ಆ್ಯಪ್ನಗರ

ಬೀದಿ ಬದಿ ವ್ಯಾಪಾರಿ ಚುನಾವಣೆ: ಅವಿರೋಧ ಆಯ್ಕೆ

ಗುತ್ತಲ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳ ಚುನಾವಣೆಯಲ್ಲಿ10 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Vijaya Karnataka 17 Dec 2019, 5:00 am
ಗುತ್ತಲ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳ ಚುನಾವಣೆಯಲ್ಲಿ10 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Vijaya Karnataka Web street side dealer election unanimous choice
ಬೀದಿ ಬದಿ ವ್ಯಾಪಾರಿ ಚುನಾವಣೆ: ಅವಿರೋಧ ಆಯ್ಕೆ


ಸರಕಾರದ ನಿರ್ದೇಶನದಂತೆ ಸುಮಾರು 89 ಸದಸ್ಯ ಬಲದ ಬೀದಿ ಬದಿ ವ್ಯಾಪ್ಯಾರಿಗಳ ಚುನಾವಣೆ ಪ.ಪಂ ಕಾರ್ಯಾಲಯದಲ್ಲಿಭಾನುವಾರ ಜರುಗಿತು. ಸಾಮಾನ್ಯ ಕ್ಷೇತ್ರದಿಂದ ಮಂಜುನಾಥಸ್ವಾಮಿ ಲಕ್ಷೆತ್ರ್ಮೕಶ್ವರಮಠ, ಮಹಾಂತಸ್ವಾಮಿ ಲಕ್ಷೆತ್ರ್ಮೕಶ್ವರಮಠ, ಮಹಿಳಾ ಸಾಮಾನ್ಯ ಕ್ಷೇತ್ರದಿಂದ ಮಂಗಳಮ್ಮ ಕೋರಿ, ಲಲಿತಾ ಅಂಗಡಿ, ರೇಣುಕಾ ಬಡಿಗೇರ, ಹಿಂದುಳಿದ ವರ್ಗದ ಕ್ಷೇತ್ರದಿಂದ ಬಸಪ್ಪ ಬಾರ್ಕಿ, ಪ.ಜಾ ನ ಕರಿಯಪ್ಪ ಕೋಟೇರ, ಪ.ಪಂ ವರ್ಗದಿಂದ ಶಿವಾನಂದ ಹಡಗಲಿ, ಅಲ್ಪ ಸಂಖ್ಯಾತ ಕ್ಷೇತ್ರದಿಂದ ನಜೀರಅಹ್ಮದ ಹಾಲಗಿ, ವಿಶೇಷಚೇತನರ ಮೀಸಲಿನಲ್ಲಿ ಶ್ರೀಕಾಂತ ಮಡಿವಾಳರ ಅವಿರೋಧವಾಗಿ ಆಯ್ಕೆಯಾದರು.

ಅವಿರೋಧವಾಗಿ ಆಯ್ಕೆಯಾದವರಿಗೆ ಚುನಾವಣಾಧಿಕಾರಿ ಎಂ.ಎಸ್‌ ರೇಣುಕಾ ಹಾಗೂ ಪ.ಪಂ ಮುಖ್ಯಾಧಿಕಾರಿ ಎಂ.ಕೆ ಮುಗಳಿ ಅಭಿನಂದಿಸಿದರು. ಈ ವೇಳೆ ಪ.ಪಂನ ಪ್ರ.ದ.ಸ ಬಸವರಾಜ ಗಡದವರ, ಸಮನ್ವ ಅಧಿಕಾರಿ ಜಯಮ್ಮ ಮ್ಯಾಗೇರಿ, ಗಣೇಶ ಚವ್ಹಾಣ, ಶರಣಪ್ಪ ಬಾಗಸರ, ಬೀದಿ ಬದಿ ವ್ಯಾಪಾರಿಗಳಾದ ಶಿವಣ್ಣ ಇಚ್ಚಂಗಿ, ನಟರಾಜ ಅಂಗಡಿ, ರಾಜು, ಗೋಪಾಲ ಬಡಿಗೇರ ಸೇರಿದಂತೆ ಅನೇಕರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ