ಆ್ಯಪ್ನಗರ

ಪ್ರಜಾ ಪರಿವರ್ತನಾ ಪಾರ್ಟಿ ಬೆಂಬಲಿಸಿ

ಸವಣೂರು :ಶಿಗ್ಗಾಂವ-ಸವಣೂರು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬಡವರ ಪರವಾಗಿರುವ ಪ್ರಜಾ ಪರಿವರ್ತನಾ ಪಾರ್ಟಿಯನ್ನು ಬೆಂಬಲಿಸಿ ಎಂದು ಪ್ರಜಾ ಪರಿವರ್ತನಾ ಪಾರ್ಟಿಯ ಅಭ್ಯರ್ಥಿ ಸಿಕಂದರ ಉಮರಸಾಬ ಹಾತಿವಾಲೆ ಹೇಳಿದರು.

Vijaya Karnataka 10 May 2018, 5:00 am
ಸವಣೂರು :ಶಿಗ್ಗಾಂವ-ಸವಣೂರು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬಡವರ ಪರವಾಗಿರುವ ಪ್ರಜಾ ಪರಿವರ್ತನಾ ಪಾರ್ಟಿಯನ್ನು ಬೆಂಬಲಿಸಿ ಎಂದು ಪ್ರಜಾ ಪರಿವರ್ತನಾ ಪಾರ್ಟಿಯ ಅಭ್ಯರ್ಥಿ ಸಿಕಂದರ ಉಮರಸಾಬ ಹಾತಿವಾಲೆ ಹೇಳಿದರು.
Vijaya Karnataka Web support for the transitional party karnataka election 2018
ಪ್ರಜಾ ಪರಿವರ್ತನಾ ಪಾರ್ಟಿ ಬೆಂಬಲಿಸಿ


ಬುಧವಾರ ಪಟ್ಟಣದಲ್ಲಿ ಡಾ.ವಿ.ಕೃ.ಗೋಕಾಕ ಸರ್ಕಲ್‌ನಿಂದ ಪಟ್ಟಣದ ಪ್ರಮುಖ ಬೀದಿಯಲ್ಲಿ ರೋಡ್‌ ಶೋ ಮೂಲಕ ಮತಯಾಚಿಸಿ ಮಾತನಾಡಿದರು.

ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷ ಗಳು ರೈತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ನಿರಂತರವಾಗಿ ಅನ್ಯಾಯ ಮಾಡುತ್ತಲೇ ಬಂದಿವೆ. ಇಂತಹ ರಾಷ್ಟ್ರೀಯ ಪಕ್ಷ ಗಳಿಗೆ ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುವ ಮೂಲಕ ಪ್ರಜಾ ಪರಿವರ್ತನಾ ಪಕ್ಷ ಕ್ಕೆ ಮತ ನೀಡಿ ಕ್ಷೇತ್ರದಲ್ಲಿ ರಾಜಕೀಯ ಹಾಗೂ ಸಾಮಾಜಿಕ ಸೇವೆಗೆ ಒಂದು ಹೊಸ ದಿಕ್ಕನ್ನು ಮತ್ತು ಚೈತನ್ಯವನ್ನು ನೀಡಬೇಕೆಂದು ಮನವಿ ಮಾಡಿದರು.

ಪಕ್ಷದ ರಾಷ್ಟ್ರೀಯ ಖಜಾಂಚಿ ಡಾ.ಸೈಯ್ಯದ ರೋಷನ್‌ ಮುಲ್ಲಾ ಮಾತನಾಡಿ, ಸರಕಾರಿ ಸ್ವಾಮ್ಯದಲ್ಲಿರುವ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ದಲಿತರ ಮೀಸಲಾತಿಯನ್ನು ಕಸಿಯಲಾಗುತ್ತಿದೆ. ಮಾನವ ಸಂಪತ್ತನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೇ ನಿರುದ್ಯೋಗಿಗಳನ್ನು ಸೃಷ್ಟಿಸುವ ಫ್ಯಾಕ್ಟರಿಯಾಗಿ ಈ ದೇಶ ರೂಪುಗೊಳ್ಳುತ್ತಿದೆ ಎಂದರು.

ಪಕ್ಷ ದ ಜಿಲ್ಲಾ ಅಧ್ಯಕ್ಷ ಎಂ.ಡಿ.ಕಾಲೇಬಾಗ, ತಾಲೂಕ ಅಧ್ಯಕ್ಷ ಫಕ್ಕೀರೇಶ ಹರಿಜನ, ಮುಖಂಡರಾದ ಫಯಾಜ್‌ ಅಳ್ನಾವರ, ಎಂ.ಎಚ್‌.ಬುರಬುರಿ, ಅಲ್ಲಾವುದ್ದೀನ ಬತ್ತೇರಿ, ಗೌಸಖಾನ ಸವಣೂರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ