ಹಾವೇರಿ: ಹೋಳಿ ಹಬ್ಬ ಬಂದ್ರೆ ಸಾಕು ಇವರು ಮನೆಗಳಿಗೆ ಲಗ್ಗೆ ಇಡುತ್ತಾರೆ. ಪಡ್ಡೆ ಹೈಕ್ಳು, ಮಧ್ಯವಯಸ್ಕರೆನ್ನದೇ ಯಾರೇ ಪುರುಷರಿದ್ದರೂ ಹಾಡು ನೃತ್ಯದ ಮೂಲಕ ಮನರಂಜಿಸುತ್ತಾರೆ. ಖುಷಿಗಾಗಿ ಕಾಸು ಕೇಳುವ ಮೂಲಕ ಲಂಬಾಣಿಗರು ಕರೆಯದೇ ಬರುವ ಅತಿಥಿಗಳಾಗಿ ಪ್ರಸಿದ್ಧರಾಗಿದ್ದಾರೆ.
ಕಾಲ ಬದಲಾದಂತೆ ಈ ಸಮುದಾಯ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಜತೆಗೆ ರಾಜಕೀಯವಾಗಿಯೂ ಸಬಲರಾಗಿದ್ದರೂ ಪೂರ್ವಿಕರ ಸಂಪ್ರದಾಯವನ್ನು ಹೋಳಿ ಹಬ್ಬದಲ್ಲಿ ಆಚರಿಸುವ ಮೂಲಕ ಮನೆ ಮಾತಾಗಿದ್ದಾರೆ.
ಮಾರೆಮ್ಮಗೆ ಸಂತೃಪ್ತಿ : ಹೋಳಿ ಹಬ್ಬಕ್ಕೆ ಸಂಪ್ರದಾಯ ಉಡುಗೆ ತೊಡುವ ಹೆಂಗಳೆಯರು ಊರೂರು ಅಲೆಯುತ್ತಾರೆ. ಕುಲದೇವ ಸೇವಾಲಾಲ್ರನ್ನು ತಮ್ಮ ಸಮಾಜಕ್ಕೆ ವರವಾಗಿ ನೀಡಿದ ಮಾರೆಮ್ಮನ ಖುಷಿಗೆ ಕುಣಿಯುತ್ತಾರೆ. ಲಂಬಾಣಿ ಸಮುದಾಯದ ಹಾಡು ಹೇಳೋ ಮೂಲಕ ಬಣ್ಣದೋಕುಳಿಗೆ ಮನ ರಂಜಿಸುತ್ತಾರೆ. ಅಜ್ಜಿಯರು ಯುವಕರ ಕೈಹಿಡಿದು ತಮ್ಮೊಂದಿಗೆ ಕುಣಿಯಲು ಪ್ರಚೋದಿಸುವ ವಿಶೇಷತೆಗೆ ಮೆರಗು ತರುತ್ತಾರೆ.
ಸಮುದಾಯದ ನಾಯಕರ ಪ್ರಕಾರ, 16-17 ನೇ ಶತಮಾನದಿಂದಲೇ ಹೋಳಿ ಸಂಭ್ರಮಾಚರಣೆ ಲಂಬಾಣಿ ಸಮಾಜದ ಸಾಂಪ್ರದಾಯವಾಗಿದೆ. ಸರಕು-ಸಾಗಾಣಿಕೆ ಮೂಲಕ ನಿತ್ಯ ಅಲೆಯುತ್ತಿದ್ದವರೆಲ್ಲ ಹೋಳಿ ಹಬ್ಬದ ವೇಳೆಗೆ ಕೊಪ್ಪಳದ ಕೋಟೆಯಲ್ಲಿರುವ ಬಹದ್ಧೂರ ಬಂಡ್ಗೆ ಸೇರುತ್ತಾರೆ. ಪುರುಷ-ಮಹಿಳೆ ಎಂಬ ಲಿಂಗಬೇಧವಿಲ್ಲದೇ ಪರಸ್ಪರ ಬಣ್ಣ ಎರಚಿ ಸಂಭ್ರಮಿಸು ತ್ತಾರೆ. ಈ ಹೋಳಿ ಹಬ್ಬಕ್ಕೆ ತಿರುಪತಿ ವೆಂಕಟೇಶ್ವರನ ಜತೆ ಪಗಡೆಯಾಟ ಆಡುತ್ತಿದ್ದ ಹಾತಿರಾಮ ಭಾವಾ ಸಹ ಬರುತ್ತಿದ್ದರು ಎನ್ನುವುದು ವಾಡಿಕೆ.
ಸೇವಾಲಾಲ್ ಹುಟ್ಟುಹಬ್ಬ : ಧರ್ಮಿಣಿಬಾಯಿ ಮತ್ತು ಭೀಮಾನಾಯಕ ದಂಪತಿಗಳಿಗೆ ಸಂತಾನವಿಲ್ಲದ ಸಮಯದಲ್ಲಿ ಈ ಮಾರೆಮ್ಮ ಪುತ್ರ ಸಂತಾನದ ವರ ನೀಡುತ್ತಾಳೆ. ಆ ಪುತ್ರ ರತ್ನವೇ ಲಂಬಾಣಿ ಸಮಾಜದ ಗುರು ಸಂತ ಸೇವಾಲಾಲ್ರು. ಅವರ ಹುಟ್ಟು ಹಬ್ಬದ ಸಂಭ್ರಮವಾಗಿಯೂ ಈ ಹೋಳಿ ಆಚರಿಸುವ ಸಂಭ್ರಮ ಸಂಪ್ರದಾಯವಾಗಿ ರೂಢಿಗತವಾಗಿದೆ. ಕೊಪ್ಪಳ ಕೋಟೆಗೆ ಹೋಗಲು ಸಾಧ್ಯವಾಗ ದವರು ಹೋಳಿ ಹಬ್ಬದ ಸಮಯದಲ್ಲಿ ಪಕ್ಕದೂರುಗಳಿಗೆ ಹೋಗುತ್ತಾರೆ. ಪ್ರತಿ ಮನೆ-ಮನೆಗೆ ತೆರಳಿ ಹಾಡು ಹೇಳುತ್ತ ನೃತ್ಯ ಮಾಡುತ್ತಾರೆ. ಹಬ್ಬದ ಖುಷಿ ಕೇಳಿ ಹಣ ಪಡೆಯುತ್ತಾರೆ. ಮಾರೆ ಮ್ಮನಿಗೆ ಬೇಡಿಕೊಂಡು ಕಾಸು ಕೊಟ್ಟವರಿಗೆ ಒಳ್ಳೆಯದನ್ನು ಮಾಡು ಎಂದು ಅರಿಕೆ ಮಾಡಿಕೊ ಳ್ಳುವ ಸತ್ ಸಂಪ್ರದಾಯಕ್ಕೆ ಮಾದರಿಯಾಗಿದ್ದಾರೆ.
ಹೋಳಿ ಹಬ್ಬಕ್ಕೆ ಬರುವ ಈ ಲಂಬಾಣಿಗರ ಖುಷಿಯಲ್ಲಿ ಭಾಗಿಯಾಗಿ. ಮಾರೆಮ್ಮನ ಆಶಿರ್ವಾ ದದಿಂದ ಬರುವ ಸಂಕಷ್ಟಗಳಿಂದ ಪಾರಾಗಿ ಎನ್ನುವುದೇ ಈ ಸಮುದಾಯ ನಾಯಕರ ಅರಿಕೆ.
ಕಾಲ ಬದಲಾದಂತೆ ಈ ಸಮುದಾಯ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಜತೆಗೆ ರಾಜಕೀಯವಾಗಿಯೂ ಸಬಲರಾಗಿದ್ದರೂ ಪೂರ್ವಿಕರ ಸಂಪ್ರದಾಯವನ್ನು ಹೋಳಿ ಹಬ್ಬದಲ್ಲಿ ಆಚರಿಸುವ ಮೂಲಕ ಮನೆ ಮಾತಾಗಿದ್ದಾರೆ.
ಮಾರೆಮ್ಮಗೆ ಸಂತೃಪ್ತಿ : ಹೋಳಿ ಹಬ್ಬಕ್ಕೆ ಸಂಪ್ರದಾಯ ಉಡುಗೆ ತೊಡುವ ಹೆಂಗಳೆಯರು ಊರೂರು ಅಲೆಯುತ್ತಾರೆ. ಕುಲದೇವ ಸೇವಾಲಾಲ್ರನ್ನು ತಮ್ಮ ಸಮಾಜಕ್ಕೆ ವರವಾಗಿ ನೀಡಿದ ಮಾರೆಮ್ಮನ ಖುಷಿಗೆ ಕುಣಿಯುತ್ತಾರೆ. ಲಂಬಾಣಿ ಸಮುದಾಯದ ಹಾಡು ಹೇಳೋ ಮೂಲಕ ಬಣ್ಣದೋಕುಳಿಗೆ ಮನ ರಂಜಿಸುತ್ತಾರೆ. ಅಜ್ಜಿಯರು ಯುವಕರ ಕೈಹಿಡಿದು ತಮ್ಮೊಂದಿಗೆ ಕುಣಿಯಲು ಪ್ರಚೋದಿಸುವ ವಿಶೇಷತೆಗೆ ಮೆರಗು ತರುತ್ತಾರೆ.
ಸಮುದಾಯದ ನಾಯಕರ ಪ್ರಕಾರ, 16-17 ನೇ ಶತಮಾನದಿಂದಲೇ ಹೋಳಿ ಸಂಭ್ರಮಾಚರಣೆ ಲಂಬಾಣಿ ಸಮಾಜದ ಸಾಂಪ್ರದಾಯವಾಗಿದೆ. ಸರಕು-ಸಾಗಾಣಿಕೆ ಮೂಲಕ ನಿತ್ಯ ಅಲೆಯುತ್ತಿದ್ದವರೆಲ್ಲ ಹೋಳಿ ಹಬ್ಬದ ವೇಳೆಗೆ ಕೊಪ್ಪಳದ ಕೋಟೆಯಲ್ಲಿರುವ ಬಹದ್ಧೂರ ಬಂಡ್ಗೆ ಸೇರುತ್ತಾರೆ. ಪುರುಷ-ಮಹಿಳೆ ಎಂಬ ಲಿಂಗಬೇಧವಿಲ್ಲದೇ ಪರಸ್ಪರ ಬಣ್ಣ ಎರಚಿ ಸಂಭ್ರಮಿಸು ತ್ತಾರೆ. ಈ ಹೋಳಿ ಹಬ್ಬಕ್ಕೆ ತಿರುಪತಿ ವೆಂಕಟೇಶ್ವರನ ಜತೆ ಪಗಡೆಯಾಟ ಆಡುತ್ತಿದ್ದ ಹಾತಿರಾಮ ಭಾವಾ ಸಹ ಬರುತ್ತಿದ್ದರು ಎನ್ನುವುದು ವಾಡಿಕೆ.
ಸೇವಾಲಾಲ್ ಹುಟ್ಟುಹಬ್ಬ : ಧರ್ಮಿಣಿಬಾಯಿ ಮತ್ತು ಭೀಮಾನಾಯಕ ದಂಪತಿಗಳಿಗೆ ಸಂತಾನವಿಲ್ಲದ ಸಮಯದಲ್ಲಿ ಈ ಮಾರೆಮ್ಮ ಪುತ್ರ ಸಂತಾನದ ವರ ನೀಡುತ್ತಾಳೆ. ಆ ಪುತ್ರ ರತ್ನವೇ ಲಂಬಾಣಿ ಸಮಾಜದ ಗುರು ಸಂತ ಸೇವಾಲಾಲ್ರು. ಅವರ ಹುಟ್ಟು ಹಬ್ಬದ ಸಂಭ್ರಮವಾಗಿಯೂ ಈ ಹೋಳಿ ಆಚರಿಸುವ ಸಂಭ್ರಮ ಸಂಪ್ರದಾಯವಾಗಿ ರೂಢಿಗತವಾಗಿದೆ. ಕೊಪ್ಪಳ ಕೋಟೆಗೆ ಹೋಗಲು ಸಾಧ್ಯವಾಗ ದವರು ಹೋಳಿ ಹಬ್ಬದ ಸಮಯದಲ್ಲಿ ಪಕ್ಕದೂರುಗಳಿಗೆ ಹೋಗುತ್ತಾರೆ. ಪ್ರತಿ ಮನೆ-ಮನೆಗೆ ತೆರಳಿ ಹಾಡು ಹೇಳುತ್ತ ನೃತ್ಯ ಮಾಡುತ್ತಾರೆ. ಹಬ್ಬದ ಖುಷಿ ಕೇಳಿ ಹಣ ಪಡೆಯುತ್ತಾರೆ. ಮಾರೆ ಮ್ಮನಿಗೆ ಬೇಡಿಕೊಂಡು ಕಾಸು ಕೊಟ್ಟವರಿಗೆ ಒಳ್ಳೆಯದನ್ನು ಮಾಡು ಎಂದು ಅರಿಕೆ ಮಾಡಿಕೊ ಳ್ಳುವ ಸತ್ ಸಂಪ್ರದಾಯಕ್ಕೆ ಮಾದರಿಯಾಗಿದ್ದಾರೆ.
ಹೋಳಿ ಹಬ್ಬಕ್ಕೆ ಬರುವ ಈ ಲಂಬಾಣಿಗರ ಖುಷಿಯಲ್ಲಿ ಭಾಗಿಯಾಗಿ. ಮಾರೆಮ್ಮನ ಆಶಿರ್ವಾ ದದಿಂದ ಬರುವ ಸಂಕಷ್ಟಗಳಿಂದ ಪಾರಾಗಿ ಎನ್ನುವುದೇ ಈ ಸಮುದಾಯ ನಾಯಕರ ಅರಿಕೆ.