ಆ್ಯಪ್ನಗರ

ಕಡಿಮೆಯಾಗಿಲ್ಲ ಸ್ಕೂಲ್‌ ಬ್ಯಾಗ್‌ ಹೊರೆ..!

ಮಂಜುನಾಥ ಹಳ್ಳದ ಹಾವೇರಿ: ಮಕ್ಕಳ ಆರೋಗ್ಯ ದೃಷ್ಠಿಯಿಂದ ಶಾಲಾ ಮಕ್ಕಳ ಬ್ಯಾಗ್‌ ತಗ್ಗಿಸುವಂತೆ ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಸರಕಾರ ಹೊಸ ನಿಯಮಗಳನ್ನು ರೂಪಿಸಿ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದರೂ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ನಿಯಮ ಪಾಲನೆ ಮಾಡುತ್ತಿಲ್ಲ.

Vijaya Karnataka 22 Aug 2019, 5:00 am
ಮಂಜುನಾಥ ಹಳ್ಳದ ಹಾವೇರಿ: ಮಕ್ಕಳ ಆರೋಗ್ಯ ದೃಷ್ಠಿಯಿಂದ ಶಾಲಾ ಮಕ್ಕಳ ಬ್ಯಾಗ್‌ ತಗ್ಗಿಸುವಂತೆ ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಸರಕಾರ ಹೊಸ ನಿಯಮಗಳನ್ನು ರೂಪಿಸಿ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದರೂ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ನಿಯಮ ಪಾಲನೆ ಮಾಡುತ್ತಿಲ್ಲ.
Vijaya Karnataka Web HVR-5 HAVERI 2


ಮಕ್ಕಳ ತೂಕಕ್ಕಿಂತ ಅವರ ಶಾಲಾ ಬ್ಯಾಗ್‌ ಹೆಚ್ಚಿನ ಭಾರವಾಗಿದ್ದನ್ನು ಮನಗಂಡು ಸುಪ್ರೀಂ ಕೋರ್ಟ್‌ 2017ರಲ್ಲಿ ಮಕ್ಕಳ ಶಾಲಾ ಬ್ಯಾಗ್‌ ಹೊರೆ ಇಳಿಕೆಗೆ ಆದೇಶ ನೀಡಿ ನಿಯಮಗಳನ್ನು ರೂಪಿಸಿದೆ. ಆದರೆ ಆ ನಿಯಮಗಳನ್ನು ಜಿಲ್ಲೆಯ ಕೆಲ ಶಾಲೆಗಳು ಗಾಳಿಗೆ ತೋರಿವೆ.

ಅಧಿಕಾರಿಗಳ ನಿರ್ಲಕ್ಷ್ಯ: ಶಾಲೆಗಳ ನಿರ್ಲಕ್ಷ್ಯದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸದ ಕಾರಣ ಮಕ್ಕಳ ಬೆಳವಣಿಗೆ ಮತ್ತು ಕಲಿಕೆ ಮೇಲೆ ಪರಿಣಾಮ ಬೀರುತ್ತಿದೆ. ಶಾಲೆ ವೇಳಾಪಟ್ಟಿ ಪ್ರಕಾರ ಪ್ರತಿ ದಿನ ಪುಸ್ತಕ ಇನ್ನಿತರೆ ಸಾಮಗ್ರಿಗಳನ್ನು ಬ್ಯಾಗ್‌ಗೆ ಹಾಕಿ ಕಳಿಸಬೇಕಾಗಿದೆ. ಜೊತೆಗೆ ಊಟದ ಡಬ್ಬಿ, ನೀರಿನ ಬಾಟಲಿ ಇರುವುದರಿಂದ ಮಕ್ಕಳಿಗೆ ಭಾರ ಹೆಚ್ಚಾಗಲಿದೆ ಎಂದು ಪಾಲಕರು ಹೇಳುತ್ತಾರೆ.

ಭಾರ ಕಡಿಮೆ ಮಾಡಲು ಕೆಲವು ಪುಸ್ತಕಗಳನ್ನು ಬಿಟ್ಟು ಹೋದರೆ ಶಿಕ್ಷಕರು ಬೈತಾರೆ ಎಂಬ ಭಯದಿಂದ ಮಕ್ಕಳು ಹೆಚ್ಚಿನ ಭಾರ ಹೊತ್ತು ಸಾಗುತ್ತಾರೆ. ಬ್ಯಾಗಿನ ಭಾರದಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಕುಗ್ಗುತ್ತಿದೆ. ಇದರಿಂದ ಕಲಿಕೆಯಿಂದ ಹಿಂದೆ ಬೀಳುವ ಸಾಧ್ಯತೆ ಇರುತ್ತದೆ. ಶಾಲೆಗಳು ನಿಯಮ ಅಳವಡಿಸಿಕೊಂಡರೆ ಒಳ್ಳೆಯದು ಎನ್ನುತ್ತಾರೆ ವೈದ್ಯರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ