ಆ್ಯಪ್ನಗರ

ಸೇವೆಯಲ್ಲಿ ಪ್ರಾಂಜಲ ಮನಸ್ಸು ಬೇಕು

ಹಾನಗಲ್ಲ : ಭಕ್ತರ ಪಾಲಿಗೆ ಒಳ್ಳೆಯ ಕೆಲಸ ಮಾಡುವ ಸಮಾಜಕ್ಕೆ ಅರ್ಪಿತ ಸ್ವಾಮಿಗಳು ಅಗತ್ಯವಿದೆ. ಗುರುಕೃಪೆಯಿಂದ ಮಾನವ ಮಹಾಮಾನವನಾಗಲು ಸಾಧ್ಯವಿದೆ ಎಂದು ಶಿರಹಟ್ಟಿಯ ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಗಳು ನುಡಿದರು.

Vijaya Karnataka 16 Mar 2019, 5:00 am
ಹಾನಗಲ್ಲ : ಭಕ್ತರ ಪಾಲಿಗೆ ಒಳ್ಳೆಯ ಕೆಲಸ ಮಾಡುವ ಸಮಾಜಕ್ಕೆ ಅರ್ಪಿತ ಸ್ವಾಮಿಗಳು ಅಗತ್ಯವಿದೆ. ಗುರುಕೃಪೆಯಿಂದ ಮಾನವ ಮಹಾಮಾನವನಾಗಲು ಸಾಧ್ಯವಿದೆ ಎಂದು ಶಿರಹಟ್ಟಿಯ ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಗಳು ನುಡಿದರು.
Vijaya Karnataka Web service needs a mindset
ಸೇವೆಯಲ್ಲಿ ಪ್ರಾಂಜಲ ಮನಸ್ಸು ಬೇಕು


ಗುರುವಾರ ಸಂಜೆ ತಾಲೂಕಿನ ಸಾಂವಸಗಿ ಗ್ರಾಮದ ಶ್ರೀ ವೀರಭದ್ರೇಶ್ವರ ಮಹಾರಥೋತ್ಸವ ಅಂಗವಾಗಿ ಆಯೋಜಿಸಿದ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ, ಗ್ರಾಮದ ವೀರಪ್ಪ ದೊಡ್ಡಮನಿ ಕುಟುಂಬದವರಿಂದ ತುಲಾಭಾರ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದ ಅವರು, ಭಕ್ತರು ತಮ್ಮ ಪಾಲಿನ ಸೇವೆಯನ್ನು ಪ್ರಾಂಜಲ ಮನಸ್ಸಿನಿಂದ ಪೂರೈಸಬೇಕು. ಸಮಾಜ ಸೇವೆಯಲ್ಲಿ ಮನುಷ್ಯ ನೀರಿನಂತಾಗಬೇಕು. ನೀರು ತೀರ್ಥವಾಗಬೇಕು ಎಂದರು.

ಪರಂಪರೆಯ ಹೆಸರಿನಲ್ಲಿನ ಭೇದವನ್ನು ತೊರೆದು ಹೃದಯವಂತಿಕೆಯನ್ನು ಅಳವಡಿಸಿಕೊಳ್ಳಬೇಕು. ಸಮಾಜ ಸೇವೆ ಮಾಡುವ ಕೈಗಳು ಒಳ್ಳೆಯವು ಆಗಿರಬೇಕು. ಶಿಕ್ಷ ಕನಂತೆ ವಿದ್ಯಾರ್ಥಿ, ಹಿರಿಯರಂತ ಸಮಾಜ ಬೆಳೆಯುತ್ತದೆ. ಹೀಗಾಗಿ ಎಲ್ಲರೂ ಒಳ್ಳೆಯದರ ಮೇಲ್ಪಂಕ್ತಿಯಾಗಬೇಕು ಎಂದರು.

ಮಣಕವಾಡದ ಆಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಸಮ್ಮುಖ ವಹಿಸಿ ಮಾತನಾಡಿ, ಭಾವೈಕ್ಯತೆ ಹಾಗೂ ನೀತಿ ಇಂದಿನ ಅಗತ್ಯಗಳಾಗಿವೆ. ಕಿಮ್ಮತ್ತಿನ ಜ್ಞಾನ ಪಡೆಯಬೇಕು. ಜಾತಿ ಮತದ ತಿಕ್ಕಾಟದಿಂದ ನಾಡು ಹಾಳಾಗುತ್ತದೆ. ಮಾತು ಹಿತವಾಗಿರಬೇಕು. ನಂಬಿಕೆ ವಿಶ್ವಾಸ ಶ್ರದ್ಧೆಗಳಿಗಳಿಂದ ನಡೆಸುವ ಜೀವನ ಸಾರ್ಥಕವಾಗುತ್ತದೆ. ಗುರು ಚರಿತ್ರೆ ನಮ್ಮ ಬದುಕನ್ನು ಬದಲಿಸುವ ಶಕ್ತಿ ಹೊಂದಿದೆ ಎಂದರು.

ಅಕ್ಕಿಆಲೂರು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯರು ಸಮ್ಮುಖವಹಿಸಿ ಮಾತನಾಡಿ, ಗ್ರಾಮಗಳಲ್ಲಿ ಇನ್ನೂ ಸಂಸ್ಕೃತಿ ಜೀವಂತವಾಗಿದೆ. ಈಗಲಾದರೂ ಅದರ ಸತ್ಯ ಅರಿತು ಉಳಿಸಿಕೊಳ್ಳಿ. ಭಕ್ತಿಯ ಜೀವನದಲ್ಲಿರುವ ಸಾರ್ಥಕತೆ ನಾಗರಿಕತೆಯ ಹೆಸರಿನಲ್ಲಿ ದಿವಾಳಿಯಾಗುವುದು ಬೇಡ. ಭಕ್ತರು ಮಠಾಧೀಶರ ನಡುವಿನ ಸಂಬಂಧ ಸತ್ಸಮಾಜದ ನಿರ್ಮಾಣದ ಕೊಂಡಿಯಾಗಬೇಕು ಎಂದರು.

ಕೂಡಲದ ಗುರುನಂಜೇಶ್ವರಮಠದ ಗುರುಮಹೇಶ್ವರ ಶಿವಾಚಾರ್ಯರು, ತುಪ್ಪದ ಕುರಹಟ್ಟಿಯ ವಾಗೀಶ ಪಂಡಿತಾರಾಧ್ಯ ಮಹಾಸ್ವಾಮಿಗಳು, ಸಿರಸಿಯ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಸ್ಥಳೀಕ ವೇದಮೂರ್ತಿ ಸಂಗಯ್ಯಶಾಸ್ತ್ರಿ ಹಿರೇಮಠ, ಶಿಗ್ಗಾಂವಿಯ ಮತ್ತಿಕಟ್ಟಿಯವರು, ಗಣ್ಯರಾದ ಶಿವಯೋಗಿ ಹಿರೇಮಠ, ಕಲವೀರಪ್ಪ ಪವಾಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅನಿತಾ ಕುಂಟನಹೊಸಳ್ಳಿ, ಬಸವರಾಜ ಬಡಿಗೇರ, ನಾರಾಯಣಪ್ಪ ಬಡಿಗೇರ ಸಂಗೀತ ಸೇವೆ ಸಲ್ಲಿಸಿದರು. ಎಫ್‌.ಬಿ.ಈಳಿಗೇರ ಸ್ವಾಗತಿಸಿದರು. ವೀರಣ್ಣ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು. ಚನ್ನಪ್ಪ ಬೆಣ್ಣಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ