ಆ್ಯಪ್ನಗರ

ಸಿದ್ದುಗೆ ಎಚ್‌ಡಿಕೆ ಬಳಿ ಭಿಕ್ಷೆ ಬೇಡುವಂಥ ಪರಿಸ್ಥಿತಿ ಬಂದಿದೆ: ನಳಿನ್‌ ಕುಮಾರ್‌ ಕಟೀಲ್‌ ವ್ಯಂಗ್ಯ

"ಒಂಟಿಯಾಗಿ ಚುನಾವಣೆಗೆ ಹೋದರೆ ಗೆಲ್ಲಲ್ಲ ಅಂತ ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಭಯಭೀತರಾಗಿದ್ದಾರೆ. ಹೀಗಾಗಿ ಜನರನ್ನು ದಾರಿ ತಪ್ಪಿಸಲು ತಂತ್ರಗಾರಿಕೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಯಾವ ಧ್ರುವೀಕರಣವೂ ಆಗಲ್ಲ," -ನಳಿನ್‌ ಕುಮಾರ್ ಕಟೀಲ್‌.

Vijaya Karnataka Web 2 Dec 2019, 7:37 pm

ಹಿರೇಕೆರೂರ (ಹಾವೇರಿ): ಸಮ್ಮಿಶ್ರ ಸರಕಾರ ಕೆಡವಿದ ಸಿದ್ದರಾಮಯ್ಯಗೆ ತಾವು ಮತ್ತೆ ಸಿಎಂ ಆಗಲ್ಲ ಎನ್ನುವುದು ಗೊತ್ತಾಗಿ ಈಗ ಕುಮಾರಸ್ವಾಮಿ ಬಳಿ ಭಿಕ್ಷೆ ಬೇಡುವಂತಹ ಪರಿಸ್ಥಿತಿ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ವ್ಯಂಗ್ಯವಾಡಿದರು.
Vijaya Karnataka Web Nalin Kumar Kateel


ತಾಲೂಕಿನ ಕೋಡ ಗ್ರಾಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘‘ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿ ಮುಂದುವರಿಯಲು ಎಲ್ಲಾ 15 ಕ್ಷೇತ್ರಗಳಲ್ಲೂ ಮತದಾರ ಪ್ರಭುಗಳು ಬಿಜೆಪಿ ಗೆಲ್ಲಿಸಲಿದ್ದಾರೆ. ಒಂಟಿಯಾಗಿ ಚುನಾವಣೆಗೆ ಹೋದರೆ ಗೆಲ್ಲಲ್ಲ ಅಂತ ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಭಯಭೀತರಾಗಿದ್ದಾರೆ. ಹೀಗಾಗಿ ಜನರನ್ನು ದಾರಿ ತಪ್ಪಿಸಲು ತಂತ್ರಗಾರಿಕೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಯಾವ ಧ್ರುವೀಕರಣವೂ ಆಗಲ್ಲ’’ ಎಂದರು.

ಬಿಸಿ ಪಾಟೀಲ್‌ ಸಚಿವರಾಗಲು ಮತ ನೀಡಿ

‘‘17 ಜನ ಶಾಸಕರನ್ನು ಕಡೆಗಣಿಸಿದ್ದಕ್ಕೆ, ಅನುದಾನ ನೀಡದ್ದಕ್ಕೆ ಅವರೆಲ್ಲ ರಾಜೀನಾಮೆ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಬಿಸಿ ಪಾಟೀಲ್‌ ರಾಜೀನಾಮೆ ನೀಡಿದ್ದಾರೆ. ಅವರನ್ನು ಸಚಿವರನ್ನಾಗಿ ಮಾಡಲು ಮತ್ತು ಹಿರೇಕೆರೂರನ್ನು ರಾಜ್ಯದ ನಂಬರ್‌ 1 ಕ್ಷೇತ್ರವನ್ನಾಗಿ ಅಭಿವೃದ್ಧಿ ಮಾಡಲು ಬಿಜೆಪಿಗೆ ಮತ ನೀಡಿ’’ ಎಂದು ಮತದಾರರಿಗೆ ಮನವಿ ಮಾಡಿದರು.

'ಬೈ ಎಲೆಕ್ಷನ್ ಬಳಿಕ ಸಿದ್ದರಾಮಯ್ಯ ರಾಜಕಿಯವಾಗಿ ವೈಟ್‌ವಾಷ್‌': ಸಿದ್ದು ದುರಹಂಕಾರಿಯಂತೆ!

ಇದೇ ಸಂದರ್ಭ ಮಾಸೂರು, ರಟ್ಟೀಹಳ್ಳಿ, ಚಿಕ್ಕಎಡಚಿ, ಹುಲ್ಲತ್ತಿ, ಕೋಡ, ಹಂಸಭಾವಿ ಹಾಗೂ ಚಿಕ್ಕೇರೂರ ಗ್ರಾಮಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಭರ್ಜರಿ ರೋಡ್‌ ಶೋ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ