ಆ್ಯಪ್ನಗರ

ರಾಜನಹಳ್ಳಿಯಿಂದ ರಾಜಧಾನಿಗೆ ಶ್ರೀಗಳ ಪಾದಯಾತ್ರೆ

ಕುಮಾರಪಟ್ಟಣ : ಕೇಂದ್ರ ಸರ್ಕಾರದ ಮಾದರಿಯಲ್ಲಿ ವಾಲ್ಮೀಕಿ ನಾಯಕ ಸಮಾಜಕ್ಕೆ ಶೇ, 7.5 ಮೀಸಲಾತಿಯನ್ನು ಕರ್ನಾಟಕ ಸರ್ಕಾರ ಜಾರಿಗೊಳಿಸಲು ಮುಂದಾಗಬೇಕೆಂದು ಒತ್ತಾಯಿಸಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದ ಮಹಾ ಸ್ವಾಮಿಗಳು ಭಾನುವಾರ ಕುಮಾರಪಟ್ಟಣದಿಂದ ಬೆಂಗಳೂರು ತನಕ ಪಾದಯಾತ್ರೆ ಬೆಳೆಸಿದರು.

Vijaya Karnataka 10 Jun 2019, 5:00 am
ಕುಮಾರಪಟ್ಟಣ : ಕೇಂದ್ರ ಸರ್ಕಾರದ ಮಾದರಿಯಲ್ಲಿ ವಾಲ್ಮೀಕಿ ನಾಯಕ ಸಮಾಜಕ್ಕೆ ಶೇ, 7.5 ಮೀಸಲಾತಿಯನ್ನು ಕರ್ನಾಟಕ ಸರ್ಕಾರ ಜಾರಿಗೊಳಿಸಲು ಮುಂದಾಗಬೇಕೆಂದು ಒತ್ತಾಯಿಸಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದ ಮಹಾ ಸ್ವಾಮಿಗಳು ಭಾನುವಾರ ಕುಮಾರಪಟ್ಟಣದಿಂದ ಬೆಂಗಳೂರು ತನಕ ಪಾದಯಾತ್ರೆ ಬೆಳೆಸಿದರು.
Vijaya Karnataka Web HVR-09 KPM 01 RAJANAHALLI
ಕುಮಾರಪಟ್ಟಣದಲ್ಲಿ ಭಾನುವಾರ ರಾಜನಹಳ್ಳಿ ಜಗದ್ಗುರು ಶ್ರೀ ಪ್ರಸನ್ನಾನಂದ ಮಹಾ ಸ್ವಾಮಿಗಳು ಪಾದಯಾತ್ರೆ ನಡೆಸಿದರು.


ಪಾದಯಾತ್ರೆ ಆರಂಭಿಸಿದ ಹಿನ್ನೆಲೆಯಲ್ಲಿ ನೆರೆದ ಭಕ್ತರ ಸಮ್ಮುಖದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಪರಿಶಿಷ್ಠ ಪಂಗಡದ ವಾಲ್ಮೀಕಿ ನಾಯಕ ಸಮಾಜಕ್ಕೆ ಕೇಂದ್ರ ಸರ್ಕಾರ ಎಲ್ಲ ವಲಯಗಳಲ್ಲಿ 7.5 ಮೀಸಲಾತಿ ಜಾರಿಯಲ್ಲಿದೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ಮೀಸಲಾತಿಯನ್ನು ಜಾರಿಗೊಳಿಸಿಲ್ಲ ಎಂದು ರಾಜನಹಳ್ಳಿ ಶ್ರೀ ವಾಲ್ಮೀಕಿ ಮಹಾಸಂಸ್ಥಾನದ ಜಗದ್ಗುರು ಶ್ರೀ ಪ್ರಸನ್ನಾನಂದ ಸ್ವಾಮಿಗಳು ಹೇಳಿದರು.

ಕುಮಾರಪಟ್ಟಣಕ್ಕೆ ಪ್ರವೇಶ ಮಾಡುವ ಮೊದಲಿಗೆ ಭಕ್ತಾದಿಗಳು ಜಾಂಜ್‌ ಮೇಳ ಹಾಗೂ ಮಹಿಳೆಯರು ಕುಂಭಪೂಜೆಯ ಮೂಲಕ ಸ್ವಾಗತ ಮಾಡಿಕೊಂಡರು. ಪುಣ್ಯಕೋಟಿ ಮಠದ ಶ್ರೀ ಜಗದೀಶ್ವರ ಸ್ವಾಮಿಗಳು, ಕೆಪಿಸಿಸಿ ಎಸ್‌ಟಿ ವಿಭಾಗದ ಅಧ್ಯಕ್ಷ ಟಿ ಈಶ್ವರ್‌, ಸಮಾಜದ ಅಧ್ಯಕ್ಷ ಚಂದ್ರಣ್ಣ ಬೇಡರ್‌, ನಾಗರಾಜ್‌ ಬಿ, ಎಚ್‌, ಹನುಮಂತಪ್ಪ ಚಳಗೇರಿ, ಹನುಮಂತಪ್ಪ ಎಚ್‌, ಸುರೇಶ ಗರಡಿಮನಿ, ಬಸವಣ್ಣೆಪ್ಪ ನಲವಾಗಲ,ಪರಮೇಶ ಚಿನ್ನಣ್ಣನವರ, ಯಲ್ಲಪ್ಪ ಹೊಸಮನಿ, ರಾಮಣ್ಣ ಮೇಡ್ಲೇರಿ, ಕೆಕೆ ಜಿ ರಾಮಣ್ಣ, ಮಹೇಶನಾಯಕ, ಪರಶುರಾಮ್‌ ಜಿ, ಎಚ್‌ ಎಸ್‌ ಶಿವಶಂಕರ್‌, ವಿವಿಧ ಜಿಲ್ಲೆಯ ಮುಖಂಡರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ