ಆ್ಯಪ್ನಗರ

ಹಾಳಾದ ಎಲೆಬಳ್ಳಿ, ಬಣಕಾರ ವೀಕ್ಷಣೆ

ರಟ್ಟೀಹಳ್ಳಿ: ಭಾರೀ ಮಳೆಗೆ ಹಾಳಾದ ರಟ್ಟೀಹಳ್ಳಿ ತಾಲೂಕಿನ ಎಲೆಬಳ್ಳಿ ತೋಟಗಳಿಗೆ ಮಾಜಿ ಶಾಸಕ ಯು.ಬಿ.ಬಣಕಾರ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.

Vijaya Karnataka 26 Aug 2019, 5:00 am
ರಟ್ಟೀಹಳ್ಳಿ: ಭಾರೀ ಮಳೆಗೆ ಹಾಳಾದ ರಟ್ಟೀಹಳ್ಳಿ ತಾಲೂಕಿನ ಎಲೆಬಳ್ಳಿ ತೋಟಗಳಿಗೆ ಮಾಜಿ ಶಾಸಕ ಯು.ಬಿ.ಬಣಕಾರ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web spoiled cabbage blanket view
ಹಾಳಾದ ಎಲೆಬಳ್ಳಿ, ಬಣಕಾರ ವೀಕ್ಷಣೆ


ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಟ್ಟೀಹಳ್ಳಿ ತಾಲೂಕಿನ ಗುಡ್ಡದಮಾದಾಪುರ, ಅಣಜಿ, ನಾಗವಂದ, ಹೊಸಕಟ್ಟಿ, ತಡಕನಹಳ್ಳಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ಎಲೆಬಳ್ಳಿ ತೋಟಗಳಲ್ಲಿ ನೀರು ನಿಂತು ಬೆಳೆಗಳು ಹಾಳಾಗಿವೆ. ಇದರಿಂದ ರೈತರು ಸಂಕಷ್ಟ ಎದುರಿಸಬೇಕಾಗಿದೆ. ಮತ್ತೆ ಎಲೆಬಳ್ಳಿ ತೋಟ ಮಾಡಬೇಕಾದರೆ 2-3 ವರ್ಷಬೇಕು ಎಂದರು.

ಎಲೆಬಳ್ಳಿ ಹಾನಿಗೆ ಸರಕಾರ ನೀಡುತ್ತಿರುವ ಪರಿಹಾರ ಬಹಳ ಕಡಿಮೆ ಇದೆ. ಹೆಚ್ಚಿನ ಪರಿಹಾರ ನೀಡುವಂತೆ ಸರಕಾರಕ್ಕೆ ಒತ್ತಾಯಿಸಲಾಗುವುದು. ತಾಲೂಕಿನಲ್ಲಿ ಹಾಳಾದ ತೋಟಗಾರಿಕೆ ಬೆಳೆಗಳ ಬಗ್ಗೆ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ವರದಿ ನೀಡುವಂತೆ ಸೂಚಿಸಲಾಗಿದೆ. ರಟ್ಟೀಹಳ್ಳಿ-ಹಿರೇಕೆರೂರು ತಾಲೂಕಿನಲ್ಲಿ ಆದ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಗಳ ಬಗ್ಗೆ ಸರಕಾರದ ಗಮನಕ್ಕೆ ತಂದು ಹೆಚ್ಚಿನ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಿ.ಎಲ್‌.ಡಿ.ಬ್ಯಾಂಕ್‌ ಮಾಜಿ ಅಧ್ಯಕ್ಷ ಮಂಜಪ್ಪ ಭೂಮಪ್ಪಳವರ, ಮಾಜಿ ತಾ.ಪಂ.ಸದಸ್ಯ ಆನಂದಪ್ಪ ಹಾದಿಮನಿ, ಎ.ಪಿ.ಎಂ.ಸಿ ನಿರ್ದೆಶಕ ಸಿದ್ದಪ್ಪ ಕರೇಗೌಡ್ರ, ತಾ.ಪಂ.ಸದಸ್ಯೆ ಸುಜಾತಾ ಕೊಟಗಿಮನಿ, ಮಂಜಪ್ಪ ಬೇವಿನಹಳ್ಳಿ, ವೀರಭದ್ರಚಾರಿ ಕಮ್ಮಾರ ಸೇರಿದಂತೆ ನಾನಾ ಗ್ರಾಮಗಳ ಎಲೆಬಳ್ಳಿ ಬೆಳೆಗಾರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ