ಆ್ಯಪ್ನಗರ

ಸಮಾಜ ಬದಲಾವಣೆಗೆ ಶರಣರ ಸಾಹಿತ್ಯ ಅವಶ್ಯ

ಸವಣೂರು: ಪ್ರಸ್ತುತ ಸಮಾಜದ ಬದಲಾವಣೆಗೆ ಶರಣರ ಸಾಹಿತ್ಯ ಅವಶ್ಯವಾಗಿದೆ ಎಂದು ನಿವೃತ್ತ ಉಪನ್ಯಾಸಕ ಕೆ.ಎಸ್‌.ಕೌಜಲಗಿ ಹೇಳಿದರು.

Vijaya Karnataka 25 Aug 2019, 5:00 am
ಸವಣೂರು: ಪ್ರಸ್ತುತ ಸಮಾಜದ ಬದಲಾವಣೆಗೆ ಶರಣರ ಸಾಹಿತ್ಯ ಅವಶ್ಯವಾಗಿದೆ ಎಂದು ನಿವೃತ್ತ ಉಪನ್ಯಾಸಕ ಕೆ.ಎಸ್‌.ಕೌಜಲಗಿ ಹೇಳಿದರು.
Vijaya Karnataka Web HVR-24SVR4


ಸವಣೂರು ಪಟ್ಟಣದ ಶ್ರೀ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ 173ನೇ ಶಿವಾನುಭವ ಕಾರ್ಯಕ್ರಮಕದಲ್ಲಿ ಪಾಲ್ಗೊಂಡು ಪ್ರಭುಲಿಂಗ ಲೀಲೆ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, 12ನೇ ಶತಮಾನದ ಬಸವಾದಿ ಪ್ರಮಥರ ವಚನಗಳನ್ನು ನಾವುಗಳು ಅರಿತುಕೊಂಡು ಅದನ್ನು ಬೇರೆಯವರಿಗೆ ತಿಳಿಸಿ ಹೇಳಿದಾಗ ಶರಣರ ಸಂದೇಶ ಅಜರಾಮರವಾಗಿ ಉಳಿಯುತ್ತದೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಕಲ್ಮಠದ ಮಹಾಂತ ಸ್ವಾಮೀಜಿ, ಸಕಲ ಧರ್ಮ ಸಾರಗಳನ್ನು ಒಳಗೊಂಡ ಈ ಶರಣರ ವಚನ ಸಾಹಿತ್ಯ ಮೂಲಕ ಸಂಸ್ಕಾರವಂತ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರೂ ಶಿರಸಾವಹಿಸಿ ಸಮಾಜಮುಖಿ ಕೆಲಸ ಮಾಡಬೇಕು ಎಂದು ಹೇಳಿದರು ಅಕ್ಕನ ಬಳಗದ ಅಧ್ಯಕ್ಷೆ ಶೋಭಾ ಚರಂತಿಮಠ ಅಧ್ಯಕ್ಷ ತೆ ವಹಿಸಿದ್ದರು. ರಮೇಶ ಮರೂಳ, ಪ್ರಭು ಅರಗೊಳ, ಮಾದೇವಗೌಡ ಪಾಟೀಲ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಪ್ರಸಾದ ಸೇವೆ ಸಲ್ಲಿಸಿದ ರಮೇಶ್‌ ವಾಲಿ ಅವರನ್ನು ಮಠದ ವತಿಯಿಂದ ಗೌರವಿಸಲಾಯಿತು. ಶ್ರೀಮತಿ ಅಕ್ಕಮ್ಮ ಹಾವಣಗಿ ಶ್ರೀಮತಿ ಪುಷ್ಪಾ ಬತ್ತಿ ಹಾಗೂ ಶಾಂತಾ ಈಳಗೇರ ಪ್ರಾರ್ಥನೆ ಸೇವೆ ಸಲ್ಲಿಸಿದರು .ಡಿ.ಎಫ್‌ .ಬಿಂದಲಗಿ ಹಾಗೂ ಸಿ.ವಿ.ಗುತ್ತಿಲ ನಿರ್ವಹಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ