ಆ್ಯಪ್ನಗರ

ಶ್ರೀ ಸತ್ಯಬೋಧರ ಆರಾಧನಾ ಮಹೋತ್ಸವ

ಸವಣೂರು: ತಪೋನಿಧಿ ಶ್ರೀ ಸತ್ಯಬೋಧರ ಆರಾಧನಾ ಮಹೋತ್ಸವ ವಿಜೃಂಬಣೆಯಿಂದ ಮುಂದುವರೆದಿದ್ದು, ಸಹಸ್ರಾರು ಭಕ್ತರು ಶ್ರದ್ಧಾ ಭಕ್ತಿಯಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

Vijaya Karnataka 22 Mar 2019, 5:00 am
ಸವಣೂರು: ತಪೋನಿಧಿ ಶ್ರೀ ಸತ್ಯಬೋಧರ ಆರಾಧನಾ ಮಹೋತ್ಸವ ವಿಜೃಂಬಣೆಯಿಂದ ಮುಂದುವರೆದಿದ್ದು, ಸಹಸ್ರಾರು ಭಕ್ತರು ಶ್ರದ್ಧಾ ಭಕ್ತಿಯಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
Vijaya Karnataka Web HVR-21SVR2


ಉತ್ತರಾಧಿಮಠಾಧೀಶರಾದ ಸತ್ಯಾತ್ಮತೀರ್ಥರ ದಿವ್ಯ ಉಪಸ್ಥಿತಿಯಲ್ಲಿ ಗುರುಗಳ ಮಧ್ಯಾರಾಧನಾ ಕಾರ್ಯಕ್ರಮಗಳು ಗುರುವಾರ ಸಾಂಗವಾಗಿ ನೆರವೇರಿತು. ನಂತರ, ಮಠದಲ್ಲಿ ದಿಗ್ವಿಜಯ ಮೂಲರಾಮ ದೇವರ ಮಹಾಪೂಜೆಯನ್ನು ಕೈಗೊಂಡ ಸತ್ಯಾತ್ಮತೀರ್ಥರು, ಭಕ್ತವೃಂದಕ್ಕೆ ತಪ್ತ ಮುದ್ರಾಧಾರಣೆ ನೀಡಿದರು. ಗುರುಗಳ ವೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ ಕೈಗೊಳ್ಳಲಾಯಿತು.

ವಜ್ರ ಕವಚ, ಸುವರ್ಣ ಕವಚ, ರಜತ ಕವಚಗಳಿಂದ ವೃಂದಾವನವನ್ನು ಅಲಂಕೃತಗೊಳಿಸಲಾಗಿತ್ತು. ಹಸ್ತೋದಕ, ತೀರ್ಥಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಹರಿ ದಾಸ ವಾಣಿ : ಪೂರ್ವಾರಾಧನೆಯಲ್ಲಿ ಅಷ್ಠಾವಧಾನ ಸೇವೆ, ಪಲ್ಲಕ್ಕಿ ಉತ್ಸವ, ತೊಟ್ಟಿಲೋತ್ಸವ ಕಾರ್ಯಕ್ರಮಗಳು ನೆರವೇರಿದವು. ಬಳಿಕ ನಾಡಿನ ಪ್ರಖ್ಯಾತ ಗಾಯಕರಾದ ಮೈಸೂರ ರಾಮಚಂದ್ರ ದಾಸ್‌ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

ಹರಿದಾಸರ ಕೀರ್ತನೆಗಳನ್ನು ನಿರಂತರವಾಗಿ ಪ್ರಸ್ತುತಪಡಿಸಿದ ಗಾಯಕರು, ಆಯಾ ಹಾಡುಗಳಿಗೆ ತಕ್ಕಂತೆ ದೇವರ, ಗುರುಗಳ ಭಾವಚಿತ್ರಗಳನ್ನು ಪ್ರದರ್ಶಿಸಿದರು. ಗಾಯಕರಿಗೆ ವಿಷ್ಣು ಜೋಶಿ ತಬಲಾ ಹಾಗೂ ಚಿದಂಬರ ಜೋಶಿ ಹಾರ್ಮೋನಿಯಂ, ರಘು ಬೆಂಗಳೂರ ತಾಳದ ಸಾತ್‌ ನೀಡಿದರು.

ತಾರತಮ್ಯಕ್ಕೆ ಅನುಗುಣವಾಗಿ ಹರಿದಾಸರ ಪದಗಳನ್ನು ಗಾಯಕರು ಪ್ರಸ್ಥುತಪಡಿಸಿದರು. ನೃತ್ಯ ಕೋಲಾಟಗಳೊಂದಿಗೆ ಭಕ್ತವೃಂದ ಸಂಬ್ರಮಿಸಿದರು. ಮಠದ ವತಿಯಿಂದ ಗಾಯಕರು ಹಾಗೂ ಪಕ್ಕವಾದ್ಯಗಾರರನ್ನು ಗೌರವಿಸಲಾಯಿತು.

ಮಾರ್ಚ 22 ಶುಕ್ರವಾರ ಸಂಜೆ ಬೆಂಗಳೂರಿನ ಆಲಾಪ ಪೌಂಡೇಶನ್‌ ವಿದ್ಯಾರ್ಥಿಗಳಿಂದ ದಾಸ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಮಠದ ಪರ್ಯಾಯಸ್ಥರು ಪ್ರಕಟಣೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ