ಹಾವೇರಿ: ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ 86 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ದತೆಗಳು ಅಂತಿಮ ಹಂತ ತಲುಪಿವೆ. ಹಾವೇರಿಯಲ್ಲಿ ಇದೇ ಪ್ರಥಮ ಬಾರೆಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಚಿಕ್ಕ ಜಿಲ್ಲೆ ಹೊಸ ಜಿಲ್ಲೆಯಾಗಿರುವ ಹಾವೇರಿಯಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಹಲವು ಎಡರುತೊಡರುಗಳು ಆರಂಭದಲ್ಲಿ
ಕಂಡಿದ್ದವು. ಇದೀಗ ಸಮ್ಮೇಳನಕ್ಕೆ ಬರುವ ಮಹಿಳೆಯರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಹಾವೇರಿ ಜಿಲ್ಲೆಯ ಸ್ತ್ರೀಶಕ್ತಿ ಸಮಿತಿ ಮುಂದೆ ಬಂದಿದೆ.
ಸಮಿತಿಯಲ್ಲಿ 500 ಕ್ಕೂ ಅಧಿಕ ಸ್ವಯಂಸೇವಕಿಯರಿದ್ದು ಸಮ್ಮೇಳನಕ್ಕೆ ಬರುವ ಮಹಿಳೆಯರಿಗೆ ಸೇವೆ ಸಲ್ಲಿಸಲು ಸನ್ನದ್ದರಾಗಿದ್ದಾರೆ. 500 ಜನ ಸ್ವಯಂ ಸೇವಕಿಯರು ಒಂದೇ ಬಣ್ಣದ ಸೀರೆಯುಟ್ಟು ಸಮ್ಮೇಳನಕ್ಕೆ ಬರುವ ಮಹಿಳೆಯರನ್ನ ಸ್ವಾಗತಿಸಲಿದ್ದಾರೆ. ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಈ ಸದಸ್ಯೆಯರು ನೋಡಿಕೊಳ್ಳಲಿದ್ದಾರೆ. ಸಮ್ಮೇಳನಕ್ಕೆ ಬರುವ ಮಹಿಳೆಯರ ಆರೋಗ್ಯ, ವಸತಿ, ಆಹಾರ ಮತ್ತು ನೀರು ಸೇರಿದಂತೆ ಯಾವುದೇ ಸೇವೆಗಳಿಗೆ ಕೊರತೆಯಾಗದಂತೆ ಮಹಿಳೆಯರ ಸಂಘ ನೋಡಿಕೊಳ್ಳಲಿದೆ.
ಅಷ್ಟೇ ಅಲ್ಲದೆ ಸಮ್ಮೇಳನಕ್ಕೆ ಬರುವ ಬಾಣಂತಿಯರಿಗೆ ತಮ್ಮ ಮಕ್ಕಳಿಗೆ ಹಾಲುಣಿಸಲು ಅವಕಾಶವಾಗುವಂತೆ ಸ್ವಯಂಸೇವಕಿಯರು
ಸಿದ್ದತೆ ಮಾಡಿಕೊಂಡಿದ್ದಾರೆ. ಬರ್ರಿ ನಮ್ಮೂರಿಗೆ ಬರ್ರಿ ಹಾವೇರಿಗೆ ಎಂದು ಮಹಿಳಾಮಣಿಗಳು ಸ್ವಾಗತ ಮಾಡಿದ್ದಾರೆ.
ಓಡಾಡಲು ಕಾರ್ ಸೇರಿದಂತೆ ವಿವಿಧ ವಾಹನಗಳ ವ್ಯವಸ್ಥೆಯನ್ನ ಸಹ ಸ್ತ್ರಿಶಕ್ತಿ ಸಮಿತಿ ಮಾಡಿಕೊಂಡಿದೆ. ಸಮ್ಮೇಳನಕ್ಕೆ ಬರುವ ಮಹಿಳಾ ಸಾಹಿತಿಗಳಿಗೆ ಮಹಿಳಾ ಲೇಕಕಿಯರಿಗೆ ಪ್ರತ್ಯೇಕ ವ್ಯವಸ್ಥೆಯನ್ನ ಮಾಡುತ್ತಿರುವದಾಗಿ ಸಮಿತಿಯ ಸದಸ್ಯೆಯರು ತಿಳಿಸಿದ್ದಾರೆ. ಈ ದಿನಗಳಲ್ಲಿ ಮಧುಮೇಹ ಮತ್ತು ರಕ್ತದೋತ್ತಡ ಸೇರಿದಂತೆ ವಿವಿಧ ರೀತಿಯ ಆರೋಗ್ಯ ಸಮಸ್ಯೆ ಎದುರಿಸುವ ಮಹಿಳೆಯರು ಸಮ್ಮೇಳನಕ್ಕೆ ಬರುತ್ತಾರೆ. ಅಂತವರಿಗಾಗಿ ಸಮಿತಿಯ ಸದಸ್ಯೆಯರು ವಿಶೇಷ ಕಾಳಜಿ ವಹಿಸಲಿದ್ದಾರೆ. ಒಂದೇ ಸಮವಸ್ತ್ರ ಧರಿಸಿರುವ ಮಹಿಳೆ ಸದಸ್ಯೆಯರು ಮುಂದೆ ಸಮ್ಮೇಳನಕ್ಕೆ ಬರುವ ಮಹಿಳೆಯರು ಸಂಪರ್ಕಿಸಿದರೆ ಸಾಕು ಸೇವೆ ಸಿಗಲಿದೆ. ಹಾವೇರಿ ಜಿಲ್ಲೆಯ 8 ಜಿಲ್ಲೆಗಳ ಸ್ತ್ರಿಶಕ್ತಿಸಮಿತಿಯ ಸದಸ್ಯೆಯರು ಈ ಸೇವೆ ಕಂಕಣಬದ್ಧರಾಗಿದ್ದಾರೆ.
ಜಿಲ್ಲಾಡಳಿತ ಮಾಡಿರುವ ವಸತಿ ಸಾಲದಿದ್ದರೇ ಸಮ್ಮೇಳನಕ್ಕೆ ಬರುವ ಮಹಿಳೆಯರನ್ನ ತಮ್ಮ ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಲು ಈ ತಂಡದ ಸದಸ್ಯೆಯರು ಸಿದ್ದರಾಗಿದ್ದಾರೆ. ಸಮ್ಮೇಳಕ್ಕೆ ಬರುವ ಮಹಿಳೆಯರ ಅನುಕೂಲಕ್ಕಾಗಿ ಕಿಟ್ಗಳನ್ನ ಸಹ ಈ ಸಮಿತಿ ನೀಡಲಿದೆ. ರಾಜ್ಯದಲ್ಲಿರುವ ಸಾಹಿತ್ಯಾಭಿಮಾನಿಗಳು ಸಮ್ಮೇಳನಕ್ಕೆ ಬಂದು ಯಶಸ್ವಿಗೊಳಿಸುವಂತೆ ಸಮಿತಿಯ ಸದಸ್ಯೆಯರು ಮನವಿ ಮಾಡಿದ್ದಾರೆ.
ಕಂಡಿದ್ದವು. ಇದೀಗ ಸಮ್ಮೇಳನಕ್ಕೆ ಬರುವ ಮಹಿಳೆಯರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಹಾವೇರಿ ಜಿಲ್ಲೆಯ ಸ್ತ್ರೀಶಕ್ತಿ ಸಮಿತಿ ಮುಂದೆ ಬಂದಿದೆ.
ಸಮಿತಿಯಲ್ಲಿ 500 ಕ್ಕೂ ಅಧಿಕ ಸ್ವಯಂಸೇವಕಿಯರಿದ್ದು ಸಮ್ಮೇಳನಕ್ಕೆ ಬರುವ ಮಹಿಳೆಯರಿಗೆ ಸೇವೆ ಸಲ್ಲಿಸಲು ಸನ್ನದ್ದರಾಗಿದ್ದಾರೆ. 500 ಜನ ಸ್ವಯಂ ಸೇವಕಿಯರು ಒಂದೇ ಬಣ್ಣದ ಸೀರೆಯುಟ್ಟು ಸಮ್ಮೇಳನಕ್ಕೆ ಬರುವ ಮಹಿಳೆಯರನ್ನ ಸ್ವಾಗತಿಸಲಿದ್ದಾರೆ. ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಈ ಸದಸ್ಯೆಯರು ನೋಡಿಕೊಳ್ಳಲಿದ್ದಾರೆ. ಸಮ್ಮೇಳನಕ್ಕೆ ಬರುವ ಮಹಿಳೆಯರ ಆರೋಗ್ಯ, ವಸತಿ, ಆಹಾರ ಮತ್ತು ನೀರು ಸೇರಿದಂತೆ ಯಾವುದೇ ಸೇವೆಗಳಿಗೆ ಕೊರತೆಯಾಗದಂತೆ ಮಹಿಳೆಯರ ಸಂಘ ನೋಡಿಕೊಳ್ಳಲಿದೆ.
ಅಷ್ಟೇ ಅಲ್ಲದೆ ಸಮ್ಮೇಳನಕ್ಕೆ ಬರುವ ಬಾಣಂತಿಯರಿಗೆ ತಮ್ಮ ಮಕ್ಕಳಿಗೆ ಹಾಲುಣಿಸಲು ಅವಕಾಶವಾಗುವಂತೆ ಸ್ವಯಂಸೇವಕಿಯರು
ಸಿದ್ದತೆ ಮಾಡಿಕೊಂಡಿದ್ದಾರೆ. ಬರ್ರಿ ನಮ್ಮೂರಿಗೆ ಬರ್ರಿ ಹಾವೇರಿಗೆ ಎಂದು ಮಹಿಳಾಮಣಿಗಳು ಸ್ವಾಗತ ಮಾಡಿದ್ದಾರೆ.
ಓಡಾಡಲು ಕಾರ್ ಸೇರಿದಂತೆ ವಿವಿಧ ವಾಹನಗಳ ವ್ಯವಸ್ಥೆಯನ್ನ ಸಹ ಸ್ತ್ರಿಶಕ್ತಿ ಸಮಿತಿ ಮಾಡಿಕೊಂಡಿದೆ. ಸಮ್ಮೇಳನಕ್ಕೆ ಬರುವ ಮಹಿಳಾ ಸಾಹಿತಿಗಳಿಗೆ ಮಹಿಳಾ ಲೇಕಕಿಯರಿಗೆ ಪ್ರತ್ಯೇಕ ವ್ಯವಸ್ಥೆಯನ್ನ ಮಾಡುತ್ತಿರುವದಾಗಿ ಸಮಿತಿಯ ಸದಸ್ಯೆಯರು ತಿಳಿಸಿದ್ದಾರೆ. ಈ ದಿನಗಳಲ್ಲಿ ಮಧುಮೇಹ ಮತ್ತು ರಕ್ತದೋತ್ತಡ ಸೇರಿದಂತೆ ವಿವಿಧ ರೀತಿಯ ಆರೋಗ್ಯ ಸಮಸ್ಯೆ ಎದುರಿಸುವ ಮಹಿಳೆಯರು ಸಮ್ಮೇಳನಕ್ಕೆ ಬರುತ್ತಾರೆ. ಅಂತವರಿಗಾಗಿ ಸಮಿತಿಯ ಸದಸ್ಯೆಯರು ವಿಶೇಷ ಕಾಳಜಿ ವಹಿಸಲಿದ್ದಾರೆ. ಒಂದೇ ಸಮವಸ್ತ್ರ ಧರಿಸಿರುವ ಮಹಿಳೆ ಸದಸ್ಯೆಯರು ಮುಂದೆ ಸಮ್ಮೇಳನಕ್ಕೆ ಬರುವ ಮಹಿಳೆಯರು ಸಂಪರ್ಕಿಸಿದರೆ ಸಾಕು ಸೇವೆ ಸಿಗಲಿದೆ. ಹಾವೇರಿ ಜಿಲ್ಲೆಯ 8 ಜಿಲ್ಲೆಗಳ ಸ್ತ್ರಿಶಕ್ತಿಸಮಿತಿಯ ಸದಸ್ಯೆಯರು ಈ ಸೇವೆ ಕಂಕಣಬದ್ಧರಾಗಿದ್ದಾರೆ.
ಜಿಲ್ಲಾಡಳಿತ ಮಾಡಿರುವ ವಸತಿ ಸಾಲದಿದ್ದರೇ ಸಮ್ಮೇಳನಕ್ಕೆ ಬರುವ ಮಹಿಳೆಯರನ್ನ ತಮ್ಮ ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಲು ಈ ತಂಡದ ಸದಸ್ಯೆಯರು ಸಿದ್ದರಾಗಿದ್ದಾರೆ. ಸಮ್ಮೇಳಕ್ಕೆ ಬರುವ ಮಹಿಳೆಯರ ಅನುಕೂಲಕ್ಕಾಗಿ ಕಿಟ್ಗಳನ್ನ ಸಹ ಈ ಸಮಿತಿ ನೀಡಲಿದೆ. ರಾಜ್ಯದಲ್ಲಿರುವ ಸಾಹಿತ್ಯಾಭಿಮಾನಿಗಳು ಸಮ್ಮೇಳನಕ್ಕೆ ಬಂದು ಯಶಸ್ವಿಗೊಳಿಸುವಂತೆ ಸಮಿತಿಯ ಸದಸ್ಯೆಯರು ಮನವಿ ಮಾಡಿದ್ದಾರೆ.