ಆ್ಯಪ್ನಗರ

ಹಾವೇರಿಯಲ್ಲಿ ಐತಿಹಾಸಿಕ ಕುರುಹುಗಳ ಶೋಧ

ಹಾವೇರಿ: ಹಾವೇರಿಯ ಬಸವೇಶ್ವರ ನಗರದಲ್ಲಿಇತಿಹಾಸ ಪೂರ್ವ ಕಾಲದ ನಿಲಸುಗಲ್ಲುಹಾಗೂ ಇತಿಹಾಸ ಕಾಲದ ಶಿಲಾ ಶಾಸನವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರಮೋದ ನಲವಾಗಲ, ಸಂಶೋಧಕ ಡಾ. ಶರತ್‌ಬಾಬು, ಡಾ. ರಮೇಶ ತೆವರಿ ಪತ್ತೆ ಮಾಡಿದ್ದಾರೆ.

Vijaya Karnataka 11 Feb 2020, 5:00 am
ಹಾವೇರಿ: ಹಾವೇರಿಯ ಬಸವೇಶ್ವರ ನಗರದಲ್ಲಿಇತಿಹಾಸ ಪೂರ್ವ ಕಾಲದ ನಿಲಸುಗಲ್ಲುಹಾಗೂ ಇತಿಹಾಸ ಕಾಲದ ಶಿಲಾ ಶಾಸನವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರಮೋದ ನಲವಾಗಲ, ಸಂಶೋಧಕ ಡಾ. ಶರತ್‌ಬಾಬು, ಡಾ. ರಮೇಶ ತೆವರಿ ಪತ್ತೆ ಮಾಡಿದ್ದಾರೆ.
Vijaya Karnataka Web search for historical traces in haveri
ಹಾವೇರಿಯಲ್ಲಿ ಐತಿಹಾಸಿಕ ಕುರುಹುಗಳ ಶೋಧ


ಬೃಹತ್‌ ಶಿಲಾಗೋರಿಯ ಕುರುಹು ನಿಲಸುಗಲ್ಲಾಗಿದೆ. ಇತಿಹಾಸ ಪೂರ್ವ ಕಾಲದಲ್ಲಿಜನರ ಗುಂಪಿನ ನಾಯಕ ಸಾವನ್ನಪ್ಪಿದಾಗ ಆತನ ನೆನಪು ಚಿರವಾಗಿರಲಿ ಎಂಬ ಉದ್ದೇಶದಿಂದ ಬೃಹತ್‌ ಆಕಾರದ ಶಿಲೆಯನ್ನು ನಿಲ್ಲಿಸುತ್ತಿದ್ದರು. ಇಂತಹ ಇತಿಹಾಸ ಪೂರ್ವಕಾಲದ ಕುರುಹು ಹಾವೇರಿಯ ಬಸವೇಶ್ವರ ನಗರದ 'ಬಿ' ಬ್ಲಾಕ್‌ನ ರಸ್ತೆಯ ಪಕ್ಕದಲ್ಲಿಪತ್ತೆಯಾಗಿದೆ.

ಈ ನಿಲಸುಗಲ್ಲು8 ಅಡಿ ಉದ್ದ, 3ಅಡಿ ಅಗಲದ ಹೊಂದಿದ್ದು, ಕ್ರಿ.ಪೂ. 1200-250ರ ಕಾಲಘಟ್ಟಕ್ಕೆ ಸೇರಿದ್ದು, 2500 ವರ್ಷಗಳ ಹಿಂದೆ ಜನರ ಗುಂಪೊಂದು ಈ ಸ್ಥಳದಲ್ಲಿವಾಸಿಸುತ್ತಿದ್ದರು ಎಂಬುದನ್ನು ಸೂಚಿಸುತ್ತದೆ ಎನ್ನುತ್ತಾರೆ ಸಂಶೋಧಕರು.

ಶಿಲಾಶಾಸನ:
ಸರ್‌ ಎಂ.ವಿಶ್ವೇಶ್ವರಯ್ಯ ಶಾಲೆಯ ಪಕ್ಕದಲ್ಲಿಶಿಲಾಶಾಸನವೊಂದಿದ್ದು ಅದನ್ನು ಸ್ಥಳೀಯರು ಪೂಜಿಸುತ್ತಿದ್ದು ಅದು ಕ್ರಿ.ಶ.1759ಕ್ಕೆ ಸಂಬಂಧಿಸಿದ್ದಾಗಿದೆ. ಆ ಶಾಸನವು ಎಳು ಸಾಲುಗಳನ್ನು ಹೊಂದಿದ್ದು, ಅದರಲ್ಲಿಯ ಕೆಲವು ಅಕ್ಷರಗಳು ತೃಟಿತವಾಗಿವೆ.

ಶಾಸನದಲ್ಲಿರುವ ಅಕ್ಷಕರ:
ಹಾವೇರಿ 'ಮಟ್ಟಿಯ ಗೋಣಿಬಸವಣ್ಣ ದೇವರ ಗುಡಿಗೆ' ಹಾಕಿದ ಸೂಸ್ತಿ ಸರ್ವಮಾನ್ಯದ ಹೊಲವನ್ನು ಶಾಲಿವಾಹನ ಶಕೆ 1681ರ ಬಹುಳ 14 ರಂದು (ಕ್ರಿ.ಶ 1759 ರ, ಬಹುಶ: ಮಹಾಶಿವರಾತ್ರಿಯೆಂದು) ಕೊಟ್ಟಿದ್ದನ್ನು ಸೂಚಿಸುತ್ತದೆ. 'ಮಟ್ಟಿ' ಎಂದರೆ ಬಹುಶಃ ಈಗಿನ ಬಸವೇಶ್ವರ ನಗರವನ್ನು ಒಳಗೊಂಡಂತಹ ನಾಗೇಂದ್ರನಮಟ್ಟಿಯಾಗಿರಬಹುದು. ಅಲ್ಲಿಯ ಗೋಣಿಬಸವಣ್ಣ ದೇವರಗುಡಿಯೆಂದರೆ ನಾಗೇಂದ್ರಮಟ್ಟಿ ಕೆರೆಯ ಪಕ್ಕದಲ್ಲಿರುವ ಈಗಿನ ಬಸವಣ್ಣದೇವರ ಗುಡಿಯಾಗಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.

ಆ ಬಸವಣ್ಣದೇವರಿಗೆ ನೀಡಿದ ದಾನವನ್ನು ಸೂಚಿಸುವ ಗಡಿಕಲ್ಲೊಂದು ಬಸವೇಶ್ವರ ನಗರದ ಸ್ವಾಮಿ ವಿವೇಕಾನಂದ ಕಾಲೇಜಿನ ಆವರಣದಲ್ಲಿದೆ. ಅದನ್ನು ಸ್ಥಳಿಯರು ಲಿಂಗಮುದ್ರೆಕಲ್ಲೆಂದು ಕರೆಯುತ್ತಾರೆ. ಹಾಳಾಗಿ ಬಿದ್ದಿರುವ ನಿಲಸುಗಲ್ಲುಹಾಗೂ ಶಿಲಾಶಾಸನವನ್ನು ಸಂಶೋಧನಾ ಇಲಾಖೆ ಸಂರಕ್ಷಣೆ ಮಾಡಬೇಕು ಎನ್ನುವುದು ಸಂಶೋಧಕರ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ