ಆ್ಯಪ್ನಗರ

ಜನರ ಅಹವಾಲು ಆಲಿಸಿ ಪರಿಹಾರ: ಶಾಸಕ ಪೂಜಾರ

ರಾಣೇಬೆನ್ನೂರ: ತಾಲೂಕಿನ ಜನರ ಅಹವಾಲುಗಳನ್ನು ಆಲಿಸಿ ಪರಿಹಾರ ಒದಗಿಸುವ ಸಲುವಾಗಿ ಜನ ಸಂಪರ್ಕ ಕಚೇರಿಯನ್ನು ತೆರೆಯಲಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

Vijaya Karnataka 28 Jan 2020, 5:00 am
ರಾಣೇಬೆನ್ನೂರ: ತಾಲೂಕಿನ ಜನರ ಅಹವಾಲುಗಳನ್ನು ಆಲಿಸಿ ಪರಿಹಾರ ಒದಗಿಸುವ ಸಲುವಾಗಿ ಜನ ಸಂಪರ್ಕ ಕಚೇರಿಯನ್ನು ತೆರೆಯಲಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
Vijaya Karnataka Web solution for listening to peoples pleas lawmaker pooja
ಜನರ ಅಹವಾಲು ಆಲಿಸಿ ಪರಿಹಾರ: ಶಾಸಕ ಪೂಜಾರ


ನಗರದ ತಾಲೂಕು ಪಂಚಾಯಿತಿ ಆವರಣದ ಸಾಮರ್ಥ್ಯ ಸೌಧದಲ್ಲಿಸೋಮವಾರ ಜನಸಂಪರ್ಕ ಕಚೇರಿ ಉದ್ಘಾಟಿಸಿ ಮಾತನಾಡಿದರು. ಕಚೇರಿ ಬಾಗಿಲು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ತೆರೆದಿರುತ್ತದೆ. ಇದಕ್ಕಾಗಿ ಶಾಸಕರ ಪ್ರತಿನಿಧಿಯೊಬ್ಬರು ಕಚೇರಿಯಲ್ಲಿದ್ದು ಜನರಿಗೆ ನೆರವಾಗುತ್ತಾರೆ. ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ ತಮ್ಮ ಸ್ವಗ್ರಾಮ ಕೊಡಿಯಾಲ ಹೊಸಪೇಟೆಗೆ ಬಂದು ಹೋಗುವುದನ್ನು ತಪ್ಪಿಸಲು ಕಚೇರಿ ಪ್ರಾರಂಭಿಸಲಾಗಿದೆ ಎಂದರು.

ಜಿಪಂ ಸದಸ್ಯೆ ಮಂಗಳಗೌರಿ ಪೂಜಾರ, ವಿಶ್ವನಾಥ ಪಾಟೀಲ, ಚೋಳಪ್ಪ ಕಸವಾಳ, ಸಂತೋಷಕುಮಾರ ಪಾಟೀಲ, ಮಂಜುನಾಥ ಓಲೇಕಾರ, ಗದಿಗೆಪ್ಪ ಹೊಟ್ಟಿಗೌಡರ, ಬಸವರಾಜ ಹುಲ್ಲತ್ತಿ, ತಾಪಂ ಇಒ ಎಸ್‌.ಎಂ.ಕಾಂಬಳೆ, ಅಶೋಕ ನಾರಜ್ಜಿ, ಬಿ.ಎಸ್‌.ಶಿಡೇನೂರ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ