ಆ್ಯಪ್ನಗರ

ವರ್ಗಾವಣೆಗೆ ತಡೆ, ಶಿಗ್ಗಾವಿಗೆ ನಾನೇ ತಹಸೀಲ್ದಾರ್‌: ಗಾಳಿ

ಶಿಗ್ಗಾವಿ: ''ತಹಸೀಲ್ದಾರ್‌ರನ್ನು ಎರಡು ವರ್ಷ ವರ್ಗಾವಣೆ ಮಾಡುವಂತಿಲ್ಲ. ನನ್ನ ವಿರುದ್ಧ ಯಾವುದೇ ದೂರುಗಳಿಲ್ಲ. ಆದರೂ ಕಾನೂನು ಬಾಹೀರವಾಗಿ ಗೃಹ ಸಚಿವರ ಶಿಫಾರಸು ಪತ್ರದ ಮೇರೆಗೆ ಸರಕಾರ ಮಾಡಿದ ನನ್ನ ವರ್ಗಾವಣೆಗೆ ತಡೆಯಾಜ್ಞೆ ತಂದು ಮತ್ತೇ ಅಧಿಕಾರ ಸ್ವೀಕರಿಸಿದ್ದೇನೆ'' ಎಂದು ತಹಸೀಲ್ದಾರ್‌ ಚಂದ್ರಶೇಖರ ಗಾಳಿ ತಿಳಿಸಿದರು.

Vijaya Karnataka 8 Feb 2020, 5:00 am
ಶಿಗ್ಗಾವಿ: ''ತಹಸೀಲ್ದಾರ್‌ರನ್ನು ಎರಡು ವರ್ಷ ವರ್ಗಾವಣೆ ಮಾಡುವಂತಿಲ್ಲ. ನನ್ನ ವಿರುದ್ಧ ಯಾವುದೇ ದೂರುಗಳಿಲ್ಲ. ಆದರೂ ಕಾನೂನು ಬಾಹೀರವಾಗಿ ಗೃಹ ಸಚಿವರ ಶಿಫಾರಸು ಪತ್ರದ ಮೇರೆಗೆ ಸರಕಾರ ಮಾಡಿದ ನನ್ನ ವರ್ಗಾವಣೆಗೆ ತಡೆಯಾಜ್ಞೆ ತಂದು ಮತ್ತೇ ಅಧಿಕಾರ ಸ್ವೀಕರಿಸಿದ್ದೇನೆ'' ಎಂದು ತಹಸೀಲ್ದಾರ್‌ ಚಂದ್ರಶೇಖರ ಗಾಳಿ ತಿಳಿಸಿದರು.
Vijaya Karnataka Web tahsildar i am a barrier to shifting
ವರ್ಗಾವಣೆಗೆ ತಡೆ, ಶಿಗ್ಗಾವಿಗೆ ನಾನೇ ತಹಸೀಲ್ದಾರ್‌: ಗಾಳಿ


ಶುಕ್ರವಾರ ಪಟ್ಟಣದ ತಹಸೀಲ್ದಾರ್‌ ಕಚೇರಿಯಲ್ಲಿಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ''ಶಿಗ್ಗಾವಿ ತಾಲೂಕು ದಂಡಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಬರೋಬ್ಬರಿ 1 ವರ್ಷ 13 ದಿನಗಳಾಗಿವೆ. ಕಾನೂನು ಪ್ರಕಾರ ಎರಡು ವರ್ಷ ವರ್ಗಾವಣೆ ಮಾಡುವಂತಿಲ್ಲ. ದಿಢೀರ್‌ ನಡೆದ ಸಿಂಗಲ್‌ ವರ್ಗಾವಣೆಗೆ ತಡೆಯಾಜ್ಞೆ ಸಿಕ್ಕಿದೆ. ಕಾನೂನುಕ್ಕಿಂತ ಯಾರು ದೊಡ್ಡವರಲ್ಲ'' ಎಂದು ಪರೋಕ್ಷವಾಗಿ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

''ಸರಕಾರದ ಆದೇಶದನ್ವಯ ಫೆ.3 ರಂದು ಸಂಜೆ 7ಕ್ಕೆ ನೂತನ ತಹಸೀಲ್ದಾರ ಪ್ರಕಾಶ ಕುದರಿ ಅವರಿಗೆ ಕಾನೂನು ಪ್ರಕಾರ ಅಧಿಕಾರ ಹಸ್ತಾಂತರ ಮಾಡಿದ್ದೇನೆ. ಆದರೆ, ನೂತನ ತಹಸೀಲ್ದಾರ್‌ರು ಇಲ್ಲಿಯ ಭೌಗೋಳಿಕ ವಾಸ್ತವ ಅರಿತುಕೊಳ್ಳದೆ ಫೆ.6 ರಂದು ಸುದ್ದಿಗೋಷ್ಠಿ ನಡೆಸಿ ತಪ್ಪು ಮಾಹಿತಿಗಳನ್ನು ಸಾರ್ವಜನಿಕವಾಗಿ ರವಾನಿಸಿದ್ದಾರೆ'' ಎಂದು ಬೇಸರ ವ್ಯಕ್ತಪಡಿಸಿದರು.

''ನೆರೆಯಿಂದ ಮನೆ ಕಳೆದಕೊಂಡ ಫಲಾನುಭವಿಗಳಿಗೆ ನ್ಯಾಯಸಮ್ಮತವಾಗಿ ಪರಿಹಾರ ನೀಡಲಾಗಿದೆ ಹೊರತು, ಅನರ್ಹರನ್ನು ಪರಿಹಾರದಿಂದಲೇ ಕಿತ್ತು ಹಾಕಲಾಗಿದೆ. ಗ್ರಾಮಲೆಕ್ಕಾಧಿಕಾರಿ ಪಾಸ್ವರ್ಡ್‌ ದುರ್ಬಳಕೆ ಮಾಡಿಕೊಂಡು ಅನರ್ಹರ ಫಲಾನುಭವಿಗೆ 'ಬಿ' ಕೆಟಗಿರಿ ಮನೆ ನೀಡಿದ ವಾಲಿಕಾರ ಮಾಲತೇಶ ತಳವಾರ ಎಂಬಾತನ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗಿದೆ'' ಎಂದರು.

''ಕರ್ತವ್ಯ ನಿರ್ಲಕ್ಷತ್ರ್ಯ, ಬೇಜವಾಬ್ದಾರಿ ತೊರಿದ ಮೂವರು ಗ್ರಾಮ ಲೆಕ್ಕಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಎಲ್ಲಸತ್ಯಾಂಶ ತಿಳಿದುಕೊಳ್ಳದೆ ತಹಸೀಲ್ದಾರ್‌ರು ಗ್ರಾಮ ಲೆಕ್ಕಾಧಿಕಾರಿಗಳೇ ತಪ್ಪು ಮಾಡಿದ್ದಾರೆ ಎಂದು ಸಾರ್ವಜನಿಕವಾಗಿ ಸುಳ್ಳು ಸಂದೇಶ ರವಾನಿಸಿದ್ದು ಸತ್ಯಕ್ಕೆ ದೂರವಾದ ಸಂಗತಿ.''

''ಬೆಳೆ ಮತ್ತು ಮನೆಗಳ ಪರಿಹಾರದಲ್ಲಿಅವ್ಯವಹಾರದ ಶಂಕೆ ವ್ಯಕ್ತಪಡಿಸಿ ಜಿಲ್ಲಾಕೆಡಿಪಿ ಸಭೆಯಲ್ಲಿಜಿಲ್ಲಾಉಸ್ತುವಾರಿ ಸಚಿವರ ಆದೇಶದಂತೆ ತನಿಖೆ ನಡೆದಿದೆ. ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿಗಳಿಗೆ ಶಿಕ್ಷೆಯಾಗುತ್ತದೆ. ಈ ಹಂತದಲ್ಲಿದ್ದರೂ ಸುದ್ದಿಗೋಷ್ಠಿಯಲ್ಲಿತಪ್ಪು ಮಾಹಿತಿ ರವಾನಿಸಿದ್ದು ಬೇಸರ ತಂದಿದೆ. ನಾನು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದೇನೆ. ಕೆಲವೊಂದು ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಸಚಿವರಲ್ಲಿಮನವಿ ಮಾಡಿಕೊಂಡರೂ ಸ್ಪಂದಿಸುತ್ತಿಲ್ಲ. ಭೇಟಿಗೆ ಸಮಯ ನೀಡುತ್ತಿಲ್ಲಮನಿವಿಗೂ ಕ್ಯಾರೆ ಎನ್ನುತ್ತಿಲ್ಲ.''

''ಬೆಳೆ ನಷ್ಟ ಪರಿಹಾರ ಮೊತ್ತ ವಿತರಣೆಯಲ್ಲಿಒಂದಿಷ್ಟು ಸಮಸ್ಯೆಯಾಗಿದೆ. ಬ್ಯಾಂಕ್‌ ಅಧಿಕಾರಿಗಳ ತಪ್ಪಿನಿಂದಲೂ ಅರ್ಹ ರೈತರಿಗೆ ಅನ್ಯಾಯವಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳ ಕೈಚಳಕದಿಂದಲೂ ಬೇರೆಯೊಬ್ಬರ ಪರಿಹಾರ ಮೊತ್ತ ವಿತರಣೆಯಾಗಿದೆ. ತಪ್ಪು ಮಾಡಿದ ಗ್ರಾಮಲೆಕ್ಕಾಧಿಕಾರಿ ವಿರುದ್ಧ ಕ್ರಮಕೈಗೊಳ್ಳಲಾಗಿದೆ'' ಎಂದು ಗಾಳಿ ಸ್ಪಷ್ಟಪಡಿಸಿದರು.

ಮತ್ತೆ ತಹಸೀಲ್ದಾರ್‌ರಾಗಿ ಅಧಿಕಾರ
ಫೆ.3 ರಂದು ನೂತನ ತಹಸೀಲ್ದಾರ್‌ರಾಗಿ ಪ್ರಕಾಶ ಕುದರಿ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರ ಹಸ್ತಾಂತರ ಮಾಡಿದ್ದ ತಹಸೀಲ್ದಾರ್‌ ಚಂದ್ರಶೇಖರ ಗಾಳಿ ವರ್ಗಾವಣೆಗೆ ತಡೆಯಾಜ್ಞೆ ತರುವ ಮೂಲಕ ಮತ್ತೇ ಫೆ.6 ರಂದು ಶಿಗ್ಗಾವಿ ತಾಲೂಕು ದಂಡಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ