ಆ್ಯಪ್ನಗರ

ಸರ್ವರ್‌ ಡೌನ್‌.. ರೈತರು ಸುಸ್ತು

ಅಕ್ಕಿಆಲೂರು: ಸಾಲ ಮನ್ನಾ ಲಾಭ ಪಡೆದುಕೊಳ್ಳಲು ಬ್ಯಾಂಕ್‌ಗಳಿಗೆ ದಾಖಲೆ ಸಲ್ಲಿಸಲು ರೈತರು ಮುಗಿಬಿದ್ದಿದ್ದು, ಸರ್ವರ್‌ ಸೇರಿದಂತೆ ತಾಂತ್ರಿಕ ಸಮಸ್ಯೆಯಿಂದಾಗಿ ದಾಖಲೆ ಪ್ರಕ್ರಿಯೆ ಪೂರ್ಣಗೊಳ್ಳದೇ ರೈತರು ಪರದಾಡುವಂತಾಗಿದೆ.

Vijaya Karnataka 28 Dec 2018, 5:00 am
ಅಕ್ಕಿಆಲೂರು: ಸಾಲ ಮನ್ನಾ ಲಾಭ ಪಡೆದುಕೊಳ್ಳಲು ಬ್ಯಾಂಕ್‌ಗಳಿಗೆ ದಾಖಲೆ ಸಲ್ಲಿಸಲು ರೈತರು ಮುಗಿಬಿದ್ದಿದ್ದು, ಸರ್ವರ್‌ ಸೇರಿದಂತೆ ತಾಂತ್ರಿಕ ಸಮಸ್ಯೆಯಿಂದಾಗಿ ದಾಖಲೆ ಪ್ರಕ್ರಿಯೆ ಪೂರ್ಣಗೊಳ್ಳದೇ ರೈತರು ಪರದಾಡುವಂತಾಗಿದೆ.
Vijaya Karnataka Web server down farmers are tired
ಸರ್ವರ್‌ ಡೌನ್‌.. ರೈತರು ಸುಸ್ತು


ಎಲ್ಲ ಬ್ಯಾಂಕ್‌ಗಳ ಎದುರು ರೈತರ ಸರದಿ ಹೆಚ್ಚಾಗಿದ್ದು, ಬಹುತೇಕ ಕಡೆ ನಿತ್ಯದ ವ್ಯವಹಾರದ ಮೇಲೆ ವ್ಯತಿರಿಕ್ತ ಪ್ರಭಾವ ಬೀರಿದೆ. ಸಾಲಮನ್ನಾ ಪ್ರಕ್ರಿಯೆಯಲ್ಲಿಯೇ ಸಿಬ್ಬಂದಿ ಸುಸ್ತಾಗುತ್ತಿದ್ದಾರೆ.

ಇಲ್ಲಿನ ಕೆನರಾ ಬ್ಯಾಂಕ್‌ ಸದ್ಯಕ್ಕೆ ಚಿನ್ನದ ಸಾಲ ಸ್ಥಗಿತಗೊಳಿಸಿದೆ. ಬೆಳೆ ಸಾಲ ನೀಡುವ ಗೋಜಿಗೂ ಹೋಗದೇ ಬರೀ ಸಾಲಮನ್ನಾ ಪ್ರಕ್ರಿಯೆಯಲ್ಲಿ ಸಂಪೂರ್ಣ ತೊಡಗಿದೆ. ಮೊದಲೇ ಸಿಬ್ಬಂದಿ ಕೊರತೆ ಇದ್ದು, ಬ್ಯಾಂಕ್‌ ವ್ಯವಹಾರಕ್ಕೆ ತೊಂದರೆಯಾಗಿದೆ. ಸಾಮಾನ್ಯ ಗ್ರಾಹಕರು ಗಂಟೆಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣಗೊಂಡಿದೆ.

ತಲೆ ಬಿಸಿ: ಕೆನರಾ ಬ್ಯಾಂಕ್‌ ಶಾಖೆಯಲ್ಲಿ ಒಟ್ಟು 1,400 ರೈತರು ಸಾಲ ಮನ್ನಾ ಪ್ರಯೋಜನ ಪಡೆಯಲಿದ್ದು, ಬೆಳ್ಳಂಬೆಳಗ್ಗೆ ಸರದಿಯಲ್ಲಿ ನಿಂತು ದಾಖಲೆ ಸಲ್ಲಿಸುತ್ತಿದ್ದಾರೆ. ಆಗಮಿಸುವ ಎಲ್ಲ ರೈತರಿಗೂ ಟೋಕನ್‌ ನೀಡಲಾಗುತ್ತಿದೆ. ಆದರೆ ಸರ್ವರ್‌ ಸಮಸ್ಯೆಯಿಂದಾಗಿ ಪ್ರತಿದಿನ ಕೇವಲ 25-30 ರೈತರ ದಾಖಲೆ ಸಲ್ಲಿಕೆ ಪ್ರಕ್ರಿಯೆಯಷ್ಟೆ ಪೂರ್ಣಗೊಳ್ಳುತ್ತಿದೆ. ದಾಖಲೆಗಳನ್ನೆಲ್ಲ ಸಲ್ಲಿಸಿದ ಬಳಿಕ 'ಫೇಲ್ಡ್‌' ಎಂದು ಬರುತ್ತಿರುವುದು ಸಿಬ್ಬಂದಿ ಮತ್ತು ರೈತರ ತಲೆಬಿಸಿಗೆ ಕಾರಣವಾಗಿದೆ. ಇದುವರೆಗೆ 600 ರೈತರು ಟೋಕನ್‌ ಪಡೆದುಕೊಂಡಿದ್ದು, ಈ ಪೈಕಿ ಕೇವಲ 80 ರೈತರ ದಾಖಲೆ ಸಲ್ಲಿಕೆ ಪ್ರಕ್ರಿಯೆ ಮಾತ್ರ ಪೂರ್ಣಗೊಂಡಿದೆ.

ಇನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ 700 ರೈತರು ಸಾಲಮನ್ನಾ ಲಾಭ ಪಡೆದುಕೊಳ್ಳಲಿದ್ದು, ಸಿಬ್ಬಂದಿ ಕಾಳಜಿಯಿಂದ ದಾಖಲೆ ಸಲ್ಲಿಕೆ ಪ್ರಕ್ರಿಯೆ ಸ್ವಲ್ಪ ಚುರುಕಾಗಿ ನಡೆದಿದೆ. ಲ್ಯಾಪ್‌ಟಾಪ್‌, ಡೋಂಗಲ್‌ ಇನ್ನಿತರ ಹೆಚ್ಚುವರಿ ತಾಂತ್ರಿಕ ವ್ಯವಸ್ಥೆ ಮಾಡಿಕೊಂಡಿರುವುದು ಗಮನ ಸೆಳೆದಿದೆ.

ರೈತರ ಆಕ್ರೋಶ: ರೈತರು ದಾಖಲೆಗಾಗಿ ದಿನವಿಡೀ ಬ್ಯಾಂಕುಗಳಲ್ಲಿ ಕಾಲ ಕಳೆಯುವಂತಾಗಿದ್ದು, ಹಿಂಗಾರಿ ಬಿತ್ತನೆ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಗರ ಬಡಿದಿದೆ. ಸಿಬ್ಬಂದಿ ಅಸಹಕಾರ, ಸರ್ವರ್‌ ಸಮಸ್ಯೆ ಸೇರಿದಂತೆ ಮತ್ತಿತರ ಕಾರಣಗಳಿಂದ ಇಡೀ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ರೈತ ಸಮೂಹದಲ್ಲಿ ಆಕ್ರೋಶ ಮಡುಗಟ್ಟಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ