ಆ್ಯಪ್ನಗರ

ಸಾಮಾಜಿಕ ಲೆಕ್ಕ ಪರಿಶೋಧನಾ ವಿಶೇಷ ಗ್ರಾಮ ಸಭೆ

ರಾಣೇಬೆನ್ನೂರ: ಉದ್ಯೋಗ ಅರಸಿ ವಲಸೆ ಹೋಗುವುದನ್ನು ತಡೆಗಟ್ಟಿ ವಾಸಿಸುತ್ತಿರುವ ಗ್ರಾಮದಲ್ಲಿಯೇ ಉದ್ಯೋಗ ಕಲ್ಪಿಸುವ ಸಲುವಾಗಿ ಮನರೆಗಾ ಯೋಜನೆ ಜಾರಿಗೆ ತರಲಾಗಿದೆ ಎಂದು ಯೋಜನೆಯ ಸಂಯೋಜಕ ಡಿ.ವಿ.ಅಂಗೂರ ಕೂಲಿ ಕಾರ್ಮಿಕರಿಗೆ ತಿಳಿಸಿದರು.

Vijaya Karnataka 28 Jan 2020, 5:00 am
ರಾಣೇಬೆನ್ನೂರ: ಉದ್ಯೋಗ ಅರಸಿ ವಲಸೆ ಹೋಗುವುದನ್ನು ತಡೆಗಟ್ಟಿ ವಾಸಿಸುತ್ತಿರುವ ಗ್ರಾಮದಲ್ಲಿಯೇ ಉದ್ಯೋಗ ಕಲ್ಪಿಸುವ ಸಲುವಾಗಿ ಮನರೆಗಾ ಯೋಜನೆ ಜಾರಿಗೆ ತರಲಾಗಿದೆ ಎಂದು ಯೋಜನೆಯ ಸಂಯೋಜಕ ಡಿ.ವಿ.ಅಂಗೂರ ಕೂಲಿ ಕಾರ್ಮಿಕರಿಗೆ ತಿಳಿಸಿದರು.
Vijaya Karnataka Web social audit special gram sabha
ಸಾಮಾಜಿಕ ಲೆಕ್ಕ ಪರಿಶೋಧನಾ ವಿಶೇಷ ಗ್ರಾಮ ಸಭೆ


ತಾಲೂಕಿನ ಹನುಮಾಪುರ ಗ್ರಾಮದಲ್ಲಿಮನರೆಗಾ ಯೋಜನೆಯಡಿ ರೋಜಗಾರ ದಿನಾಚರಣೆ ಹಾಗೂ ಸಾಮಾಜಿಕ ಲೆಕ್ಕ ಪರಿಶೋಧನಾ ವಿಶೇಷ ಗ್ರಾಮ ಸಭೆಯಲ್ಲಿಮಾತನಾಡಿದರು. ಸರಕಾರವು ಅತೀವೃಷ್ಠಿಯಿ ಹಿನ್ನೆಲೆಯಲ್ಲಿ2019-20ನೇ ಸಾಲಿನಲ್ಲಿಪ್ರತಿ ಕುಟುಂಬಕ್ಕೆ 150 ದಿನಗಳ ಉದ್ಯೋಗ ನೀಡಲು ಆದೇಶಿಸಿದೆ. ಈ ವರ್ಷ ಮಣ್ಣು ಮತ್ತು ನೀರಿನ ಸಂರಕ್ಷಣಾ ಕಾಮಗಾರಿಗಳಾದ ಕೆರೆಗಳ ಹೂಳೆತ್ತುವುದು, ನೀರುಗಾಲುವೆ, ಬದು ನಿರ್ಮಾಣ, ಕೃಷಿ ಹೊಂಡ, ಇಂಗುಗುಂಡಿ, ಅರಣ್ಯೀಕರಣ, ತೋಟಗಾರಿಕೆ ಇತ್ಯಾದಿ ಕಾಮಗಾರಿಗಳನ್ನು ಕೈಗೊಳ್ಳಬಹುದು ಎಂದರು.

ಪಿಡಿಒ ಟಿ,ಬಿ,ಮುಗಾನವರ ಮಾತನಾಡಿ, 2019 ಏ. 1ರಿಂದ ಸ. 30ರವರಗೆ ಹನುಮಾಪುರ ಗ್ರಾಮ ಪಂಚಾಯಿತಿಯಲ್ಲಿಯೋಜನೆಯಡಿ 75 ಕಾಮಗಾರಿಗಳು ಅನುಷ್ಠಾನಗೊಳಿಸಲಾಗಿದೆ. ಇದಕ್ಕೆ ಒಟ್ಟು 26.17.573 ರೂ ಖರ್ಚಾಗಿದೆ. ಮುಂಬರುವ ಅವಧಿಯಲ್ಲಿಕೂಲಿ ಕಾರ್ಮಿಕರಿಗೆ ಕೂಲಿ ಒದಗಿಸುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ಗ್ರಾಪಂ ಅಧ್ಯಕ್ಷೆ ದುರಗವ್ವ ಹನುಮಂತಪ್ಪ ಮಾದರ, ಅಹಮದಸಾಬ ನದಾಫ್‌, ಗೋಪಾಲ, ಲಕ್ಷತ್ರ್ಮವ್ವ ಬೆನ್ನೂರ, ನಿಂಗಪ್ಪ ಕೊರಚರ, ಗಿರೀಶ ಪಾಟೀಲ, ಪರಮೇಶ, ಪ್ರಕಾಶ, ಪ್ರಕಾಶ ನಾಯ್ಕರ, ಶಿವಪ್ಪ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ