ಆ್ಯಪ್ನಗರ

ಶರೀಫರ 200ನೇ ಜನ್ಮ ದಿನಾಚರಣೆ ಸಂಭ್ರಮ ನಾಳೆಯಿಂದ

ಪಿ.ಎಂ.ಸತ್ಯಪ್ಪನವರ ಶಿಗ್ಗಾವಿ: ಶಿಶುವಿನನಾಳದ ಶರೀಫರು ಭಾವೈಕ್ಯತೆಯ ಹರಿಕಾರರು. ಜಾನಪದ ಸಂತ, ಕವಿ ಎಂದೇ ಖ್ಯಾತಿಯ ಶರೀಫರ ಕರ್ಮಭೂಮಿಯ ಶಿಶುವಿನನಾಳ ಕರ್ನಾಟಕದ ಪ್ರೇಕ್ಷ ಣೀಯ ಸ್ಥಳದಲ್ಲಿ ಒಂದಾಗಿದೆ. ಶಿಶುವಿನಹಾಳದ ಶರೀಫಗಿರಿಯಲ್ಲಿ ಜು.1 ರಿಂದ ಮೂರು ದಿನ ಶರೀಫರ 200ನೇ ಜನ್ಮ ದಿನಾಚರಣೆ ಸಂಭ್ರಮ ನಡೆಯಲಿದೆ. ಈ ಸಂಭ್ರಮಕ್ಕೆ ಸಾಕ್ಷಿಯಾಗಲು ಶರೀಫರ ಅಸಂಖ್ಯಾತ ಭಕ್ತರು ಸಜ್ಜಾಗಿದ್ದಾರೆ. ಸಕಲ ಸಿದ್ಧತೆಗೆ ಶರೀಫ-ಗೋವಿಂದಭಟ್ಟರ ಟ್ರಸ್ಟ್‌, ಸ್ಥಳೀಯ ಶಾಸಕ ಬಸವರಾಜ ಬೊಮ್ಮಾಯಿ ಶ್ರಮಿಸುತ್ತಿದ್ದಾರೆ. ಶರೀಫರ ಸಂಭ್ರಮಕ್ಕೆ ಶಿಶುವಿನಹಾಳ ಮದುವಣಗಿತ್ತೆಯಂತೆ ಶೃಂಗಾರಗೊಂಡಿದೆ.

Vijaya Karnataka 30 Jun 2019, 5:00 am
ಪಿ.ಎಂ.ಸತ್ಯಪ್ಪನವರ ಶಿಗ್ಗಾವಿ: ಶಿಶುವಿನನಾಳದ ಶರೀಫರು ಭಾವೈಕ್ಯತೆಯ ಹರಿಕಾರರು. ಜಾನಪದ ಸಂತ, ಕವಿ ಎಂದೇ ಖ್ಯಾತಿಯ ಶರೀಫರ ಕರ್ಮಭೂಮಿಯ ಶಿಶುವಿನನಾಳ ಕರ್ನಾಟಕದ ಪ್ರೇಕ್ಷ ಣೀಯ ಸ್ಥಳದಲ್ಲಿ ಒಂದಾಗಿದೆ. ಶಿಶುವಿನಹಾಳದ ಶರೀಫಗಿರಿಯಲ್ಲಿ ಜು.1 ರಿಂದ ಮೂರು ದಿನ ಶರೀಫರ 200ನೇ ಜನ್ಮ ದಿನಾಚರಣೆ ಸಂಭ್ರಮ ನಡೆಯಲಿದೆ. ಈ ಸಂಭ್ರಮಕ್ಕೆ ಸಾಕ್ಷಿಯಾಗಲು ಶರೀಫರ ಅಸಂಖ್ಯಾತ ಭಕ್ತರು ಸಜ್ಜಾಗಿದ್ದಾರೆ. ಸಕಲ ಸಿದ್ಧತೆಗೆ ಶರೀಫ-ಗೋವಿಂದಭಟ್ಟರ ಟ್ರಸ್ಟ್‌, ಸ್ಥಳೀಯ ಶಾಸಕ ಬಸವರಾಜ ಬೊಮ್ಮಾಯಿ ಶ್ರಮಿಸುತ್ತಿದ್ದಾರೆ. ಶರೀಫರ ಸಂಭ್ರಮಕ್ಕೆ ಶಿಶುವಿನಹಾಳ ಮದುವಣಗಿತ್ತೆಯಂತೆ ಶೃಂಗಾರಗೊಂಡಿದೆ.
Vijaya Karnataka Web sharifs 200th birthday celebration tomorrow
ಶರೀಫರ 200ನೇ ಜನ್ಮ ದಿನಾಚರಣೆ ಸಂಭ್ರಮ ನಾಳೆಯಿಂದ


ಸರ್ವಧರ್ಮದ ತಾಣ: ಶರೀಫರ ಸಮಾಧಿಯ ವಿಶಾಲವಾದ ಜಾಗೆ, ತಂಪಾದ ಗಾಳಿ, ಇಂಪಾದ ತತ್ವ ಪದಗಳನ್ನು ಕೇಳಿದರೆ ಪ್ರವಾಸಿಗರ ಮೈಮನ ಹಗುರಗೊಳ್ಳುತ್ತದೆ. ಪ್ರಶಾಂತ ವಾತಾವರಣ ಯಾಂತ್ರಿಕ ಬದುಕಿನ ಒತ್ತಡವನ್ನು ದೂರ ಮಾಡುತ್ತದೆ.

ಈ ಮಹಾತ್ಮರ ಸಮಾಧಿ ಈಗ ಸರ್ವಧರ್ಮದ ಸಮನ್ವಯದ ತಾಣವಾಗಿದೆ. ಶರೀಫರು, ಗುರುಗೋವಿಂದ ಭಟ್ಟರ ಸ್ಮರಣೆಗಾಗಿ ಇಲ್ಲಿ ಅಧ್ಯಾತ್ಮಿಕ ಅಧ್ಯಯನ ಕೇಂದ್ರ, ಪ್ರವಾಸಿ ನಿಲಯ, ಪ್ರಾರ್ಥನೆ ಮಂದಿರ ಸ್ಥಾಪನೆಗೊಂಡಿವೆ. ಬೃಹತ್‌ ಗ್ರಂಥಾಲಯ, ಕಲಾ ಭವನ, ಸಮುದಾಯ ಭವನ ನಿರ್ಮಾಣ ಜತೆಗೆ ರಾಜ್ಯದ ಪ್ರಮುಖ ಪ್ರವಾಸಿ ಕೇಂದ್ರವನ್ನಾಗಿ ರೂಪಿಸುವಲ್ಲಿ ಸ್ಥಳೀಯ ಶಾಸಕ ಬಸವರಾಜ ಬೊಮ್ಮಾಯಿ ಶ್ರಮ ಅಪಾರ. ಪ್ರಾರ್ಥನೆ ಮಂದಿರದಲ್ಲಿ ತೈಲವರ್ಣ ಚಿತ್ರಗಳಲ್ಲಿ ಶರೀಫರ ಜೀವನ ಚರಿತ್ರೆ ಬಿತ್ತರಿಸಲಾಗಿದೆ. ಇಂತಹ ಪ್ರೇಕ್ಷ ಣಿಯ ಸ್ಥಳದ ವೀಕ್ಷ ಣೆ ಮತ್ತು ಶರೀಫರ ಚರಿತೆ ತಿಳಿದುಕೊಳ್ಳುವ ಕುತೂಹಲದಿಂದ ರಾಜ್ಯ ವಿವಿಧ ಮೂಲೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇಲ್ಲಿಗೆ ಬಂದು ಜೀವನದ ಜಂಜಾಟಗಳನ್ನು ಕಳೆದು, ನೆಮ್ಮದಿ ಪಡೆದುಕೊಳ್ಳುತ್ತಿರುವುದು ವಿಶೇಷವಾಗಿದೆ. ಈ ಸ್ಥಳಕ್ಕೆ 60 ಕಿ.ಮೀ.ದೂರದ ಹುಬ್ಬಳ್ಳಿಯಿಂದ ನೇರ ಸಾರಿಗೆ ವ್ಯವಸ್ಥೆ ಇದೆ. ಶಿಗ್ಗಾವಿಯಿಂದ ಕೇವಲ 15 ಕಿ.ಮೀ.ದೂರದಲ್ಲಿದೆ.

ತಮ್ಮ ಜೀವನಾಭವದೊಂದಿಗೆ ಶರೀಫರು ತತ್ವಪದಗಳನ್ನು ರಚಿಸಿ ಹಾಡಿ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿ ಸುಂದರ ಸಮಾಜ ಸ್ಥಾಪನೆಗೆ ಶ್ರಮಿಸಿ ಕರ್ನಾಟಕದ ಕಬೀರ, ಜಾನಪದ ಕವಿ, ಸಂತ ಎನಿಸಿಕೊಂಡವರು.

ಒಂದು ಕಡೆ ನೆಲೆ ನಿಲ್ಲದೇ, ಸದಾ ಸಂಚಾರದ ಮೂಲಕ ಜನಮನ ತಲುಪಿಸಿದ ಶರೀಫರು, ಎಲ್ಲಿಯೂ ಮಠ ಮಂದಿರ ಸ್ಥಾಪನೆ ಮಾಡಲಿಲ್ಲ. ತಮ್ಮ ಅಪಾರ ಅನುಭವದ ಮೂಲಕ ಜೀವನದ ಮಹತ್ವ ಸಾರಿ ಪದಗಳಿಂದ ಜನಮಾನಸದಲ್ಲೇ ಮಠ, ಮಂದಿರಗಳನ್ನು ಸ್ಥಾಪಿಸಿ ಸಂತರಾದವರು.

ದೈವಿ ಭಕ್ತರಾಗಿದ್ದ ಶರೀಫರು, ತಂದೆ ತಾಯಿಯ ಮಾರ್ಗದರ್ಶನದಂತೆ ಧ್ರುವ ನಕ್ಷ ತ್ರದಂತೆ ಮಿನುಗಿದವರು. ಮತ ಧರ್ಮದಿಂದ ಮುಸ್ಲಿಂರಾದರೂ, ಧರ್ಮದ ದೃಷ್ಟಿಯಿಂದ ವಿಶ್ವಮಾನವರಾಗಿ ಜಗದ ಕಲ್ಯಾಣಕ್ಕಾಗಿ ಶ್ರಮಿಸಿ ಧೀಮಂತ ಎನಿಸಿದರು. ಹೀಗಾಗಿ ಅವರ ಜೀವನದ ಸಂದೇಶಗಳು ಭವಿಷ್ಯತ್ವ ಜತೆಗೆ ದಾರ್ಶನಿಕವಾಗಿ ಉಳಿದಿವೆ. ಹಳ್ಳ-ಕೊಳ್ಳ, ನದಿ, ಹೊಂಡಗಳೆಲ್ಲ ಹರಿದು ಸಮುದ್ರವನ್ನೇ ಸೇರುವಂತೆ ಎಲ್ಲ ತತ್ವಗಳ ಮೂಲವು ಒಂದೇ ಎಂಬ ವಿಶಾಲ ತತ್ವಸಾರ ಅವರದಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ