪ ದೊಡ್ಡಮನಿ, ಕಾಲೇಜಿನ ಸಿಬ್ಬಂದಿಗಳಾದ ಆರ್‌.ಎಫ್‌ ಗಾಳೆಪ್ಪನವರ, ಶಿವುಕುಮಾರ ಉನ್ನಿಭಾವಿ, ಜಮೀರಾಭಾನು, ಭಾಗ್ಯವತಿ ನೇಕಾರ, ಕಲಾವತಿ ಸೇರಿದಂತೆ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ