ಆ್ಯಪ್ನಗರ

ಶಿಗ್ಗಾವಿಯಲ್ಲಿ ಶೃಂಗೇರಿ ಶ್ರೀಗಳಿಗೆ ಭವ್ಯ ಸ್ವಾಗತ

ಶಿಗ್ಗಾವಿ : ಉತ್ತರ ಕರ್ನಾಟಕ ದಿಗ್ವಿಜಯ ಯಾತ್ರೆ ಅಂಗವಾಗಿ ಶಿಗ್ಗಾವಿ ಪಟ್ಟಣಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಶೃಂಗೇರಿ ಶಾರದಾ ಪೀಠದ ಶ್ರೀ ವಿದುಶೇಖರ ಭಾರತಿ ಮಹಾಸ್ವಾಮಿಗಳವರನ್ನು ಭಕ್ತರು ಭಕ್ತಿ, ಭಾವದಿಂದ ಗುರುವಾರ ಸಂಜೆ ಬರಮಾಡಿಕೊಂಡರು.

Vijaya Karnataka 9 Nov 2018, 6:00 pm
ಶಿಗ್ಗಾವಿ : ಉತ್ತರ ಕರ್ನಾಟಕ ದಿಗ್ವಿಜಯ ಯಾತ್ರೆ ಅಂಗವಾಗಿ ಶಿಗ್ಗಾವಿ ಪಟ್ಟಣಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಶೃಂಗೇರಿ ಶಾರದಾ ಪೀಠದ ಶ್ರೀ ವಿದುಶೇಖರ ಭಾರತಿ ಮಹಾಸ್ವಾಮಿಗಳವರನ್ನು ಭಕ್ತರು ಭಕ್ತಿ, ಭಾವದಿಂದ ಗುರುವಾರ ಸಂಜೆ ಬರಮಾಡಿಕೊಂಡರು.
Vijaya Karnataka Web sringeri sree is a great welcome to shiggai
ಶಿಗ್ಗಾವಿಯಲ್ಲಿ ಶೃಂಗೇರಿ ಶ್ರೀಗಳಿಗೆ ಭವ್ಯ ಸ್ವಾಗತ


ನಂತರ ವೆಂಕಟೇಶ್ವರ ದೇವಸ್ಥಾನದಲ್ಲಿ ಭಕ್ತರನ್ನುದ್ದೇಶಿಸಿ ಆರ್ಶೀವಚನ ನೀಡಿದ ಶ್ರೀಗಳು, ಮಾನವ ಕುಲಕ್ಕೆ ಮೊದಲು ಮೋಕ್ಷ ದ ರಾಜಮಾರ್ಗ ತೋರಿಸಿದವರು ಶಂಕರ ಭಗವತ್ಪಾದರು. ಅದ್ವೈತ ಸಿದ್ಧಾಂತದ ಮೂಲಕವೇ ಅವರು ನೀಡಿದ ಉಪದೇಶ ಇಂದಿಗೂ ಗುರುಭಕ್ತಿ, ಧರ್ಮ ಶ್ರದ್ಧೆ ಜಾಗೃತಗೊಳಿಸುತ್ತದೆ ಎಂದರು.

ಧರ್ಮಾಚರಣೆ ಬಹುಮುಖ್ಯ. ಅದು ಯಾವುದೇ ಧರ್ಮವಾಗಿರಲಿ. ಧರ್ಮ ಪಾಲನೆಯು ಭಕ್ತಿ ಮಾರ್ಗದ ಮೂಲಕ ಬದುಕಿನ ದಾರಿ ತೋರಿಸುತ್ತದೆ. ನಿತ್ಯ ದೇವರನ್ನು ಪ್ರಾರ್ಥಿಸಿ ಧರ್ಮಾಚರಣೆ ನಿರಂತರವಾಗಿಟ್ಟುಕೊಳ್ಳಬೇಕು. ಅಂದಾಗ ಧರ್ಮದ ರಕ್ಷ ಣೆ ಜತೆಗೆ ಮನುಕುಲದ ಉದ್ಧಾರ ಸಾಧ್ಯ ಎಂದರು.

ತಾಲೂಕು ವಿಪ್ರ ಸಮಾಜದಿಂದ ಆಯೋಜಿಸಿದ್ದ ಶ್ರೀಗಳ ಪಾದಪೂಜೆಯನ್ನು ಎಸ್‌.ಪಿ.ಜೋಶಿ ದಂಪತಿ ನೆರವೇರಿಸಿದರು. ಇದಕ್ಕೂ ಪೂರ್ವದಲ್ಲಿ ಶ್ರೀಗಳಿಗೆ ಪೂರ್ಣಕುಂಭ, ವೇದ ಘೋಷಗಳ ನಡುವೆ ಪುಷ್ಪಾರ್ಚನೆಯೊಂದಿಗೆ ಸ್ವಾಗತ ಮಾಡಲಾಯಿತು. ನಂತರ ನೆರೆದಿದ್ದ ನೂರಾರು ಭಕ್ತರು ಶಂಕರ ಸ್ತುತಿ ಪಠಿಸಿದರು.

ಮಾಜಿ ಸಂಸದ ಮಂಜುನಾಥ ಕುನ್ನೂರ, ಮುಖಂಡರಾದ ಎಂ.ಎಲ್‌.ದೇಶಪಾಂಡೆ, ಕೃಷ್ಣಭಟ್ಟ ಹುರಳಿಕೊಪ್ಪಿ, ಆರ್‌.ಆರ್‌.ದೇಶಪಾಂಡೆ, ವೆಂಕಟಾಚಲ ಗುಡಿ, ಭೋದರಾವ್‌ ಬೆಳಗಲಿ, ರಾಘವೇಂದ್ರ ದೇಶಪಾಂಡೆ, ಕಿರುತೆರೆ ನಟ ಶಶಿ ದೇಶಪಾಂಡೆ, ಶ್ರೀಕಾಂತ ಪೋತದಾರ, ದಿವಾಕರ ದಿಕ್ಷೀತ, ಪ್ರಕಾಶ ಕುಲಕರ್ಣಿ, ಕೆ.ಡಿ.ದೇಶಪಾಂಡೆ, ಕೃಷ್ಣ ಕೋಳಿವಾಡ, ಪವನ ಚಿಮ್ಮಲಗಿ ಸೇರಿದಂತೆ ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ