ಹಿರೇಕೆರೂರು: ರಟ್ಟೀಹಳ್ಳಿ ತಾಲೂಕಿನ ತಿಪ್ಪಾಯಿಕೊಪ್ಪ ಗ್ರಾಮದ ಹೊರವಲಯದಲ್ಲಿರುವ ಉದ್ಭವ ಹಳ್ಳದ ಶ್ರೀ ಬಸವಣ್ಣ ದೇವರ ದೇವಸ್ಥಾನದ ಆವರಣದಲ್ಲಿಫೆ.24ರಂದು ಹಳ್ಳದ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ಭಕ್ತರ ಆಶ್ರಯದಲ್ಲಿಹಳ್ಳದ ಶ್ರೀ ಬಸವಣ್ಣ ದೇವರ ಮೂರ್ತಿಗೆ ಅಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಅಂದು ಬೆಳಗ್ಗೆ 7.30ರಿಂದ 9ಗಂಟೆವರೆಗೆ ಶಂಕ್ರಯ್ಯ ಸೊರಟೂರ ಇವರ ನೇತೃತ್ವದಲ್ಲಿಬಸವಣ್ಣ ದೇವರ ಮೂರ್ತಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ಜರುಗಲಿದೆ. ನಂತರ 11.30ಕ್ಕೆ ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗಳಿಂದ ಆಶೀರ್ವಚನ ಜರುಗಲಿದೆ. ನಂತರ ಅನ್ನ ಪ್ರಸಾದ ವಿತರಣಾ ಕಾರ್ಯಕ್ರಮ ಜರುಗಲಿದೆ ಎಂದು ಟ್ರಸ್ಟ್ ಕಮಿಟಿ ಅಧ್ಯಕ್ಷ ಭೀಮಪ್ಪ ಬಣಕಾರ, ಲಕ್ಷಾಪತಿ ಬಣಕಾರ ತಿಳಿಸಿದ್ದಾರೆ.
ಹಳ್ಳದ ಶ್ರೀ ಬಸವಣ್ಣ ದೇವರ ಮೂರ್ತಿಗೆ ಅಭಿಷೇಕ
ಹಿರೇಕೆರೂರು: ರಟ್ಟೀಹಳ್ಳಿ ತಾಲೂಕಿನ ತಿಪ್ಪಾಯಿಕೊಪ್ಪ ಗ್ರಾಮದ ಹೊರವಲಯದಲ್ಲಿರುವ ಉದ್ಭವ ಹಳ್ಳದ ಶ್ರೀ ಬಸವಣ್ಣ ದೇವರ ದೇವಸ್ಥಾನದ ಆವರಣದಲ್ಲಿಫೆ.24ರಂದು ಹಳ್ಳದ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ಭಕ್ತರ ಆಶ್ರಯದಲ್ಲಿಹಳ್ಳದ ಶ್ರೀ ಬಸವಣ್ಣ ದೇವರ ಮೂರ್ತಿಗೆ ಅಭಿಷೇಕ ಹಾಗೂ
Vijaya Karnataka 23 Feb 2020, 6:24 pm