ಆ್ಯಪ್ನಗರ

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರರಿಗೆ ಸನ್ಮಾನ

ರಟ್ಟೀಹಳ್ಳಿ: ಪಟ್ಟಣದಲ್ಲಿರುವ ಶ್ರೀ ಕುಮದ್ವತಿ ಮಹಿಳಾ ಸಹಕಾರಿ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಯು.ಬಿ.ಬಣಕಾರ, ಇತ್ತೀಚೆಗೆ ಶಿವಾಚಾರ್ಯ ರತ್ನ ಪ್ರಶಸ್ತಿ ಪಡೆದ ಕಬ್ಬಿಣಕಂಥಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮಿಜಿ ಮತ್ತು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಹನುಮಂತಗೌಡ ಭರಮಣ್ಣನವರ ಮತ್ತು ವಿವಿಧ ಗಣ್ಯರಿಗೆ ಸನ್ಮಾನಿಸಲಾಯಿತು.

Vijaya Karnataka 7 Nov 2019, 5:00 am
ರಟ್ಟೀಹಳ್ಳಿ: ಪಟ್ಟಣದಲ್ಲಿರುವ ಶ್ರೀ ಕುಮದ್ವತಿ ಮಹಿಳಾ ಸಹಕಾರಿ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಯು.ಬಿ.ಬಣಕಾರ, ಇತ್ತೀಚೆಗೆ ಶಿವಾಚಾರ್ಯ ರತ್ನ ಪ್ರಶಸ್ತಿ ಪಡೆದ ಕಬ್ಬಿಣಕಂಥಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮಿಜಿ ಮತ್ತು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಹನುಮಂತಗೌಡ ಭರಮಣ್ಣನವರ ಮತ್ತು ವಿವಿಧ ಗಣ್ಯರಿಗೆ ಸನ್ಮಾನಿಸಲಾಯಿತು.
Vijaya Karnataka Web state warehouse corporation chairman ub bhankar felicitated
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರರಿಗೆ ಸನ್ಮಾನ


ಸನ್ಮಾನವನ್ನು ಸ್ವೀಕರಿಸಿದ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಮಾತನಾಡಿ, ಮಹಿಳೆಯರು ಕೇವಲ ಮನೆಗೆಲಸಕ್ಕೆ ಮಾತ್ರ ಸೀಮಿತವಾಗಿಲ್ಲಎಂಬುವುದನ್ನು ಇಲ್ಲಿನ ಕುಮದ್ವತಿ ಮಹಿಳಾ ಸಹಕಾರಿ ಸಂಘದವರು ತೊಡೆದು ಹಾಕಿ ಸಂಘಟನೆಯ ಮೂಲಕ ಸಹಕಾರಿ ಸಂಘವನ್ನು ಸ್ಥಾಪಿಸಿ ಉತ್ತಮ ಪ್ರಗತಿಯಿಂದ ಮುನ್ನೆಡೆಯುತ್ತಿರುವುದು ಶ್ಲಾಘನೀಯ ಕಾರ‍್ಯವಾಗಿದೆ ಎಂದು ಹೇಳಿದರು. ಇದೇ ವೇಳೆ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿಅತೀ ಹೆಚ್ಚು ಅಂಕ ಗಳಿಸಿದ ಗೌತಮಿ ದೊಡ್ಮನಿ, ಕೃಷಿ ಚಟುವಟಿಕೆಯಲ್ಲಿತೊಡಗಿರುವ ನಾಗರತ್ನಮ್ಮ ಕಟ್ಟೀಮನಿಯವರಿಗೆ ಸನ್ಮಾನಿಸಲಾಯಿತು.

ಸಹಕಾರಿ ಸಂಘದ ಅಧ್ಯಕ್ಷೆ ರೂಪಾ ಅಂಬ್ಲೇರ, ಉಪಾಧ್ಯಕ್ಷೆ ಶಾಂತಮ್ಮ ಹಾದಿಮನಿ, ಪ್ರಭಾವತಿ ಕುಲಕರ್ಣಿ, ನಿರ್ದೇಶಕರಾದ ಮಂಗಳಮ್ಮ ಅಂಗರಗಟ್ಟಿ, ಯಶೊದಮ್ಮ ಭರಮಣ್ಣನವರ, ಸವಿತಾ ವೆರ್ಣೇಕರ, ಪೂರ್ಣಿಮಾ ವೆರ್ಣೇಕರ, ಅಕ್ಕಮ್ಮ ಮುದಿಯಪ್ಪನವರ, ಮಾನಸ ಮಳಗೊಂಡರ, ಶೋಭಾ ಹೊಸಮನಿ, ಸರೋಜಮ್ಮ ಹುರಕಡ್ಲಿ, ಸುಜಾತಾ ಬಳಲು, ರೂಪಾ ಮಾಸೂರು, ನಾಗರತ್ನ ಕಟ್ಟಿಮನಿ ಗ್ರಾ.ಪಂ ಮಾಜಿ ಅಧ್ಯಕ್ಷ ಸುಭಾಸ ಹದಡೇರ, ಎಸ್‌.ಬಿ.ಪಾಟೀಲ, ಜಾಫರ ಖಾಜಿ, ಮಂಜುನಾಥ ಮಾಸೂರು,ಗಾಯತ್ರಿ ಹದಡೇರ, ಮಂಜು ತಳವಾರ, ಕವಿತಾ ಬಿದರಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ