ಆ್ಯಪ್ನಗರ

ಬ್ಯಾಡಗಿಯಲ್ಲಿ ಶ್ರೀರಾಮನವಮಿ ಸಂಭ್ರಮ

ಬ್ಯಾಡಗಿ : ವಿವಿಧ ಹಿಂದೂಪರ ಸಂಘಟನೆಗಳು ಭಾನುವಾರ ಪಟ್ಟಣದಲ್ಲಿ ಶ್ರೀರಾಮನವಮಿ ಹಬ್ಬವನ್ನು ಸಂಭ್ರಮ ಸಡಗರ ದಿಂದ ಆಚರಿಸಿದರು.

Vijaya Karnataka 15 Apr 2019, 5:00 am
ಬ್ಯಾಡಗಿ : ವಿವಿಧ ಹಿಂದೂಪರ ಸಂಘಟನೆಗಳು ಭಾನುವಾರ ಪಟ್ಟಣದಲ್ಲಿ ಶ್ರೀರಾಮನವಮಿ ಹಬ್ಬವನ್ನು ಸಂಭ್ರಮ ಸಡಗರ ದಿಂದ ಆಚರಿಸಿದರು.
Vijaya Karnataka Web HVR-14BYD2A


ಭಾನುವಾರ ಮಧ್ಯಾಹ್ನ 12 ಗಂಟೆಗೆ ಸ್ಥಳೀಯ ಮಾರುತಿ (ದೊಡ್ಡ) ದೇವಸ್ಥಾನದಿಂದ ಆರಂಭವಾದ ಬೃಹತ್‌ ಮೆರವಣಿಗೆಯು ಪಟ್ಟಣದ ಮುಖ್ಯರಸ್ತೆಯನ್ನು ಬಳಸಿಕೊಂಡ ಸುಭಾಷ್‌ ಸರ್ಕಲ್‌, ಹುಗಾರಗಲ್ಲಿ ವಾಲ್ಮೀಕಿ ಒಣೀ ಹಳೆ ಪುರಸಭೆ ಬನಶಂಕರಿ ರಸ್ತೆ, ಸೋಗಿಯವರ ಓಣಿ, ಚಾವಡಿ ಓಣಿಗಳಲ್ಲಿ ಸಂಚರಿಸಿ, ಮರಳಿ ಮಾರುತಿ ದೇವಸ್ಥಾನವನ್ನು ತಲುಪಿತು.

ರಾಮನವಮಿ ಅಂಗವಾಗಿ ಕಳೆದೊಂದು ವಾರದಿಂದ ಪಟ್ಟಣದೆಲ್ಲೆಡೆ ಶ್ರೀರಾಮನ ಕಟೌಟ್‌ ಸೇರಿದಂತೆ ಭಗವಾನ್‌ ರಾಮನ ಧ್ವಜಗಳನ್ನು ಕಟ್ಟಲಾಗಿತ್ತು, ಇಂದು ಒಟ್ಟು 2 ಟ್ರ್ಯಾಕ್ಟರ್‌ಗಳಲ್ಲಿ ಶ್ರೀ ರಾಮನ ಭಾವಚಿತ್ರ ಹಾಗೂ ಓಂಕಾರದ ಚಿತ್ರವನ್ನಿಟ್ಟು ಮೆರವಣಿಗೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ನಾಸಿಕ್‌ಡೋಲು ಸೇರಿದಂತೆ ವಿವಿಧ ವಾದ್ಯಮೇಳಗಳೊಂದಿಗೆ ಹಿಂ ದೂಪರ ಸಂಘಟನೆಯ ಯುವಕರು ಮೆರವಣಿಗೆಯುದ್ದಕ್ಕೂ ಸಾಗಿದರು.

ಶ್ರೀರಾಮನ ಆದರ್ಶಗಳು ಅವಶ್ಯಕ: ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ, ರೈತ ಮುಖಂಡ ಗಂಗಣ್ಣ ಎಲಿ ಆದರ್ಶ ಆಡಳಿತಕ್ಕೆ ಇನ್ನೊಂದು ಹೆಸರೇ ಶ್ರೀರಾಮನಾಗಿದ್ದು, ರಾಜಕೀಯ ಪಕ್ಷ ಗಳಿಂದ ಬಹು ಹಿಂದಿನಿಂದಲೂ ದೇಶದಲ್ಲಿ ರಾಮ ರಾಜ್ಯ ಸ್ಥಾಪನೆಗೆ ಪ್ರಯತ್ನಗಳು ನಡೆಸುತ್ತಾ ಬಂದಿವೆ, ಹೀಗಾಗಿ ಶ್ರೀರಾಮ ಪೂಜ್ಯನೀಯ ವ್ಯಕ್ತಿಯಾಗಿ ಹೊರ ಹೊಮ್ಮಿದ್ದು ಆತನ ಆದರ್ಶಗಳು ಪ್ರಸ್ತುತ ದಿನಗಳಲ್ಲಿಯೂ ಉಲ್ಲೇಖವಾಗುತ್ತಿವೆ ಎಂದರು.

ಬಸವರಾಜ ಛತ್ರದ ಮಾತನಾಡಿ, ಧರ್ಮದ ಉಳಿವು ಹಾಗೂ ಅಧರ್ಮದ ಅಂತ್ಯಕ್ಕಾಗಿ ಭೂಮಿ ಮೇಲೆ ಜನ್ಮವೆತ್ತಿದ ಅವತಾರ ಪುರುಷನಾಗಿ ಶ್ರೀ ರಾಮ ಹೊರಹೊಮ್ಮಿದ್ದು, ಹೀಗಾಗಿ ಆತನನ್ನು ಸನಾತನ ಹಿಂದೂ ಸಂಸ್ಕೃತಿಯ ಪ್ರತೀಕವೆಂದು ಭಾವಿಸಲಾಗುತ್ತಿದೆ, ಧರ್ಮದ ಹಾದಿ ಯಲ್ಲಿ ಸಾಗುವ ವ್ಯಕ್ತಿಗೆ ಎದುರಾಗುವ ಕಠಿಣ ಸವಾಲುಗಳು ಎದುರಾದರೂ ಕೊನೆಗೆ ಧರ್ಮಕ್ಕೆ ಗೆಲವು ನಿಶ್ಚಿತ ಎಂದ ಸತ್ಯವ ನ್ನು ಜಗತ್ತಿಗೆ ತಿಳಿಸಿಕೊಟ್ಟ ಮಹಾನ್‌ ಸತ್ಪುರಷ ಶ್ರೀರಾಮನಾಗಿದ್ದಾನೆ ಎಂದರು.

ಪಟ್ಟಣ ಕೇಸರಿಮಯ: ಶ್ರೀ ರಾಮ ನವಮಿ ಅಂಗವಾಗಿ ಪಟ್ಟಣದ ತುಂಬೆಲ್ಲ ಕೇಸರಿ ಬಣ್ಣದ ಶ್ರೀರಾಮ ಹಾಗೂ ಹನುಮಂತ ನಿರುವ ಪತ್ರಗಳನ್ನು ಹಚ್ಚಲಾಗಿತ್ತು. ಅಲ್ಲದೇ ಹಿಂದೂ ಕಾರ‍್ಯಕರ್ತರು ರಾಮನ ಚಿತ್ರವಿರುವ ಕೇಸರಿ ಬಣ್ಣದ ಶಾಲು ದೊಡ್ಡ ದೊಡ್ಡ ಧ್ವಜಗಳನ್ನು ಮೆರವಣಿಯಲ್ಲಿ ಹಿಡಿದು ಸಾಗಿದ್ದು ಪಟ್ಟಣ ಭಾನುವಾರ ಅಕ್ಷ ರಸಹ ಕೇಸರಿಮಯವಾಗಿತ್ತು.

ಕುಣಿದು ಕುಪ್ಪಳಿಸಿದ ಯುವಕರು: ಬಹುತೇಕ ಯವಕರಿಂದ ಕೂಡಿದ್ದ ಮೆರವಣಿಗೆಯಲ್ಲಿ ಶ್ರೀರಾಮನ ಜಪ ಹಾಗೂ ಧ್ಯಾನ ಕುರಿತ ವಿವಿಧ ಪೂರ್ವ ಧ್ವನಿಮುದ್ರಿತ ಹಾಡುಗಳನ್ನು ಬಿತ್ತರಿಸಲಾಯಿತು. ಮೆರವಣಿಗೆಯುದ್ದಕ್ಕೂ ಶ್ರೀರಾಮನ ಕುರಿತ ಹಾಡು ಗಳಿಗೆ ಯುವಕರು ಕುಣಿದು ಕುಪ್ಪಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ