ಆ್ಯಪ್ನಗರ

ಅಧರ್ಮದ ನಡೆಯಿಂದ ಸಮಾಜ ಕಲುಷಿತ

ಹಾವೇರಿ : ಇಂದು ಮನುಷ್ಯನ ಅಧರ್ಮದ ನಡೆಯಿಂದ ಸಮಾಜ ಕಲುಷಿತವಾಗಿದೆ ಎಂದು ಹೋತನಹಳ್ಳಿಯ ಸಿಂದಗಿಮಠದ ಶಂಭುಲಿಂಗ ಪಟ್ಟಾಧ್ಯಕ್ಷ ರ ಹೇಳಿದರು. ನಗರದ ಸಿಂದಗಿಮಠದಲ್ಲಿ ಹಮ್ಮಿಕೊಂಡಿರುವ ಲಿಂ. ಶಾಂತವೀರ ಪಟ್ಟಾಧ್ಯಕ್ಷ ರ 39ನೇ ಪುಣ್ಯ ಸ್ಮರಣೋತ್ಸವದ 5ನೇ ದಿನದ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು.

Vijaya Karnataka 6 Mar 2019, 5:00 am
ಹಾವೇರಿ : ಇಂದು ಮನುಷ್ಯನ ಅಧರ್ಮದ ನಡೆಯಿಂದ ಸಮಾಜ ಕಲುಷಿತವಾಗಿದೆ ಎಂದು ಹೋತನಹಳ್ಳಿಯ ಸಿಂದಗಿಮಠದ ಶಂಭುಲಿಂಗ ಪಟ್ಟಾಧ್ಯಕ್ಷ ರ ಹೇಳಿದರು. ನಗರದ ಸಿಂದಗಿಮಠದಲ್ಲಿ ಹಮ್ಮಿಕೊಂಡಿರುವ ಲಿಂ. ಶಾಂತವೀರ ಪಟ್ಟಾಧ್ಯಕ್ಷ ರ 39ನೇ ಪುಣ್ಯ ಸ್ಮರಣೋತ್ಸವದ 5ನೇ ದಿನದ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು.
Vijaya Karnataka Web HVR-5 HAVERI 6
ಹಾವೇರಿಯ ಸಿಂದಗಿಮಠದಲ್ಲಿ ಹಮ್ಮಿಕೊಂಡಿರುವ ಲಿಂ. ಶಾಂತವೀರ ಪಟ್ಟಾಧ್ಯಕ್ಷ ರ 39ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಧಾರವಾಡದ ಆಕಾಶವಾಣಿ ಕಲಾವಿದೆ ಸುನಂದಾ ನಿಂಬನಗೌಡರ ವಚನ ಸಂಗೀತವನ್ನು ಪ್ರಸ್ತುತ ಪಡಿಸಿದರು.


ಆಧುನಿಕ ಯುಗದಲ್ಲಿ ಸರ್ವ ರೋಗಕ್ಕೂ ಮದ್ದು ಇದೆ, ಆದರೆ ನೆಮ್ಮದಿ ಬದುಕಿಗೆ ಮಾತ್ರ ಯಾವದೇ ಮದ್ದು ಇಲ್ಲ. ನೈತಿಕ ಜೀವನ ಮತ್ತು ಧರ್ಮದ ಆಚರಣೆಯಿಂದ ನೆಮ್ಮದಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.

ಮಾತನಾಡುವದು ಸಾಧನೆಯಾಗಬಾರದು, ಸಾಧನೆ ಮಾತನಾಡಬೇಕು ಎನ್ನುವಂತೆ ತಮ್ಮ ಕತೃತ್ವ ಶಕ್ತಿ ಮೂಲಕ ಬಸವಾದಿ ಶಿವಶರಣರ ಅರಿವು ಆಚಾರಗಳನ್ನು ಸಮಾಜೋಭಿವೃದ್ಧಿಗೆ ಧಾರೆ ಎರೆದ ಸಿಂದಗಿಯ ಲಿಂ.ಶಾಂತವೀರ ಪಟ್ಟಾಧ್ಯಕ್ಷ ರು ಆತ್ಮ ಕಲ್ಯಾಣದ ಜೊತೆಗೆ ಸಮಾಜ ಕಲ್ಯಾಣ ಮಾಡಿ, ಸಂತ ಪರಂಪರೆಯ ಗೌರಿಶಂಕರವಾಗಿದ್ದಾರೆ ಎಂದು ಹೇಳಿದರು.

ಲಿಂ.ಹಾನಗಲ್ಲ ಕುಮಾರ ಸ್ವಾಮಿಗಳು ಮತ್ತು ಲಿಂ. ಶಾಂತವೀರ ಪಟ್ಟಾಧ್ಯಕ್ಷ ರ ಜೀವನ ಸಂದೇಶ ನಮೆಗೆಲ್ಲಾ ಉತ್ತಮ ಜೀವನಕ್ಕೆ ದಾರಿ ದೀಪವಾಗಿವೆ ಎಂದು ಹೇಳಿದರು.

ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಮಹಾಂತ ದೇವರು ಶೇಗುಣಸಿ ಮಾತನಾಡಿ, ಈ ಜಗತ್ತಿನಲ್ಲಿ ಯೇಸು, ಪೈಗಂಬರ, ಬುದ್ಧ, ಮಹಾವೀರ, ಬಸವ, ಗಾಂಧೀಜಿ ಮಹಾನ ಚೇತನವಾಗಲು ಪ್ರಮುಖ ಕಾರಣ. ಅವರು ಮಾಡಿದ ದೀನ ದಲಿತರ ಸೇವೆಯಿಂದ ಎಂದು ಹೇಳಿದರು.

ವ್ಯಕ್ತಿ ಸೇವೆಯಿಂದ ದೊಡ್ಡವನಾಗುತ್ತಾನೆ ಹೊರತು ಪೀಠ, ಸಿಂಹಾಸನದಿಂದ ಅಲ್ಲ. ಬಡ ವ್ಯಕ್ತಿಗೆ ನಾವು ಸಲ್ಲಿಸುವ ಸೇವೆ ಪರಮಾತ್ಮನ ಸೇವೆ ಮಾಡಿದಂತೆ ಎಂದರು.

ಅನ್ನ, ಅರಿವು, ಆಶ್ರಯ ನೀಡುವುದರ ಮೂಲಕ ಭಕ್ತವೃಂದ ಮೇಲೆ ಕರುಣೆಯಿಟ್ಟು ಸಮಾಜ ಕಲ್ಯಾಣಕ್ಕಾಗಿ ತಮ್ಮ ಕೃಪಾಬಲವನ್ನು ಧಾರೆಯೆರೆದ ಮಹಾಮಹಿರಲ್ಲಿ ಧಾರವಾಡದ ಮೃತ್ಯುಂಜಯ ಅಪ್ಪಗಳು, ತುಮಕೂರಿನ ಶಿವಕುಮಾರ ಶ್ರೀಗಳು, ಬಾಲ್ಕಿಯ ಪಟ್ಟದ್ದೇವರ ಸಾಲಿಗೆ ಸಿಂದಗಿಯ ಶಾಂತವೀರ ಸ್ವಾಮೀಗಳು ಸೇರುತ್ತಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಧಾರವಾಡದ ಆಕಾಶವಾಣಿ ಕಲಾವಿದೆ ಸುನಂದಾ ನಿಂಬನಗೌಡರ ವಚನ ಸಂಗೀತವನ್ನು ಪ್ರಸ್ತುತ ಪಡಿಸಿದರು. ಸಮಾರಂಭದಲ್ಲಿ ಬೈರನಹಟ್ಟಿ ದೊರೆಸ್ವಾಮಿ ಮಠದ ಶಾಂತಲಿಂಗ ಸ್ವಾಮೀಜಿ, ಹನುಮಂತಪ್ಪ ಕಾಮನಹಳ್ಳಿ, ಎಂ.ಎಸ್‌. ಹಿರೇಮಠ, ಶಿವಯೋಗಿಸ್ವಾಮಿ ಹಿರೇಮಠ, ಅಂಕಲಗಿ ಶಾಸ್ತ್ರೀಜಿ, ಚನ್ನಬಸಯ್ಯ ಹಿರೇಮಠ ಸೇರಿದಂತೆ ಉಪಸ್ಥಿತರಿದ್ದರು.

ಆರಂಭದಲ್ಲಿ ಆಕಾಶವಾಣಿ ಕಲಾವಿದ ಗುರುನಾಥ ಸುತಾರ ಪ್ರಾರ್ಥಿಸಿದರು. ಜಿ.ಎಸ್‌.ಭಟ್‌ ಸ್ವಾಗತಿಸಿದರು. ಶ್ರೀಮಠದ ವ್ಯವಸ್ಥಾಪಕ ಶಿವಬಸಯ್ಯ ಆರಾಧ್ಯಮಠ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ